ಶಂಕರಾಭರಣದಲ್ಲಿ "ದಿಲ್ ಹೆ ಛೋಟಾಸಾ.'ಹಾಡು !

ಶಂಕರಾಭರಣದಲ್ಲಿ "ದಿಲ್ ಹೆ ಛೋಟಾಸಾ.'ಹಾಡು !
-ಸದಾನಂದ ಹೆಗಡೆ ಹರಗಿ
ಪೋಗದೀರೆಲೋ ರಂಗಾ ಬಾಗಿಲಿಂದಾಚೆ... ಮತ್ತು ದಿಲ್ ಹೆ ಛೋಟಾಸಾ..ಛೋಟಿಸೀ ಆಶಾ.. ಇವೆರಡರ ನಡುವಿನ ಸಾಮ್ಯ ಏನು ? ಉತ್ತರ ಸರಳವಾಗಿದೆ. ಇವೆರಡೂ ಸಿನಿಮಾ ಹಾಡುಗಳು. ಮೊದಲನೆಯದು ಡಾ. ರಾಜ್ ಅಭಿನಯದ ಹೊಸ ಬೆಳಕು ಚಿತ್ರ. ಇನ್ನೊಂದರ ಮೂಲ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ ರೋಜಾ. ಪ್ರತೀ ಹಾಡನ್ನು ಒಂದೆರಡು ನಿಮಿಷ ಹಾಡಿ ಅವುಗಳ ಗತಿಯ ಪ್ರಸ್ತುತಿ. ಈ ಬಗೆಯ ಹಾಡುಗಳ ರಸಯಾತ್ರೆ ನಡೆದದ್ದು ಕಳೆದ ಭಾನುವಾರ.
ವಿದ್ವಾನ್ ಮೂಧರು ಬಾಲಸುಬ್ರಹ್ಮಣ್ಯ ನೇತೃತ್ವದಲ್ಲಿ ಹಾಡುಗಳ ಪರಸ್ಪರ ಸಾಮ್ಯದ ಎಳೆ ಎಳೆಯನ್ನು ಬಿಡಿಸಿ ಧ್ವನಿಗೂಡಿಸಿದವರು ಉದಯೋನ್ಮುಖ ಗಾಯಕಿಯರಾದ ಉಷಾ ಮತ್ತು ದೀಕ್ಷಾ. ಈ ವರ್ಷ ಕರ್ಣಾಟಕ ಸಂಗೀತ ಪ್ರಿಯರಿಗೆ ಮುದ ನೀಡಿದ ಮಂಗಳೂರು ಸಂಗೀತೋತ್ಸವ(ಡಿ.27-29)ದಲ್ಲಿ ಸಮಾರೋಪಕ್ಕೆ ಮೊದಲು ನಡೆದ ರಾಗ ಜ್ಞಾನ ಸೌರಭ ಎಂಬ ವಿಶಿಷ್ಟ ಕಾರ್ಯಕ್ರಮ ಅದು.
ದಾಸರ ಪದ, ನೃತ್ಯಗಳಲ್ಲಿ ಬರುವ ತಿಲ್ಲಾನಗಳಿಂದ ಶುರುವಾಗಿ, ಕುವೆಂಪು ಅವರ ಜನಪ್ರಿಯ ಬಾವಗೀತೆ "ಮುಚ್ಚುಮರೆ ಇಲ್ಲದೆಯೆ.. ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೆ' ಸಾಲುಗಳು, ಲಕ್ಷ್ಮೀಷ ಕವಿಯ ಮಹಾಬಾರತದಲ್ಲಿ ಭೀಷ್ಮ ವಿಜಯದ ಗಮಕ, ಸ್ವಾತಿ ತಿರುನಾಳ್ ರಚನೆಯ ನೊಟ್ಟುಸ್ವರ(ವೆಸ್ಟರ್ನ್), ಕೇರಳದ ಓಣಂನಲ್ಲಿ ಬಾಲಕಿಯರು ಸಾಂಪ್ರದಾಯಿಕ ಲಂಗ ಧರಿಸಿ ಹಾಡುವ "ಕೈದ ಪೂಮಣಿ ಮೆಂಡಿ ಚಂಚಲಾಕ್ಷಿ..' ಎಸ್ಪಿ ಹಾಡಿದ.. ತೆಲುಗು ಮೂಲದ "ಓಂ ಕಾರ ನಾದಾನು ಸಂಧಾನಮೇ ರಾಗಮು..' ಹೀಗೆ ನೂರಾರು ಹಾಡುಗಳನ್ನು ಈ ಸಾಲಿಗೆ ಸೇರಸಿ, ಹಾಡಿ ನೆರೆದಿದ್ದ ಬೃಹತ್ ಪ್ರೇಕ್ಷಕ ವರ್ಗದಲ್ಲಿ ಶಾಸತ್ರೀಯ ಹಾಗೂ ಲಘು ಸಂಗೀತದ ಲಿಂಕ್ ತೋರಿಸಿ ಸ್ವರದ ಸ್ವಾರಸ್ಯವನ್ನು ಅನಾವರಣ ಮಾಡಿದರು.
ಇದೆಲ್ಲದರ ಮೂಲ ಇರುವುದು ಶಂಕರಾಭರಣ ಎಂಬ ಕಣರ್ಾಟಕ ಸಂಗೀತದ ಪ್ರಸಿದ್ಧ ಮೇಳರಾಗದಲ್ಲಿ. ಇದೇ ರಾಗದ ಹೆಸರಲ್ಲಿ ತೆಲುಗಿನಲ್ಲಿ ಒಂದು ಸಿನಿಮಾ ಬಂದಿದ್ದು, ಅದರ ಹಾಡನ್ನು ಈಗಲೂ ಜನ ಗುನುಗುತ್ತಾರೆ. ಅದೇ"ಓಂಕಾರ ನಾದಾನು ಸಂಧಾನಮೇ...
ರಾಗದ ವ್ಯಾಖ್ಯೆಯಿಂದ ಆರಂಭವಾದ ಕಾರ್ಯಕ್ರಮ, ಕೇವಲ ಏಳು ಸ್ವರದಲ್ಲಿ ಇದು ರೂಪಿಸುವ ಬಹು ಸಂಖ್ಯೆಯ ಹಾಡುಗಳ ವಿಸ್ತಾರ ಸಾಮ್ರಾಜ್ಯ, ಅದರಲ್ಲಿರುವ ಹೊರ ನೋಟ, ಒಳನೋಟಗಳ ವಿವರಣೆಯಲ್ಲದೆ, ಶಂಕರಾಭರಣದ ಜನ್ಯ ರಾಗಗಳು ಕಟ್ಟಿಕೊಟ್ಟ ಹಾಡುಗಳ ಸಾಳುಗಳನ್ನು ಗುರುಶಿಷ್ಟಯಯರು ಹರವಿ ಭೇಷ್ ಎನ್ನಿಸಿಕೊಂಡರು.
ಕೊನಗೆ ಶಂಕರಾಭರಣ ರಾಗದ ಟ್ಯೂನ್ದಲ್ಲಿ...ಸರಿಗಗಗಾಗಗಗಾಗಗರಿಗಮ..ಗಾಗಗರೀರೀರಿರಿಸರಿಸಾ..ಸಸಪಾಪ..ಪಾಪಪಾಪಪಪಮದಪ..ಮಮಮಗಗರಿಗಗ..ಹೀಗೆ ರಾಷ್ಟ್ರಗೀತೆಯನ್ನು ಧ್ವನಿಸಿ ತಮ್ಮ ವಿಶಿಷ್ಟ ಕಾರ್ಯಕ್ರಮವನ್ನು ಮುಕ್ತಾಯೊಗೊಳಿಸಿದರು. ಜಿಲ್ಲೆಯಲ್ಲಿ ಕಾಂಚನ ಸಂಗೀತ ಪರಂಪರೆಯವರಾದ ಮಧೂರು ಅವರ ವಿದ್ವತ್ಪೂರ್ಣ ರಾಗ ವಿಸ್ತಾರಕ್ಕೆ, ಅವರದೇ ಶಿಷೆಯರು, ಎದೆ ತುಂಬಿದೆನು ಕಾರ್ಯಕ್ರಮದಲ್ಲಿ ಗಮನ ಸೆಳೆದ ಉಷಾ ಹಾಗೂ ದೀಕ್ಷಾ ಉತ್ತಮ ಸಾಥಿ ನೀಡಿದರು.


ಜನ್ಯರಾಗದಲ್ಲಿ 
ಶಂಕರಾಭರಣ ಜನ್ಯರಾಗದಲ್ಲಿ ಹಂಸಧ್ವನಿ(ವಾತಾಪಿ ಗಣಪತಿಂ ಭಜೆ), ಆರಭಿ( ಶ್ರೀ ಸರಸ್ವತಿ,,), ಬಿಲಹರಿ( ರಾರವೇಣು ಗೋಪಾ ಬಾಲಾ..) ಕುರಂಜಿ( ಸೀತಾ ಕಲ್ಯಾಣಮೇ) ಜನರಂಜಿನಿ( ಪಾಹಿಮಾಮ್ ಶ್ರೀ), ನೀಲಾಂಬರಿ( ಮಾಧವ ಮಾವದೇ..) ಗರುಢಧ್ವನುಯಲ್ಲಿ( ಸ್ವಾಗತಂ ಕೃಷ್ಣ..) ಅಲ್ಲದೆ ಮೋಹನ, ಬೇಗಡೆ ಇತ್ಯಾದಿಗಳ ಪ್ರಸ್ತುತಿ. ಜನ್ಯದಲ್ಲಿಯೇ ತುಟಿ ತಾಗಿಸದೇ ಉಚ್ಚರಿಸಲ್ಪಡುವ ಸ್ವರ ಸಾಧ್ಯತೆಗಳನ್ನೂ ಹಾಡಿ ತೋರಿಸಿದರು.
 
Read More