ದಾವಣಗೆರೆಯಿಂದ 25 ಕಿಲೋಮೀಟರ್ ದೂರದಲ್ಲಿರುವ ಉಚ್ಚಂಗಿದುರ್ಗವು ನಿರ್ಲಕ್ಷಕ್ಕೊಳಗಾದ ಇನ್ನೊಂದು, ಪಿಕ್ನಿಕ್ ಸ್ಪಾಟ್ . ಬಳ್ಳಾರಿ ಜಿಲ್ಲೆಗೆ ಸೇರುವ ಈ ಪ್ರದೇಶವು ದಾವಣಗೆರೆ ಜಿಲ್ಲೆ ಜಗಳೂರು ಶಾಸನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದೆ.
ಬನವಾಸಿಯ ಕದಂಬರ ಕಾಲದ ಹಿನ್ನೆಲೆ ಹೊಂದಿರುವ ಇಲ್ಲಿನ ಕೋಟೆ, ಉತ್ಸವಾಂಬೆ ನಮಗೆ ಕರುನಾಡಿನ ಇತಿಹಾಸದ ಮಹತ್ವ ಸಾರುತ್ತವೆ.
ಸಣ್ಣದಾಗಿ ಗುಡ್ಡ / ಕೋಟೆ ಹತ್ತಿ, ದೊಡ್ಡದೊಂದು ದಿಗಂತ ನೋಡುವ ಇಲ್ಲಿನ ಸಂಭ್ರಮ, ನಮ್ಮ ಸಂವೇದನೆಯನ್ನು ಹರಿತಗೊಳಿಸುವ ತಾಣ.
ಕೋಟೆಯ ಕಲ್ಲುಗಳು ಸುತ್ತಲಿ ಹಸಿರು ಕವಿದ ಹುಲ್ಲು ಗಳಿಂದ ಈಗಂತೂ ಹೊಸ ಬಣ್ಣ ಪಡೆದಿದೆ.
ಮಾನವ ಕಣ್ಣಿನ 576 ಮೆಗಾ ಫಿಕ್ಸೆಲ್ ಕ್ಯಾಮರಾಕ್ಕೆ ಸಮೃದ್ಧ ಫೋಕಸ್ ಕೊಡುವ ಹಸಿರು ತಿಟ್ಟ ಬೆಟ್ಟದ ಮಾಲೆಗಳು, ಮೋಡದ ಚಪ್ಪರದಲ್ಲಿ ಏನೆಲ್ಲ ಸಂಭ್ರಮವನ್ನು ಸ್ಪುರಿಸುತ್ತವೆ.
ಇದನ್ನೆಲ್ಲ ಸವಿಯಲು ಜಾತ್ರೆಯ ಹೊರತಾದ ದಿನವೇ ಹೋಗಬೇಕು..ಇದು ಸಕಾಲ.
ಇನ್ನು ಉತ್ಸವಾಂಬೆಯ ಕಾರಣಿಕ ಹಲವುಬಗೆಯಲ್ಲಿದೆ.
ಹೊರಗೆ ಕಾಣುವ ಉತ್ಸವಾಂಬೆಗೆ, ಒಳಗೊಂದು ಶಕ್ತಿ ರೂಪ. ಬೆನ್ನಿಗೊಂದು ಪೂಜೆ, ಎಡದಲ್ಲಿ ಹಿರಿಯ ದೇವಿಗೆ ಎಡೆಯ ಸ್ಥಾನ,ಪಾಳೆಗಾರರ ಕಾಲದ ಗಂಟೆ ಸಹಿತ ಎಷ್ಟೊಂದು ನಿಗೂಢ.
ಉಚ್ಚಂಗೆಮ್ಮ
ನಿನ್ನಾಲುಕು ಉಧೋ.. !
ಆ ಜಾತ್ರೆ ಜಂಗುಳಿಯ ವಿಶೇಷ, ಬಲಿ, ಹರಕೆ ಎಲ್ಲವೂ ಇರಲಿ. ಆದರೆ ಅವುಗಳಿಗೊಂದು ಕ್ರಮ ಇರಲಿ ಅಲ್ಲವೇ. ಈಗ ಮೌಢ್ಯವು ಬಹುತೇಕ ತಗ್ಗಿದೆ. ಇದಕ್ಕೆ ಬೇರೊಂದು ಉದ್ದೇಶದಿಂದ ಸಂದರ್ಶಕರ ಸಂಖ್ಯೆ ಹೆಚ್ಚಬೇಕು.
ಕೋಟೆಯ ಇತಿಹಾಸ ಹಾಗೂ ಪ್ರಾಕೃತಿಕ ದೃಷ್ಟಿಯಿಂದ ಇವುಗಳನ್ನು ನೋಡುವ ದೃಷ್ಟಿ ನಮ್ಮಲ್ಲಿ ತೆರೆಯಬೇಕು..
ಆರಮನೆಯ ಅವಶೇಷಗಳು, ದ್ವಾರಗಳು, ಇಂಥ ಕೋಟಯಲ್ಲಿ ಅಂದಿನವರ ಬದುಕು ಎಷ್ಟು ಸಾಹಸಮಯವಾಗಿತ್ತು..
ನಮ್ಮ ಪೂರ್ವಜರ ಕಷ್ಟ ವಸಹಿಷ್ಣುತೆ ನಮ್ಮ ಇಂದಿನ ಸ್ಟ್ರೆಸ್ ಗಳಿಗೆ ಒಂದು ರಿಲೀಫ್ ಹೇಗೆ ?
ಇಂಥವುಗಳನ್ನು ಪ್ರೇಕ್ಷಕರ ಗಮನ ಸೆಳೆಯುವಂತಾಗಬೇಕು..
ಇಂಥದ್ದೊಂದು ಸ್ಪಾಟ್ ಇದ್ದರೆ ಪಾಶ್ಚಾತ್ಯ ದೇಶ ಪಡುತ್ತಿದ್ದ ಹೆಮ್ಮೆ, ಸಂಭ್ರಮ ಎಷ್ಟು ಎಂದು ಅಲ್ಲಿಗೆ ಹೋಗಿಬರುವವರು ಹೇಳಬೇಕು..
ಯಾಕೆ ನಮಗೆ ನಮ್ಮೂರು ಸುಂದರವಾಗಿ ಕಾಣುತ್ತಿಲ್ಲ ?!
ನಾವೇಕೆ ನಮ್ಮ ಯಾತ್ರಾಸ್ಥಳದ ಬಗ್ಗೆ ಹೆಮ್ಮೆಪಟ್ಟು, ಸ್ವಚ್ಚವಾಗಿ ಇಡುತ್ತಿಲ್ಲ ?
ಸರಿಯಾದ ಮೂತ್ರದೊಡ್ಡಿ ಇಲ್ಲ, ಸ್ವಚ್ಚತೆಯ ಕೊರತೆ, ಮುತ್ತಿಗೆ ಹಾಕುವ ಭಿಕ್ಷುಕರ ನಡುವೆಯೂ, ಖುಷಿಪಡಿಲು ಸಾಕಷ್ಟು ವಿಷಯ ಇದೆ ಎಂದಾದರೆ, ಇವೆಲ್ಲವನ್ನೂ ಸರಿಪಡಿಸಿದರೆ ನಮ್ಮ ಹೆಮ್ಮೆಗೆ ಎಣೆ ಉಂಟೆ.. ಜನಪ್ರತಿನಿಧಿಗಳ ಪ್ರಯಾರಿಟಿ ಏನು ಅಂತಲೇ ಅರ್ಥವಾಗುವುದಿಲ್ಲ.
ಉಚ್ಚಂಗಿ ದುರ್ಗದ ಪಿಕ್ ನಿಕ್ ಗೆ ಇದು ಸಕಾಲ.
1- ಮಳೆಯ ಕಾರಣ ಎಲ್ಲೆಡೆ ಹಸಿರೇ ಗೋಚರಿಸುತ್ತದೆ.
2- ಕೋಟೆ ಹತ್ತಿದರೂ ದಣಿವು ಅನಿಸುವುದಿಲ್ಲ.
3- ಜಾತ್ರೆ ಸಂದರ್ಭಗಳ ರಶ್ಶು ಇಲ್ಲ.
4 - ಕೊರೊನಾ ಕಾರಣದಿಂದ ಸ್ಥಳೀಯ ಪ್ರವಾಸ ಸ್ವೀಟ್ & ಶಾರ್ಟ್ .
ಉಚ್ಚಂಗಿದುರ್ಗಕ್ಕೆ ಹೋಗಿ ಬನ್ನಿ..