ANIKETANA: ಈ ಮನೆ ಮಾಲೀಕನದ್ದು ಸರಳ ಜೀವನ ವಿರಳ ಚಿಂತನಕ್ಕೊಂದು ನಿದರ್ಶ...

ANIKETANA: ಈ ಮನೆ ಮಾಲೀಕನದ್ದು ಸರಳ ಜೀವನ ವಿರಳ ಚಿಂತನಕ್ಕೊಂದು ನಿದರ್ಶ...
ANIKETANA: ಈ ಮನೆ ಮಾಲೀಕನದ್ದು ಸರಳ ಜೀವನ ವಿರಳ ಚಿಂತನಕ್ಕೊಂದು ನಿದರ್ಶ...: ಸದಾನಂದ ಹೆಗಡೆ ದಾವಣಗೆರೆ ಹೋಬಳಿ ಕೇಂದ್ರವಾದ ಮಾಯಕೊಂಡ ಉಪನಗರದಲ್ಲಿ  ಇವರನ್ನು ’ಕುಮಾರ ಶಾಸ್ತ್ರೀ’ ಎಂದೇ ಜನ ಗುರುತಿಸುತ್ತಾರೆ. ಬಸ್ ನಿಲ್ದಾಣದ ಎದುರು ಓಣಿಯಲ್ಲ...
Read More

ಈ ಮನೆ ಮಾಲೀಕನದ್ದು ಸರಳ ಜೀವನ ವಿರಳ ಚಿಂತನಕ್ಕೊಂದು ನಿದರ್ಶನ !

ಈ ಮನೆ ಮಾಲೀಕನದ್ದು ಸರಳ ಜೀವನ ವಿರಳ ಚಿಂತನಕ್ಕೊಂದು ನಿದರ್ಶನ  !

ಸದಾನಂದ ಹೆಗಡೆ ದಾವಣಗೆರೆ
ಹೋಬಳಿ ಕೇಂದ್ರವಾದ ಮಾಯಕೊಂಡ ಉಪನಗರದಲ್ಲಿ  ಇವರನ್ನು ’ಕುಮಾರ ಶಾಸ್ತ್ರೀ’ ಎಂದೇ ಜನ ಗುರುತಿಸುತ್ತಾರೆ. ಬಸ್ ನಿಲ್ದಾಣದ ಎದುರು ಓಣಿಯಲ್ಲಿ  ಸುತ್ತಿ ಬಳಸಿ ಹೋದರೆ 110 ವರ್ಷ ಹಳೆಯದಾದ ಊರ ಹೆಂಚಿನ ಚಾಳವೊಂದಿದ್ದು, ಅದರಲ್ಲಿ ಎರಡು ರೂಮಿನ ಬಿಡಾರ ಶಾಸ್ತ್ರಿಗಳ ಮನೆ. ವರ್ಷದ ಹಿಂದೆ ಪತ್ನಿ  ರಾಜಲಕ್ಷ್ಮೀ ಶಾಸ್ತ್ರೀ ವಯೋ ಸಹಜ ಸಮಸ್ಯೆಯಿಂದ ಮೃತ್ಯುವಶವಾದರು. ಆಮೇಲೆ ಎಂಎಸ್‌ಕೆ ಶಾಸ್ತ್ರೀ ಏಕಾಂಗಿ.
ಪಕ್ಕದಲ್ಲಿ  ಇವರ ತಮ್ಮನ ಕುಟುಂಬ ಇದ್ದು, ಅವರನ್ನೂ ಅವಲಂಬಿಸದೆ ಸ್ವಯಂ ಪಾಕಿಯಾಗಿ ಬದುಕುತ್ತಿದ್ದಾರೆ. ಇವರ ಪ್ರತಿ ದಿನದ ಊಟದ ಮೆನು ಅನ್ನ, ಮೊಸರು, ಉಪ್ಪಿನಕಾಯಿ ಅಷ್ಟೆ.
ಪಕ್ಕದಲ್ಲಿ  ಅಜ್ಜನ ಕಾಲದಲ್ಲಿ ಸ್ಥಾಪಿತವಾದ ಮನೆ ದೇವರ ಗುಡಿ ಇದೆ, ಕಾಶಿಯಿಂದಲೇ ತಂದು ಸ್ಥಾಪಿಸಿದ ವಿಶ್ವನಾಥ ಗುಡಿ. ಬೆಳಗ್ಗೆ ದೇವರ ಪೂಜೆ ಮುಗಿಸಿ, ಊಟವನ್ನೂ ಮಾಡಿ ಹತ್ತು ಗಂಟೆಗೆ ರೈಲಿನ ಮೂಲಕ ದಾವಣಗೆರೆಗೆ ಹೊರಟರೆ, ವಾಪಾಸ್ ಮನೆ ಸೇರುವುದು ರಾತ್ರಿ ಹತ್ತಕ್ಕೇ.
ಹುಟ್ಟು  ಹೋರಾಟಗಾರ ಶಾಸ್ತ್ರೀಗಳಿಗೆ ಈಗ 75ರ ಹರೆಯ. ಇಬ್ಬರು ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪೂರೈಸಿ ಬೆಂಗಳೂರಲ್ಲಿ  ವೃತ್ತಿ ನಿರತರಾಗಿದ್ದು, ಮೂರನೆಯ ಮಗ ಎಂಜಿನಿಯರಿಂಗ್ ಮುಗಿಸಿ, ನೌಕರಿ ತಲಾಶೆಯಲ್ಲಿ ಬೆಂಗಳೂರಲ್ಲಿ ಸಹೋದರಿಯರೊಂದಿಗೆ ಇದ್ದಾನೆ.
ಮಾಯಕೊಂಡದಲ್ಲಿ  ಶಾಸ್ತ್ರೀಗಳ ಮನೆ.


ಹದಿನೈದು ದಿನಕ್ಕೊಮ್ಮೆ ಬೆಂಗಳೂರಿಗೆ ತಾವೇ ಹೋರಾಡಿ ಸಾಕಾರಗೊಳಿಸಿದ ರೈಲಿನಲ್ಲಿ ಬೆಂಗಳೂರಿಗೆ ಹೋಗಿ ಶನಿವಾರ-ಭಾನುವಾರ ಮಕ್ಕಳೊಂದಿಗೆ ಕಳೆದು ಬರುತ್ತಾರೆ. ಇನ್ನೇನು ಮಕ್ಕಳು ಊರಿಗೆ ಬರುವ ಸಾಧ್ಯತೆ ಕಡಿಮೆ ಎಂಬುದು ಈ ಹೊತ್ತಿನಲ್ಲಿ  ಶಾಸ್ತ್ರೀ ಅನಸಿಕೆ. ಸಹೋದರರೆಲ್ಲ ಒಪ್ಪಿದರೆ, ಪಕ್ಕದಲ್ಲಿ ಖಾಲಿ ಇರುವ ಜಾಗವನ್ನೂ ಸೇರಿಸಿ ಒಂದು ಕಲ್ಯಾಣಮಂಟಪ ಕಟ್ಟಿ ಮನೆತನದ ಗುಡಿ ನಿರ್ವಹಣೆಗೆ ಒಂದು ಸಣ್ಣ ಆದಾಯ ಮಾಡಬೇಕು. ಸದ್ಯ 500 ರೂ ಕೊಟ್ಟು  ಗುಡಿಯ ಒಳಕ್ಕೆ ಒಂದು ಟೋನರ್ ಹಾಕಿದ್ದು, ವಿದ್ಯುತ್ ಇರುವಷ್ಟು ಹೊತ್ತು ಅಲ್ಲಿ  ಎಂಎಸ್ ಸುಬ್ಬಲಕ್ಷ್ಮೀ ಹಾಡಿದ ದೇವರ ನಾಮ ಪುನರಾವರ್ತನೆ ಆಗುತ್ತದೆ.
ಹಸಿರು ಶಾಲಿನ ಬ್ರಾಂಡ್ ಶಾಸ್ತ್ರಿಗಳಿಗೆ ಅಪ್ಪನ ಪಾಲಿನ ಆಸ್ತಿಯಾಗಿ ಮಾಯಕೊಂಡ ಸಮೀಪ 2.20 ಎಕರೆ ಭೂಮಿ ಇದ್ದು, ಇಲ್ಲಿ ಈ ಬಾರಿ ಮೆಕ್ಕೆ ಜೋಳವನ್ನು ಕೃಷಿ ಮಾಡುತ್ತಿದ್ದಾರೆ.
ಊರಲ್ಲಿ ಇರುವಾಗ ಕೆಲವೊಮ್ಮೆ  ಹೊಲಕ್ಕೆ ಹೋಗುವುದು ಬಿಟ್ಟರೆ, ಅಲ್ಲಿ ಅವರು ಹೆಚ್ಚು ಗಮನ ಸೆಳೆಯವುದಿಲ್ಲ. ಆದರೆ ವಾರದಲ್ಲಿ ಪ್ರತಿ ದಿನವೂ ಇವರಿಗೆ ದಾವಣಗೆರೆಯಲ್ಲಿ ಕೆಲಸ ಇರುತ್ತದೆ. ದಾವಣಗೆರೆಯಲ್ಲಿ  ಸುತ್ತಾಡುವುದಕ್ಕೆ  ಇವರು ಒಂದು ಸೈಕಲ್ ಇಟ್ಟಿದ್ದು, ರಾತ್ರಿ ರೈಲು ಹತ್ತುವ ಮೊದಲು ಸರಕಾರಿ ನಿರೀಕ್ಷಣಾ ಗೃಹದಲ್ಲಿ ಇಟ್ಟು ಚಾವಿ ಹಾಕಿ ಹೋಗುತ್ತಾರೆ. ಈ ಮೊದಲು ರೈಲ್ವೆ ನಿಲ್ದಾಣದಲ್ಲಿ  ಇವರು ಸೈಕಲ್ ಇಡುತ್ತಿದ್ದರು, ಅಲ್ಲಿ  ಎರಡು ಸೈಕಲ್ ಕಳವು ಆಗಿದ್ದರಿಂದ ಅಲ್ಲಿ ಬಿಟ್ಟರು. ಪೊಲೀಸರೊಬ್ಬರ ಸಲಹೆಯ ಮೇರೆಗೆ ಇದೀಗ ಗೆಸ್ಟ್‌ಹೌಸ್‌ನಲ್ಲಿಟ್ಟು ಚಾವಿ ಹಾಕಿ, ತಮ್ಮ  ಆ ದಿನದ ಕಾಯಕ ಮುಗಿಸಿ ಹೊರಡುತ್ತಾರೆ.
ಮಾಯಕೊಂಡ- ದಾವಣಗೆರೆ ಓಡಾಟಕ್ಕೆ ತಿಂಗಳಿಗೆ 160 ರೂ. ಕೊಟ್ಟು ಸೀಸನಲ್ ರೈಲ್ವೆ ಪಾಸ್ ಪಡೆದುಕೊಂಡಿದ್ದಾರೆ. ಪತ್ರಿಕಾ ಪ್ರಕಟಣೆ ಸಿದ್ಧತೆ, ಜರಾಕ್ಸ್ ಮತ್ತಿತರ ಕಾರ್ಯಕ್ಕೆ ತಿಂಗಳಿಗೆ 15,000 ರೂ.ಗಳಷ್ಟು ಖರ್ಚು ಇರುತ್ತದೆ. ಅಲ್ಲದೆ ಮನೆಯಲ್ಲಿ  ದಿನವೂ ಅರ್ದ ಲೀಟರ್ ಹಾಲು ಪಡೆಯುವ ಜತೆಗೆ, ದಾವಣಗೆರೆಯಿಂದ ಹೋಗುವಾಗ ಅರ್ದ ಲೀಟರ್ ಮೊಸರು ಕೊಂಡು ಹೋಗುತ್ತಾರೆ.
ತಾವು ಕಾಯಿಸಿದ ಹಾಲಿನಲ್ಲಿ ಪಕ್ಕದಲ್ಲೇ ಇರುವ ತನಗಿಂತ ವಯಸ್ಸಾದ ಹಿರಿಯ ಮಹಿಳೆಗೆ ಅದರಲ್ಲಿ ಅರ್ಧ ಕೊಡುವುದು ಇವರ ರೂಢಿ. ತಮ್ಮನೊಂದಿಗೆ ಅಷ್ಟೇನೂ ಇವರಿಗೆ ಮಾತಿಲ್ಲ. ತಿಂಗಳಿಗೆ 2500 ರೂ. ತನಕ ಖರ್ಚು ಇವರಿಗಿದೆ.
ಆ ವರ್ಷದ ಆದಾಯದಲ್ಲಿ  ತಮ್ಮ ಖರ್ಚಿಗೆ ಏನಾದರೂ ಕೊರತೆ ಆದರೆ ಮಕ್ಕಳು ಸ್ವಲ್ಪ ಕೊಡುತ್ತಾರೆ. ಇಬ್ಬರು ಹೆಣ್ಣು ಮಕ್ಕಳು ಉತ್ತಮ ಕೆಲಸದಲ್ಲಿ ಇದ್ದು, ಅವರು ಕೊಡುತ್ತಾರೆ. ಸುಮಾರು 40 ವರ್ಷಗಳ ಇವರ ಸಾರ್ವಜನಿಕ ಜೀವನಕ್ಕೆ ಇವರು ಯಾವುದೇ ಸಂಬಳ, ಗಿಂಬಳ ಪಡೆದಿಲ್ಲ ಎಂಬುದಕ್ಕೆ ಮನೆಯೇ ಇವರ ನಿದರ್ಶನ.
ಮೂರು ಕೊಠಡಿಗಳ ಇವರ ಮನೆಯ ತುಂಬ ಎಲ್ಲವೂ ಅಸ್ತವ್ಯಸ್ತ ! ಅಲ್ಲಲ್ಲಿ ಚೆಲ್ಲಾಪಿಲ್ಲಿಯಾದ  ದಿನಪತ್ರಿಕೆಗಳು, ಗೋಡೆ ಮೇಲೆ 150ಕ್ಕೂ ಮಿಗಿಲಾದ ಸಾರ್ವಜನಿಕ ವ್ಯಕ್ತಿಗಳ ದೂರವಾಣಿ ನಂಬರ್. ಚಾಕ್‌ನಲ್ಲಿ ಬರೆದುಕೊಂಡಿರುವ ದೂರವಾಣಿ ಸಂಖ್ಯೆಯಲ್ಲಿ ಹೆಚ್ಚಿನ ಯಾವುದಕ್ಕೂ ಹೆಸರಿಲ್ಲದ ಕಾರಣ, ಶಾಸ್ತ್ರೀ ಮಾತ್ರ ಅದನ್ನು ಗುರುತಿಸಬಲ್ಲರು.
 ಹೆಣ್ಣಿಲ್ಲದ ಮನೆಯನ್ನು ಪ್ರತಿ ದಿನ ಸ್ವಚ್ಛ ಮಾಡುವುದು ಇವರಿಗೆ ಸಾಧ್ಯವಾಗುತ್ತಿಲ್ಲ. ಇಲ್ಯಾಕೆ ಇರುತ್ತೀರಿ , ಬನ್ನಿ ಬೆಂಗಳೂರಿಗೆ ಎಂದು ಮಕ್ಕಳು ಕರೆದರೆ, ದಾವಣಗೆರೆಯಲ್ಲಿ ಇನ್ನೂ ಅದೆಷ್ಟೋ ಕೆಲಸ ಇದ್ದು, ಅದು ಮುಗಿದ ಮೇಲೆ ಬರೋಣ ಎಂದು ಮುಂದೂಡುತ್ತಾರೆ. ಇವರಿಗೆ ಬೆಂಗಳೂರಿಗೆ ಹೋಗಿ ಇರಲು ಮನಸ್ಸಿಲ್ಲ !

ಶಾಸ್ತ್ರೀ ಹೋರಾಟ:

ಈ ದೇಶದ ರೈತರು ಶೋಷಿತರಾಗಿದ್ದಾರೆ. ಅವರ ಪರವಾಗಿ ಒಂದಿಷ್ಟು ಸುಶಿಕ್ಷಿತ ರೈತರು ಹೋರಾಡಬೇಕು ಎಂದು ಗಾಂೀಜಿ ಮಾತಿನಿಂದ ಪ್ರಭಾವಿತರಾಗಿ ಎಂಎಸ್‌ಕೆ ಶಾಸ್ತ್ರೀ ರೈತ ನಾಯಕರಾದರು.
ಹೊನ್ನಾಳಿಯ ರೈತ ನಾಯಕ ದಿ.ಎಚ್.ಎಸ್. ರುದ್ರಪ್ಪ ಇವರಿಗೆ ಹಸಿರು ಶಾಲಿನ ದೀಕ್ಷೆ ಕೊಟ್ಟರು. ಅಲ್ಲಿಂದಲೂ ರೈತರಿಗಾಗಿ ಹೋರಾಡುತ್ತ ಬಂದಿದ್ದಾರೆ.
ಅಪ್ಪನ ಕಾಲದ ಹಳೆಯ ಮನೆಯನ್ನೇ ಸಹೋದರರೊಂದಿಗೆ ಹಂಚಿಕೊಂಡು ಚೂರು ಪಾರು ರಿಪೇರಿ ಮಾಡಿಸಿ ಜೀವನ ಸವೆಸುತ್ತಿದ್ದಾರೆ. ಆದರೆ ದಾವಣಗೆರೆ ಪ್ರತ್ಯೇಕ ಜಿಲ್ಲೆ, ಇಲ್ಲಿನ ವಿಶ್ವ ವಿದ್ಯಾಲಯ, ಬೆಂಗಳೂರು-ದಾವಣಗೆರೆ ಇಂಟರ್ ಸಿಟಿ ರೈಲು ಹೋರಾಟದಲ್ಲಿ  ಶಾಸ್ತ್ರಿಯದ್ದು  ಪ್ರಧಾನ ಪಾತ್ರ.
1993ರಲ್ಲಿ  14 ದಿನ ಇಲ್ಲಿನ ಹೆದ್ದಾರಿ ಬಂದ್ ಮಾಡಿ, ಆಗಿನ ಪ್ರಧಾನಿ ಪಿವಿಎನ್ ಅವರನ್ನು ಭೇಟಿಯಾಗಿ ರಸಗೊಬ್ಬರ ಸಬ್ಸಿಡಿ ತಂದರು. ಹಸಿರು ಶಾಲನ್ನು ಎಂದಿಗೂ ಅಪವಿತ್ರಗೊಳಿಸಿಲ್ಲ. ಹೋರಾಟ ಇವರ ವ್ಯಸನ. ಸಾರ್ವಜನಿಕ ಹಣ ಹೋಗಲಿ, ತಮ್ಮದೇ ಆದಾಯ ಹೊಂದಿಸಿಯೂ ಒಂದು ಮನೆ ಕಟ್ಟಿಕೊಳ್ಳುವುದು ಸಾಧ್ಯವಾಗಿಲ್ಲ. ಸರಳತೆಯ ಇವರಲ್ಲಿರುವಂಥ ಹಟವೂ ವಿರಳ.
Read More

ಕಾರ್ಪೋರೇಟ್ ನಿರ್ವಹಣೆ ಕೂಡ ವಿಶಿಷ್ಟ ರೀತಿ ಅಷ್ಟಾವಧಾನ

ಕಾರ್ಪೋರೇಟ್ ನಿರ್ವಹಣೆ ಕೂಡ ವಿಶಿಷ್ಟ ರೀತಿ ಅಷ್ಟಾವಧಾನ


ಸದಾನಂದ ಹೆಗಡೆ ದಾವಣಗೆರೆ
ಕಬ್ಬಿನಾಲೆ ವಸಂತ ಭಾರದ್ವಾಜ್ ಸಾಹಿತಿ, ವಿದ್ವಾಂಸರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರು. ಯಕ್ಷಗಾನ ಅರ್ಥದಾರಿಯಾಗಿ, ಅಕಾಡೆಮಿ ಸದಸ್ಯರಾಗಿಯೂ ನಿರ್ವಹಿಸಿದ ಭಾರದ್ವಾಜ್ ಅಷ್ಟಾವಧಾನಿಯಾಗಿ ಹೆಸರು ಮಾಡಿದ್ದಾರೆ. ಬ್ಯಾಂಕ್ ನೌಕರಿಯಿಂದ ವಿಆರ್‌ಸ್ ಪಡೆದು ಮೈಸೂರಲ್ಲಿ  ವಾಸಿಸುತ್ತಾರೆ. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಕಲಾಕುಂಚ ಕನ್ನಡ ಕುವರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ  ಭಾಗವಹಿಸಿದ ನಂತರ, ವಿಕ ಕಚೇರಿಗೆ ಭೇಟಿ ನೀಡದ್ದರು. ಈ ಸಂದರ್ಭ ಅವಧಾನಕಲೆ ಹಾಗೂ ಇತ್ತೀಚೆಗೆ ಚರ್ಚೆಯಲ್ಲಿರುವ ಕಾರ್ಪೋರೇಟ್ ನಿರ್ವಹಣಾ ಕಲೆಯ ನಡುವಿನ ಅಂತರ್ ಸಂಬಂಧ ಕುರಿತು ಮಾತನಾಡಿದ್ದಾರೆ.
* ಅವಧಾನವನ್ನು ಸಮಕಾಲೀನ ಮ್ಯಾನೇಜರ್‌ಗಳು ತಮ್ಮ  ಮಲ್ಟಿಟಾಸ್ಕಿಂಗ್ ಸವಾಲುಗಳಿಗೆ ಹೇಗೆ ಅನ್ವಯಿಸಿಕೊಳ್ಳಬಹುದು ?
ನಾನೂ ಓರ್ವ ಮ್ಯಾನೇಜರ್ ಆಗಿದ್ದವ. ಆದರೆ ಅವಧಾನವನ್ನು ಮಾತ್ರ ಪ್ರತ್ಯೇಕ ಕಲೆ ಎಂದೇ ಗ್ರಹಿಸಿಕೊಂಡು ಮಾಡುತ್ತ ಬಂದೆ. ನಿಜ, ಅವಧಾನ ಕಲೆಯನ್ನು ಮ್ಯಾನೇಜರ್‌ಗಳು ತಮ್ಮ ನಿರ್ವಹಣಾ ಸವಾಲುಗಳಿಗೆ ಅಳವಡಿಸಿಕೊಳ್ಳುವ ಅವಕಾಶ ಇದೆ. ಹಾಗೆ ನೋಡಿದರೆ, ನಮ್ಮಲ್ಲಿ  ಗೃಹಿಣಿಯರು ವಾಸ್ತವ ಬದುಕಿನಲ್ಲಿ  ಅವಧಾನಿಗಳಾಗಿದ್ದಾರೆ. ಅಡುಗೆ ಮಾಡುತ್ತಲೇ ರೇಡಿಯೋ ಕೇಳುತ್ತಾರೆ,ಟೀವಿ ನೋಡುತ್ತಾರೆ. ಮಧ್ಯೆ ಮಕ್ಕಳ ತಂಟೆ, ಯಜಮಾನನ ಪ್ರಶ್ನೆಗಳನ್ನು ಸಹನಶೀಲರಾಗಿ ನಿರ್ವಹಿಸುತ್ತಿರುತ್ತಾರೆ. ಮಹಿಳೆಯರಲ್ಲಿ  ಏಕಕಾಲದಲ್ಲಿ ಕೆಲವು ಕೆಲಸವನ್ನು ನಿರ್ವಹಿಸುವ ಕಲೆ ರಕ್ತಗತವಾಗಿ ಬಂದಿದೆ.  ಆದರೆ ನಾನು ಮಾಡುವ ಅಷ್ಟಾವಧಾನವು ಸಾಹಿತ್ಯ, ಸಾರಸ್ವತ ಲೋಕವನ್ನು  ಜಾಣ್ಮೆಯಿಂದ ರಂಜಿಸುವುದಕ್ಕೆ  ಸೀಮಿತವಾಗಿರುತ್ತದೆ.
* ಅಷ್ಟಾವಧಾನ ಸಂದರ್ಭ ನಿಮ್ಮ ಮನಸ್ಥಿತಿ ಹಗಿರುತ್ತದೆ ?
ನಾಟಕದಲ್ಲಿ, ಯಕ್ಷಗಾನದಲ್ಲಿ  ನಾವು ಪಾತ್ರನಿರ್ವಹಿಸುವ ರೀತಿಯಲ್ಲಿಯೇ ಅವಧಾನಿಯಾಗಿಯೂ ನಾನು ಓರ್ವ ಪಾತ್ರಿಯಾಗಿರುತ್ತೇನೆ. ಓದಿದ ಎಲ್ಲವನ್ನೂ ನೆನಪಿಸಿಕೊಂಡು ಪ್ರಶ್ನೆ ಕೇಳುವವರನ್ನು, ಆ ಕ್ಷಣದ ಸನ್ನಿವೇಶವನ್ನು ಸಮರ್ಥವಾಗಿ ನಿರ್ವಹಿಸಲು ನಾನು ಮಾನಸಿಕವಾಗಿ ಸಿದ್ಧವಾಗಿರುತ್ತೇನೆ. ನನ್ನ ಓದಿನ ಅನುಭವದ ಜತೆ ಆತ್ಮವಿಶ್ವಾಸದ ಪಾರಾಕಾಷ್ಟೆಯನ್ನೂ ಆ ವೇದಿಕೆಯಲ್ಲಿ  ತಂದುಕೊಂಡಿರುತ್ತೇನೆ. ಅಷ್ಟಾವಧಾನದ ಪಾತ್ರಿಯಾಗಿ ನನ್ನ ಮೆದುಳಿಗೆ ದುಪ್ಪಟ್ಟು  ರಕ್ತ ಸಂಚಾರ ಆಗುತ್ತಿರುತ್ತದೆ. ನನ್ನೆದುರಿಗೆ ಇರುವವವರು ಯಾರೇ ಇದ್ದರೂ, ಅವರ ಪ್ರಶ್ನೆಗೆ ಪರಮಾವಧಿ ಜಾಣ್ಮೆಯಲ್ಲಿ ಉತ್ತರಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಸಿಕೊಂಡಿರುತ್ತೇನೆ. ಆ ಮಟ್ಟಿಗೆ ಅದೊಂದು ಆವೇಶ. ಇಂಥ ಮನಸ್ಥಿತಿ  ಅವಧಾನಿಗೆ ಎಷ್ಟೊಂದು ಶಕ್ತಿ ಕೊಡುತ್ತದೆ ಎಂದರೆ  ಎಂಥ ಕನ್ನಡ ಪಂಡಿತರನ್ನೂ ತಲೆಕೆಳಗು ಮಾಡುತ್ತೇವೆ. ಜಾಗಟೆಯ ಗದ್ದಲದ ನಡುವೆಯೂ ಕೊಟ್ಟ ವಿಷಯದ ಮೇಲೆ ನಿರ್ದಿಷ್ಟ  ಮಾತ್ರೆಯ ಕವನ ಹೊಸೆಯುತ್ತಲೇ, ಅಪ್ರಸ್ತುತ ಪ್ರಸಂಗಿಯ ಪ್ರಶ್ನೆಗೆ ಸುಂದರವಾಗಿ ಉತ್ತರಿಸಿ ಪ್ರೇಕ್ಷಕರ ಮನ ಗೆಲ್ಲುವುದು ಸಾಧ್ಯವಾಗುತ್ತದೆ.
* ಅವಧಾನದ ಈ ಆವೇಶ ಅಥವಾ ಮನೋಭಾವ ಬಿಡಿಯಾಗಿ ಚಿತ್ರಿಸಲು ಸಾಧ್ಯವೇ ?
ಮನೋಭಾವದ ಹಿಂದೆ ಎಎಸ್‌ಕೆ ಎಂಬ ಮೂರು ಇಂಗ್ಲೀಷ್ ಅಕ್ಷರದ ತತ್ವ ಇರುವುದನ್ನು  ನಾನು ಇಲ್ಲಿ  ವಿವರಿಸಬಲ್ಲೆ. ಎ ಅಂದರೆ ಎ್ಯಟ್ಟಿಟ್ಯೂಡ್ ಅಂದರೆ ಧೋರಣೆ. ಎಸ್ ಎಂದರೆ ಸ್ಕಿಲ್ ಅಂದರೆ ಜಾಣ್ಮೆ ಹಾಗೂ ಮೂರನೆಯ ಅಕ್ಷರ ಕೆ ಎಂದರೆ ನಾಲೇಜ್ ಅಂದರೆ ಜ್ಞಾನ. ಅವಧಾನ ಮಾಡುವರು ಸಾಹಿತ್ಯದ ತೀವ್ರ ಓದುಗರಾಗಿರಲೇಬೇಕು. ಜ್ಞಾನದ ಭಂಡಾರವೇ ಅವರಲ್ಲಿ ಇರಬೇಕು. ಜ್ಞಾನ ಹಾಗೂ ಜೀವನಾನುಭವವನ್ನು ಜೋಡಿಸಿ ತಕ್ಷಣವೇ ಹೊಸೆಯುವ ಜಾಣ್ಮೆಯೂ ಬೇಕು. ಇದಕ್ಕೆಲ್ಲ ಪೂರಕವಾಗಿ ನಾನೊಬ್ಬ ಅವಧಾನಿ, ಉತ್ತರಿಸಲೇಬೇಕು ಎಂಬ  ಮಾಡು ಇಲ್ಲವೇ ಮಡಿ ಎಂಬ ಬಲವಾದ ಧೋರಣೆ ಇರಲೇಬೇಕು.* ಇದನ್ನು ಸಮಕಾಲೀನ ಮ್ಯಾನೇಜರ್‌ಗಳು ಹೇಗೆ ಅಳವಡಿಸಿಕೊಳ್ಳಬಹದು.
ಅವಧಾನ ವೇದಿಕೆಯಲ್ಲಿ  ಯಾವಾಗಲೂ ಇರುವುದು ದೊಡ್ಡ ದಣಿವಿನ ಕೆಲಸ. ಅವಧಾನದ ಯಥಾವತ್ತನ್ನು  ಮ್ಯಾನೇಜರ್ ಒಬ್ಬ  ದಿನದ ಎಲ್ಲ  ಹೊತ್ತಲ್ಲೂ  ತನ್ನಲ್ಲಿ ಆಹ್ವಾನಿಸಿಕೊಂಡು ತನ್ನೆದುರಿಗೆ ಬರುವ ಸವಾಲನ್ನು ಎದುರಿಸುವುದು ಪ್ರಾಯೋಗಿಕವಾಗಿ ಸರಿ ಅನ್ನಿಸುವುದಿಲ್ಲ. ಅವಶ್ಯವೂ ಇಲ್ಲ. ಅದರ ಬದಲು ಅವಧಾನದಲ್ಲಿ ಸಮಸ್ಯಾ ಪೂರಣ ಎಂಬ ಒಂದು ವಿಭಾಗ ಇದೆ. ಅದನ್ನು ಅನುಸರಿಸಿದರೆ  ಏಕಕಾಲಕ್ಕೆ ಬರುವ ಎಲ್ಲ  ಸಮಸ್ಯೆಯನ್ನೂ ನಾವು ನಿರ್ವಹಿಸುವುದು ಸಾಧ್ಯ. ಹಾಗೆ ನೋಡಿದರೆ ಮ್ಯಾನೇಜಿಂಗ್ ಕೂಡ ಒಂದು ಅವಧಾನವೇ.
* ಮ್ಯಾನೇಜರ್ ಅಥವಾ ನಿರ್ವಾಹಕರಿಗೆ   ನಿಮ್ಮ ಕಿವಿಮಾತೇನು ?
ನಿರ್ವಹಣೆ ಕೂಡ ಒಂದು ಕಲೆ. ಇಲ್ಲಿ ಕೇವಲ ಜ್ಞಾನ ಮಾತ್ರ ಸಾಲುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿ ಪರಿಪೂರ್ಣ ಜ್ಞಾನಿ ಆಗುರಿವುದು ಕಷ್ಟ. ಆದರೆ ಜ್ಞಾನಿಯಂತೆ ಕಾಣಿಸಿಕೊಳ್ಳುವುದು, ಜ್ಞಾನ ಆಗಮನಕ್ಕೆ  ಮುಕ್ತವಾಗಿರುವುದು ಅತ್ಯಂತ ಮುಖ್ಯವಾಗಿರುತ್ತದೆ. ಕ್ಷಣ ಕ್ಷಣಕ್ಕೆ ಸನ್ನಿವೇಶಗಳು ಬದಲಾದರೂ, ನಾವು ವಿಚಲಿತರಾಗದೆ ಎದುರಿಸಲು ಸಜ್ಜಾಗಿರಬೇಕು. ನಾವು ಜಾಗೃತರಾಗಿರಲು ಸವಾಲುಗಳೂ ನಮಗೆ ಅವಶ್ಯ ಎಂಬುದನ್ನು ನಾವು ನಂಬಿರಬೇಕು.    
ಅಷ್ಟಾವಧಾನಿ  ಕಬ್ಬಿನಾಲೆ ವಸಂತ ಭಾರದ್ವಾಜ್
Read More