ಕಾಲಿಯಾನಲ್ಲಿದೆ ಕಾರ್ಪೋರೇಟ್ ಪಾಠ !



ಈತ ಕಾಲಿಯಾ ಗೋಸಾಯಿ. ದಾವಣಗೆರೆ ಶಾಮನೂರು ರಿಂಗ್  ರೋಡಿನಲ್ಲಿ  ಕೈಮಾಡಿ ಕಾರ್ ನಿಲ್ಲಿಸಿದ. ಕೈಯಲ್ಲಿ ಒಂದು ಕಬ್ಬಿಣದ ಪಟ್ಟಿ, ಅದನ್ನು ಕಾಯಿಸಲು ಡಬ್ಬಿಯ ಸಿಗಡಿ. ಸಿಗಡಿಯು ಅಗ್ನಿಹೋತ್ರಿಗಳ ಮನೆಯ ಅರ್ಣವದಂತೆ ಯಾವಾಗಲೂ ಉರಿಯುತ್ತಿರುತ್ತದೆ. ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಮೂರು ಹೆಣ್ಣು ಮಕ್ಕಳು ಸೇರಿ ಐವರ ಕುಟುಂಬದ ನೋಗವನ್ನು ಎಳೆಯುವ ಕಾರ್ ರಿಪೇರಿ ಮೆಕ್ಯಾನಿಕ್ ಕೆಲಸ ಇವನದ್ದು.
ಸಣ್ಣ ಚೌಕಾಶಿ ಬಳಿಕ ಟ್ರಾಫಿಕ್ ಸಂದಿಯಲ್ಲಿ ಸಿಕ್ಕಿ ಕಿತ್ತುಹೋದ ಕಾರಿನ ಎರಡು ಬಂಪರ್ ರಿಪೇರಿಗೆ 200 ರೂ.ಗೆ ಸೆಟಲ್ ಆಗಿ ತಕ್ಷಣ ಕೆಲಸ ಸ್ಟಾರ್ಟ ಮಾಡಿದ. ಅಲ್ಲಿಯೇ ಅಕ್ಕಪಕ್ಕದಲ್ಲಿದ್ದ  ಪ್ಲೈಉಡ್ ಹಾಗೂ ಕಟ್ಟಿಗೆ ಕಾಗದದ ಚೂರು ಸೇರಿಸಿ ಬೆಂಕಿಯಲ್ಲಿ  ಕಬ್ಬಿಣ ಬಿಸಿ ಮಾಡಿ, ಕಿತ್ತು ಬಂದ ಮೂಲೆಗೆ ಮೊಳೆ ಹೊಡೆದು ತೀಡಲು ಆರಂಭಿಸಿದ.
ಈ ಜನರು ಮೊದ ಮೊದಲು ಊರೂರು ಸುತ್ತಿ  ಪ್ಲಾಸ್ಟಿಕ್ ಬಕೆಟ್ ರಿಪೇರಿಗೆ ಮಾಡುತ್ತಿದ್ದರಂತೆ. ಹತ್ತು ವರ್ಷದ ಹಿಂದೆ ಊರೂರು 
ಸುತ್ತಿಕೊಂಡು ಒಡೆದ ಬಕೆಟ್‌ಗಳಿಗೆ ಸುಂದರವಾಗಿ  ತೇಪೆ ಹಾಕಿ ಸರಿಮಾಡುತ್ತಿದ್ದರು. ಯೂಸ್ ಎಂಡ್ ಥ್ರೋ ಜಮಾನದಲ್ಲಿ ಈಗ ಯಾವನೂ ಇವರನ್ನು ಬಕೆಟ್ ರಿಪೇರಿಗೆ ಕರೆಯುತ್ತಿಲ್ಲ. ಒಮ್ಮೆ ಬಕೆಟ್ ಒಡೆದರೆ ಅದು ಕಸದ ಬುಟ್ಟಿಯನ್ನು ಸೇರುತ್ತದೆ. ಆದರೆ ಆ ನೈಪುಣ್ಯತೆಯೊಂದಿಗೆ ಮೊಳೆ ಜೋಡಣೆಯ ಹೆಚ್ಚಿನ ಸ್ಕಿಲ್ ಕಲಿತು ಅಟೊ ಇಂಡಸ್ಟ್ರೀಯಲ್ಲಿ ಇವರು  ಕೆಲಸ ಕಂಡುಕೊಂಡಿದ್ದಾರೆ. ಬದಲಾದ ವೃತ್ತಿ ಚಿತ್ರದ ಬಲಿಪಶುಗಳಾಗದೆ, ಹೊಸ ರೀತಿಯಲ್ಲಿ ಬೇಡಿಕೆ ಪಡೆಯುತ್ತಿದ್ದಾರೆ. 
ಗೋಸಾಯಿ ಎಂಬುದು ಈ ಭಾಗಕ್ಕಂತೂ ಒಂದು ಅಲೆಮಾರಿ ಜನಾಂಗ. ತನ್ನ ಭಾಷೆಯೂ ಗೋಸಾಯಿ ಎಂದು ಆತ ಹೇಳುತ್ತಾನೆ. ಕನ್ನಡ ಬರುತ್ತದೆ. ಮಕ್ಕಳು ಕನ್ನಡ ಶಾಲೆಗೆ ಹೋಗುತ್ತಾರೆ. ಕಳೆದ 20 ವರ್ಷದಿಂದ ಇಲ್ಲಿ ಇದ್ದಾರೆ. ಹಳೆ ದಾವಣಗೆರೆಯ ದುಗ್ಗಮ್ಮನ ಗುಡಿಯ ಸಮೀಪ ಇವರದೊಂದು ಗಲ್ಲಿಯೆ ಇದ್ದುಘಿ, ರಿಪೇರಿಯೇ ಇವರ ಕೆಲಸ. ಜೀವನ ನಿರ್ವಹಣೆ ಇವರಿಗೆ ಕಷ್ಟವೇ ಅಲ್ಲ.
‘‘ಸಮೀಪದ ಹರಿಹರ, ಹಾವೇರಿ, ಹುಬ್ಬಳ್ಳಿ, ದೆಹಲಿ, ಚಂಡೀಗಢ, ಕಾಶ್ಮೀರ್‌ದ ತನಕ ಎಲ್ಲೆಡೆ  ನಮ್ಮವರು ಇದ್ದಾರೆ’’  ಬೆಂಗಳೂರಲ್ಲೂ  ವಿಜಯ ನಗರ, ಅಲಸೂರು ಎಲ್ಲ  ಹೆಸರು ಹೇಳಿದ ಕಾಲಿಯಾ. ಎಲ್ಲೆಡೆ ರಸ್ತೆಯಲ್ಲಿ ಓಡಾಡಿಕೊಂಡು ಕಾರ್ ಬಂಪರ್ ರಿಪೇರಿ, ಬೆಂಡ್ ತಡಗೆಯುವುದನ್ನು ಈ ಜನ ಮಾಡುತ್ತಾರೆ. ತಾವು ಲಕ್ಷ್ಮೀ ಆರಾಧಕರು ದಾವಣಗೆರೆಯಲ್ಲಿಯೂ ತಾವು ಆರಾಧಿಸುವ ಲಕ್ಷ್ಮೀ ಗುಡಿ, ಗೋಸಾಯಿಗಲ್ಲಿ ಇರುವ ಬಗ್ಗೆ ಹೇಳಿದ. ಇಷ್ಟು ಕತೆ ಹೇಳುವಷ್ಟರಲ್ಲಿ ರಿಪೇರಿ ಕೆಲಸವೂ ಮುಗಿದು ಪೇಮೆಂಟ್ ಪಡೆದು ಹೋದ ಕಾಲಿಯಾ ಗೋಸಾಯಿ ಉದ್ಯೋಗವು ಒಂದು ರೀತಿಯಲ್ಲಿ  ನೈಪುಣ್ಯತೆ, ಒನ್ನೊಂದು ಅರ್ಥದಲ್ಲಿ ಸೇಲ್ಸ್. ಗ್ರಾಹಕರನ್ನು ಕರೆದು, ನಯವಾಗಿ ಅವರಿಗೆ ಮನವರಿಕೆ ಮಾಡಬೇಕು. ಕೊಳಕು ಬಟ್ಟೆ ಈತನ ಯೂನಿಾರಮ್. ತಂತಿಗಳನ್ನುಘಿ, ನೆಟ್‌ಗಳನ್ನು ತಿರುವಿ ಬೆರಳುಗಳೂ ಕಬ್ಬಿಣದಷ್ಟು ಒರಟಾಗಿವೆ. ಕಾರ್ ಮೆಕಾನಿಕ್‌ಗಳ ಹಾಗೆ ಮನೆಗೆ ಹೋಗಿ ಯೂನಿಾರ್ಮ್, ಟ್ರಂಕ್ ಒಂದೆಡೆ ಇಟ್ಟು  ಸ್ನಾನ ಮಾಡಿ ಪಾಶ್ ಆಗುತ್ತಾನೆ.
‘ಸಾಬ್’ ಎಂದೇ ಮಾತಾಡಿಸುವುದು ಈತನ ಭಾಷೆ.  ಹಾಗೆಯೇ ಅಪ್ಪಟ ವ್ಯವಹಾರದ ಘಾಟಿ ಮನುಷ್ಯ. ಇವರು ಮಾಡುವ ಕೆಲಸದ ಗುಣಮಟ್ಟ  ಬಗ್ಗೆ ಕೆಲವು ಅಭಿಪ್ರಾಯ ಇದೆ. ದುಬಾರಿ ಅಲ್ಲಘಿ, ತಕ್ಷಣ ಮಾಡಿಕೊಡುತ್ತಾರೆ ಎಂಬು ದಲ್ಲದೆ,  ದುಬಾರಿ ಕಾರಿಗೆ ಬೇಕಾದ ನಯ ನಾಜೂಕು ಇವರಲ್ಲಿ ಇಲ್ಲ ಎಂಬುದಾಗಿಯೂ ಕೆಲವು ಅಭಿಪ್ರಾಯ ಇದೆ. ಯಾವೊಬ್ಬನೂ ಮುಂದೆ ತನ್ನ ಮಗ ಇಂಥ ವೃತ್ತಿ ನಿರತನಾಗಲಿ ಎಂದುಕೊಳ್ಳುವುದಿಲ್ಲ ನಿಜ. 
ಆದರೆ ಬದಲಾವಣೆಗೆ ಹೊಂದಿಕೊಳ್ಳುವ ಇವರ ಜಾಣ್ಮೆ, ಮಲ್ಟಿ ಸ್ಕಿಲ್, ಮೂಲ ವೃತ್ತಿಯಿಂದ ತುಸು ಬದಲಾಗಿ ಬದಲಾವಣೆಗೆ ಹೊಂದಿಕೊಂಡು ಯಶಸ್ವೀ  ಜೀವನೋಪಾಯ ಕಂಡುಕೊಳ್ಳಬೇಕು ಎಂಬ ನೀತಿ ಪಾಠಕ್ಕೆ ಮಾತ್ರಿ ಇವರು ಉತ್ತಮ ನಿದರ್ಶನ. ಅಷ್ಟಕ್ಕೂ ಬೆಂಗಳೂರು, ಮುಂಬೈ, ವಾಷಿಂಗ್‌ಟನ್‌ಗಳಲ್ಲಿ  ಕಾರ್ಪೊರೇಟ್ ಕಂಪೆನಿಗಳು, ಸ್‌ಟಾ ವೇರ್ ಉದ್ಯಮವೂ ರೆಸಾರ್ಟ್‌ಗಳಲ್ಲಿ  ತಮ್ಮ ಸಿಬ್ಬಂದಿಗೆ ಇದನ್ನೇ ಪಾಠ ಮಾಡುತ್ತವೆ ತಾನೆ.
-ಸದಾನಂದ ಹೆಗಡೆ






Related Posts
Previous
« Prev Post