ಆರ್ಟ್‌ ಥೀಫ್ ಧಾರಾವಹಿ -೪ ಸಣ್ಣಿಂದಲೂ ಆತನಿಗೆ ಕರಕುಶಲ, ಕುಂಬಾರಿಕೆಯ ಕುದುರೆ ಎಂದರೆ ಎಲ್ಲಿಲ್ಲದ ಪ್ರೀತಿ. ಕುಲುಮೆಯವರು ಗುಜರಿಗೆ ಹಾಕುವ ಕುಸುರಿ ಚೂರು, ಬಾಣದ ಮುಖಗಳನ್ನು ಆಯ್ದು ತರುತ್ತಿದ್ದಘಿ. ರಜಾ ದಿನದಲ್ಲಿ ತಾತನೊಂದಿಗೆ ಬೇಲೆ ಸುತ್ತುವುದು, ಮುರಿದ ಕೋಟೆಕೊತ್ತಲಗಳ ಚಾರಣಕ್ಕೆ ಹೋಗುವುದಿತ್ತುಘಿ. ಆಗರ್ಭ ಶ್ರೀಮಂತನಾಗಿದ್ದ ತಾತನು ಮನಸ್ಸು ಮಾಡಿದರೆ ತನ್ನ ಬೆಳ್ಳಿಯ ಬೆತ್ತದ ತುದಿಯಿಂದಲೇ ಬೆಲೆಬಾಳುವ ಒಡವೆಗಳನ್ನು ಎಗರಿಸಬಹುದಿತ್ತುಘಿ. ತಾತ, ಅಂದರೆ ತಾಯಿಯ ತಂದೆ. ಆತನೊಂದಿಗೆ ಹೋಗುವಾಗ ಬೇಲೆಯಲ್ಲಿ ಚಿಪ್ಪುಘಿ, ಶಂಖ ಸಂಗ್ರಹಿಸುತ್ತಿದ್ದರು. ಬೇಲೆಯ ಹೂತಿದ್ದ ಚಿಪ್ಪುಗಳನ್ನು ಬೆತ್ತದ ಮೊನೆಯಲ್ಲಿ ತಾತ ಕುಕ್ಕಿ ದಬ್ಬಿದರೆ, ಅದನ್ನು ಹೆರಕುವ ಮೊಮ್ಮಗ ಖುಷಿಯಿಂದ ಎದೆಗವಚಿಕೊಳ್ಳುತ್ತಿದ್ದಘಿ. ತಾತ, ಬ್ರಿಟ್‌ವೈಸರ್ ತಾಯಿಯ ತಂದೆ ಓರ್ವ ಆಗರ್ಭ ಶ್ರೀಮಂತ. ಬೀಚ್‌ಗೆ ಹೋಗುವಾಗಲೂ ದುಬಾರಿ ಬಟ್ಟೆಘಿ, ಟೆಲಿಸ್ಕೋಪ್ ಹಿಡಿದು ಜಾಲಿಯಾಗಿರುತ್ತದ್ದ ಮನುಷ್ಯಘಿ. ಪುಟ್ಟ ಬ್ರಿಟ್‌ವೈಸರ್‌ಗೆ ಅಜ್ಜನ ಕೋಲಿನಲ್ಲಿ ತುದಿಯಿಂದ ಎಗರುತ್ತಿದ್ದ ಚಿಪ್ಪುಗಳೆಂದರೆ ಅವ ಕೇವಲ ಚಿಪ್ಪುಗಳಲ್ಲಘಿ. ಮುತ್ತುಘಿ, ರತ್ನಘಿ, ಹವಳ ಇನ್ನೇನೋ ಆಗಿರುತ್ತಿದ್ದವು. ಕೆಲವೊಮ್ಮೆ ಇದನ್ನೆಲ್ಲ ಜೀಬು ತುಂಬಿಕೊಳ್ಳಲು ಹುಡುಗನಿಗೆ ಭಯವಾಗುತ್ತಿತ್ತುಘಿ, ಅಂತ ಸಂದರ್ಭದಲ್ಲಿ ಅಜ್ಜನೇ ನಿಶಾನೆ ಕೊಡುತ್ತಿದ್ದ ಕಾರಣ, ಧೈರ್ಯದಿಂದ ತುಂಬಿಕೊಂಡು ಅಜ್ಜನ ಮನೆಯ ಆಟದ ಕೋಣೆಯಲ್ಲಿ ತಂದು ತುಂಬಿಕೊಳ್ಳುತ್ತಿದ್ದಘಿ. ಅಜ್ಜನ ಮನೆ ಎಂದರೇ ಸ್ವರ್ಗ, ಅದರಲ್ಲೂ ನೆಲಮಾಳಿಗೆಯಲ್ಲಿ ತಾನು ಸಂಗ್ರಹಿಸಿದ ಕಪ್ಪೆಚಿಪ್ಪುಘಿ, ಕುಲುಮೆ ಗುಜರಿ, ಕುಂಬಾರಿಕೆಯ ತುಣುಕುಗಳ ನಡುವೆ ಕುಳಿತರೆ ಊಟ, ತಿಂಡಿಗಳೆ ಮರೆತುಹೋಗುತ್ತಿತ್ತುಘಿ. ‘‘ಅಲ್ಲಿರುವ ಪ್ರತೀ ವಸ್ತುವೂ ನನ್ನ ಜೀವದ ಕಣದಂತೆ ಇದ್ದವು’’ ಎಂದು ಬ್ರಿಟ್‌ವೈಸರ್ ಸ್ಮರಿಸುತ್ತಾನೆ. ಬ್ರಿಟ್‌ವೈಸರ್ ೧೯೭೧ರಲ್ಲಿ ಕಾಂದಾನಿ ಬೇರುಗಳು ಬಲವಾದ ಕು ಕುಟುಂಬದಲ್ಲಿ ಜನಿಸಿದ. ಕದ್ದು ದಕ್ಕಿಸಿಕೊಂಡ ಪ್ರದೇಶ ಎಂದೇ ಬಣ್ಣಿಸಲ್ಪಡು ಫ್ರಾನ್ಸ್ ದೇಶದ ಐಸಾಕ್ ಪ್ರಾಂತ್ಯದಲ್ಲಿ ಈತನ ಜನನ. ಕ್ರಿಶ್ಚಿಯನ್ ಹಿನ್ನೆಲೆಯ ಈತನಿಗೆ ಸಂಪ್ರದಾಯದಂತೆ ಪಾಲಕರು ಸ್ಟೀವನ್ ಗುಯಿಲಾಮ್ ಫ್ರೆಡ್ರಿಕ್ ಬ್ರಿಟ್‌ವೈಸರ್ ಎಂದು ನಾಮಕರಣ ಮಾಡಿದರು. ಅಪ್ಪ ಅಮ್ಮನ ಏಕೈಕ ಮಗುವಾಗಿದ್ದ ಈತನ ತಂದೆ ರೋನಾಲ್ಡ್ ಬ್ರಿಟ್‌ವೈಸರ್ ಡಿಪಾರ್ಟ್‌ಮೆಂಟಲ್ ಸ್ಟೋರ್ ಒಂದರಲ್ಲಿ ಮ್ಯಾನೇಜರ್ ಆಗಿದ್ದರು. ಈತನ ತಾಯಿ ಮಿರೇಲಿ ಸ್ಟೆಂಗಲ್ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಮಕ್ಕಳ ನರ್ಸ್ ಆಗಿದ್ದಳು. ಜರ್ಮನಿ, ಸ್ವಜರ್‌ಲ್ಯಾಂಡ್ ಗಡಿ ರೇಖೆಗಳ ನಡುವೆ ಸಿಕ್ಕಿಕೊಂಡಂತಿರುವ ಫ್ರಾನ್ಸ್‌ನ ಹಳ್ಳಯ ಶ್ರೀಮಂತ ಬಂಗಲೋ ಒಂದರಲ್ಲಿ ಡ್ಯಾಸ್‌ಹೌಂಡ್ ನಾಯಿಮರಿಯಂತೆ ಅಕ್ಕರೆಯಿಂದ ಈತನ ಬಾಲ್ಯ ಕಳೆಯಿತು. ಹಾಗಾಗಿ ಜರ್ಮನ್, ಫ್ರೆಂಚ್‌ನಲ್ಲಿ ಪಟಪಟ ಮಾತಾಡುತ್ತಿದ್ದರೆ, ಇಂಗ್ಲೀಷ್ ಕೂಡ ಬರುತ್ತಿತ್ತುಘಿ. ಜತೆಗೆ ಅಲ್ ಸೇಶಯನ್ ಮೂಲದ ಸಣ್ಣ ಪುಟ್ಟ ಭಾಷೆಯ ನುಡಿಗಟ್ಟೂ ತಿಳಿಯುತ್ತಿತ್ತುಘಿ. ಗಡಿ ಭಾಗದ ಶ್ರೀಮಂತ ಹಳ್ಳಿಯನ್ನು ಆಳಲು ಜರ್ಮನಿ, ಮತ್ತು ಫ್ರಾನ್ಸ್ ಯಾವತ್ತೂ ಕಚ್ಚಾಡುತ್ತಲೇ ಇರುತ್ತಿದ್ದ ಕಾರಣ, ಹಿಂದಿನ ೧೫೦ ವರ್ಷಗಳಲ್ಲಿ ಐದುಬಾರಿ ಅರಸೊತ್ತಿಗೆ ಬದಲಾಗುತ್ತಿತ್ತುಘಿ. ಮುಂದಿನ ಬಾರಿ ಫ್ರಾನ್ಸ್ ಅರಸರ ಪಾಳಿ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದರು. ಇಲ್ಲಿನ ಒಂದು ಶ್ರೀಮಂತ ಬಂಗಲೆಯಲ್ಲಿಘಿ, ರಂಗು ರಂಗಾದ ಬಂಗಲೆಯಲ್ಲಿ ಬ್ರಿಟ್‌ವೈಸರ್ ಇರುತ್ತಿದ್ದಘಿ. ೧೮ನೇ ಶತಮಾನದ ಕುಸುರಿಯ ಕೋಟು, ೧೭ನೇ ಶತಮಾನದ ದೊರೆ ಲೂಯಿಯ ಒರಗು ಕುರ್ಚಿ ಇವುಗಳಲ್ಲಿ ಹತ್ತು ಹೊರಬವುದು ಈತನ ಅಟಗಳಲ್ಲಿ ಒಂದಾಗಿತ್ತುಘಿ. ಹಿರಿಯರು ಹೊರಕ್ಕೆ ಹೋದಾಗ ಬಂಗಲೆಯ ಹಳೆಯ ಮಿಲಿಟರಿ ಪರಿಕರಗಳು, ನಿಲುವಂಗಿ, ಟೋಪಿಗಳನ್ನು ಹಾಕಿಕೊಂಡು ಕಾಲ್ಪನಿಕ ವೈರಿಗಳೊಂದಿಗೆ ಗೆಲುವಿನ ಡೈಲಾಗ್ ಹೊಡೆಯುತ್ತಿದ್ದ ದಿನಗಳು ಈಗಲೂ ಬ್ರಿಟ್‌ವೈಸರ್ ನೆನಪಿದೆ. ಬಡ್ಡಾಗಿ ಬಿದ್ದ ಖಡ್ಗಗಳನ್ನು ಚೀಲದಿಂದ ಹೊರ ತೆಗೆದು ಅಡ್ಡಾದಿಡ್ಡ ಝಳಪಿಸಿ ಕಾಲ್ಪನಿಕ ವೈರಿಯನ್ನು ಬಡಿಯುತ್ತಿದ್ದಘಿ. ಬಂಗಲೆಯ ಗೋಡೆಯು ಆ ಭಾಗದ ಖ್ಯಾತ ಕಲಾವಿದರ ಚಿತ್ರಗಳಿಂದ ತುಂಬಿರುತ್ತಿದ್ದವು. ಸಮೀಪದ ಗಲ್ಲಿಯೊಂದಕ್ಕೆ ನಾಮಕರಣ ಗೌರವ ಪಾತ್ರನಾಗಿದ್ದ ಅಲ್ ಸೇಶಿಯನ್ ಕಲಾವಿದ ರಾಬರ್ಟ್‌ ಬ್ರಿಟ್‌ವೈಸರ್ ನ ಅಭಿವ್ಯಕ್ತಿ ಕಾಲದ ಪೇಟಿಂಗ್ ಒಂದು ಅಲ್ಲಿ ಇತ್ತುಘಿ. ಆ ಕಲಾವಿದನು ಕುಟುಂಬದ ನಿಕಟ ಸದಸ್ಯನಾಗಿರಲಿಲ್ಲವಾದರೂ, ಈತನ ಮುತ್ತಜ್ಜನ ಸಹೋದರ. ಅಲ್ಲಿದ್ದ ದೊರೆ ಲೂಯಿಯ ಪೇಂಟಿಂಗ್‌ನ್ನು ೧೯೭೫ರಲ್ಲಿಘಿ, ಮುಕ್ತಾಯಗೊಳಿಸಿದ್ದುಘಿ, ಆಗಷ್ಟೇ ಬಾಲಕ ಬ್ರಿಟ್‌ವೈಸರ್ ಪ್ರಪಂಚದಲ್ಲಿ ಕಣ್ಣು ಬಿಡುತ್ತಿದ್ದಘಿ. ಪರಿಚಿತರಲ್ಲಿ , ತಾನು ಪ್ರಖ್ಯಾತ ಚಿತ್ರಕಲಾವಿದ ರಾಬರ್ಟ್‌ ಬ್ರಿಟ್‌ವೈಸರ್ ಮೊಮ್ಮಗ, ಆತನ ಕ್ಯಾನ್ವಾಸ್ ಭಾಗದಲ್ಲಿ ತಾನಿದ್ದೇನೆ ಎಂದು ಬ್ರಿಟ್‌ವೈಸರ್ ಜಂಬದಿಂದಲೇ ಹೇಳಿಕೊಳ್ಳುತ್ತಿದ್ದ. ಪ್ರಚಾರಕ್ಕಾಗಿ ಮಾತ್ರ ಇದೊಂದು ತೋರಿಕೆಯ ಮಾತಾಗಿತ್ತು ಬಿಟ್ಟರೆ, ತನ್ನ ತಂದೆಯ ಕುಟುಂಬದೊಂದಿಗೆ ಬ್ರಿಟ್‌ವೈಸರ್‌ಗೆ ಯಾವತ್ತೂ ಭಾವನಾತ್ಮಕ ಸಂಬಂಧವೇ ಇರಲಿಲ್ಲ. ಎಲ್ಲ ಮೊಮ್ಮಕ್ಕಳಂತೆ, ತಾಯಿ ಮೂಲದ ಶ್ರೀಮಂತ ತಾತ ಅಲೈನ್ ಫಿಲಿಪ್ ಹಾಗೂ ಅಜ್ಜಿ ಜೊಸೆಫ್ ಸ್ಟೆಂಜಿಲ್ ದಂಪತಿ ಎಂದರೆ ಬ್ರಿಟ್‌ವೈಸರ್ ಗೆ ಎಲ್ಲಿಲ್ಲದ ಗೌರವ. ತನಗೆ ತಿಳಿವಳಿಕೆ ಬರುವ ವಯಸ್ಸಿನ ಅತ್ಯುತ್ತಮ ದಿನಗಳು ಇವರೊಂದಿಗೆ ಕಳೆಯಿತು. ಆ ಹೊತ್ತಿನಲ್ಲೇ ಮತ್ತೊಮ್ಮೆ ನವೀಕರಿಸಿದ ತೋಟದ ಮನೆಯಲ್ಲಿ ನಡೆಯುತ್ತಿದ್ದ ವಾರಾಂತ್ಯದ ಬೆಳದಿಂಗಳೂಟ, ಕೆಲವೊಮ್ಮೆ ತಡ ರಾತ್ರಿಯ ತನಕವೂ ವಿಸ್ತರಿಸುತ್ತಿದ್ದ ಕ್ರಸ್ ಮಸ್ ಮಸ್ತಿಗಳು ಯಾವತ್ತೂ ಮರೆಯಲು ಸಾಧ್ಯವಿಲ್ಲಘಿ. ಒಂದನೇ ಶತಮಾನದಲ್ಲಿ ಜೀಸಸ್ ಸೈನ್ಯವು ಕೋಟೆ, ಕೊತ್ತಲ ನಿರ್ಮಿಸಿದ ಜಾಗವೆಂಬ ಐತಿಹ್ಯದ ಆರ್‌ಹೈನ್ ಕಣಿವೆಯಲ್ಲಿ ಅಜ್ಜನೊಂದಿಗೆ ನಡೆಸುತ್ತಿದ್ದ ಚಾರಣವಂತೂ ಬ್ರಿಟ್‌ವೈಸರ್ ಜೀವನದಲ್ಲಿ ಮರೆಯಲು ಸಾಧ್ಯವಿರಲಿಲ್ಲಘಿ. ಕೆಲವೊಮ್ಮೆ ಬೆಳೆಯುವ ಹುಡುಗರ ತುರ್ತು ಖರ್ಚಿನ ಹಣವನ್ನು ಪೂರೈಸುವ ಅಜ್ಜಂದಿರೂ ಮೊಮ್ಮಕ್ಕಳ ಸವಿನೆನಪಿನ ಭಾಗವಾಗಿರುತ್ತಾರೆ. ಒಬ್ಬನೇ ಒಬ್ಬ ಮೊಮ್ಮಗು ಎಂಬ ಕಾರಣಕ್ಕೆ ಏನೊಂದು ಕೊರತೆ ಆಗದಂತೆ ಹೇಳಿದ್ದನ್ನೆಲ್ಲ ಕೊಡಿಸುತ್ತಿದ್ದ ಎಂಬ ಕಾರಣಕ್ಕಾಗಿ ಕೂಡ ಅಮ್ಮಜ್ಜ ನೆನಪಿನಲ್ಲಿ ಉಳಿದರೂ, ಇದೇ ಕಾರಣದಿಂದ ಬ್ರಿಟ್‌ವೈಸರ್ ಒಂದಿಷ್ಟು ಹಾದಿ ತಪ್ಪುವುದಕ್ಕೂ ಮುಂದೆ ಕಾರಣವಾಗಿತ್ತುಘಿ. ಅಮ್ಮಜ್ಜ ಕೊಡುತ್ತಿದ್ದ ಕಾಸು ತುಂಬಿದ ಪಾಕೀಟನ್ನು ಜೇಬಿಗಿಳಿಸಿ ಅಲ್ಲಿ ಇಲ್ಲಿ ಸಂತೆಯಲ್ಲಿ ಮೋಜು ಮಾಡುವುದು, ಅದರೊಂದಿಗೆ ಹಳೆಯ ಕಾಲದ ನಾಣ್ಯಘಿ, ಬೆಲೆಬಾಳುವ ಹರಳು, ಕೆಲವೊಮ್ಮೆ ಬೀಟಿಯ ಪೀಠೋಪಕರಣಗಳನ್ನು ಕೊಂಡು ಕೊಳ್ಳುತ್ತಿದ್ದಘಿ. ಹಳೆಯ ಪೋಸ್ಟ್ ಕಾರ್ಡ್‌ಗಳು, ಒಳ್ಳೆಯ ಬೈಂಡ್ ಇರುವ ಪುಸ್ತಕ, ಗಿಳಿ ಮೂತಿಯ ಹಿಡಿಕೆಗಳು ಇಂಥವೆಲ್ಲ ಆಗಿನಿಂದಲೇ ಬ್ರಿಟ್‌ವೈಸರ್ ಸಂಗ್ರಹದಲ್ಲಿ ಸೇರತೊಡಗಿದವು. ಶಿಲಾಯುಗದ ಜನರು ಬಳಸುತ್ತಿದ್ದ ಆಯುಧಗಳು, ಕಂಚಿನ ಗುರಾಣಿ ತರದ ಮಿನಿಯೇಚರ್,ಲೋಹದ ಹೂವು, ಲೋಗೋಗಳು ಮೆಚ್ಚುಗೆಯಾದಲ್ಲಿ ಅದನ್ನು ಖರೀದಿಸುತ್ತಿದ್ದಘಿ. ಗ್ರೀಕ್, ರೋಮನ್ ಹಾಗೂ ಇಜಿಪ್ಶಿಯನ್ ಕಾಲದ ಪುರಾತನ ಕಲಾಕೃತಿಗಳೆಂದರೆ ಆತನಿಗೆ ಎಲ್ಲಿಲ್ಲದ ಪ್ರೀತಿ ಶುರುವಾಗಿದ್ದೂ ಈ ಹೊತ್ತಿನಲ್ಲೇ ಆಗಿತ್ತುಘಿ. ಅಮ್ಮಜ್ಜನ ಶ್ರೀಮಂತಿಕೆಯ ಹರಿವು ಸಾಮಾಜಿಕವಾಗಿ ಈತನಿಗೆ ಒಂದು ನಾಟಕೀಯ ಎತ್ತರವನ್ನು ತಂದಿದ್ದ ಕಾರಣ, ಒಳಗೊಳಗೆ ಏಕಾಂಗಿಯಾಗಿ ಒತ್ತಡವೂ ಈತನನ್ನು ಕಾಡುತ್ತಿತ್ತುಘಿ. ಆಗಿನ ಹೊತ್ತಿನಲ್ಲೇ ಹೊಳಪಿನ ಕಾಗದದಲ್ಲಿ ಮುದ್ರಣವಾಗುತ್ತಿದ್ದ ಕಟ್ಟಡ ಶಾಸ್ತ್ರ ಹಾಗೂ ಕಲೆಯ ದುಬಾರಿ ಮಾಸಿಕಗಳ ಚಂದಾದಾರನಾಗಿದ್ದಲ್ಲದೆ, ಕ್ಲಾಸಿಕಲ್ ಪುಸ್ತಕಗಳನ್ನೂ ತರಿಸಿ ಓದುವುದು ಈತನ ಹವ್ಯಾಸವಾಯಿತು. ಪುರಾತತ್ವ ಕುತೂಹಲಿಗಳ ಗುಂಪಿನಲ್ಲಿ ಗುರುತಿಸಿಕೊಂಡು ಒಂದಿಷ್ಟು ಸೇವಾ ಕಾರ್ಯದಲ್ಲೂ ತೊಡಗಿಕೊಳ್ಳಲು ಇದೇ ಕಾರಣವೂ ಆಗಿತ್ತುಘಿ. ಚಿಕ್ಕ ವಯಸ್ಸಿನಲ್ಲಿ ಇದೆಲ್ಲ ಮಾನಸಿಕ ಆಶ್ರಯವೇ ಆಗಿಹೋಯಿತು. ಎಲ್ಲೋ ಗಲ್ಲಿಯಲ್ಲಿ ಆಡಿಕೊಂಡು, ವೀಡಿಯೋಗೇಮ್, ಸಂಜೆಹೊತ್ತಿಗೆ ಪಾರ್ಟಿ ಎಂದು ಓಡಾಡಿಕೊಂಡಿದ್ದ ಈತನ ಹರಯದ ಇತರ ಹುಡುಗರಿಗೆ ಬ್ರಿಟ್‌ವೈಸರ್ ಅಭಿರುಚಿ ಮುಜುಗರ ಆಗುವಂತಿತ್ತುಘಿ. ಈ ವಯಸ್ಸಿನಲ್ಲೂ ಸಾಮಾಜಿಕ ಜಾಲ ತಾಣಗಳು, ಇನ್‌ಸ್ಟಾಗ್ರಾಮ್ ಪೋಸ್ಟ್ ಎಂದರೆ ಈತನಿಗೆ ಒಂದು ರೀತಿಯ ಅಸಡ್ಡೆಯೇ. ಅದೆಲ್ಲ ವ್ಯರ್ಥ, ಅಭಿರುಚಿ ಇಲ್ಲದವರ ಕಾಲ ಹರಣ, ಕೊಳಕು ಗೀಳು ಎಂದೇ ನಂಬುವ ವ್ಯಕ್ತಿತ್ವಘಿ. ಯಾರು ನಮಗೆ ಲೈಕ್ ಒತ್ತುತ್ತಾರೆ, ಯಾರೇನೋ ಅಂದುಕೊಳ್ಳಬಹದು ಎಂದು ನಾವೇಕೆ ತಲೆ ಬಿಸಿ ಮಾಡಿಕೊಳ್ಳಬೇಕು ಎಂದು ಹೇಳುವ ಜಾಯಮಾನ. ಬ್ರಿಟ್‌ವೈಸರ್‌ನ ತಂದೆ ತಾಯಿಯ ಆಶಯ ಬೇರೆಯದೇ ಆಗಿತ್ತು. ಮಗನು ತರಗತಿಯಲ್ಲಿ ಒಳ್ಳೆಯ ಅಂಕ ಪಡೆಯಬೇಕು, ಚೆನ್ನಾಗಿ ಕಲಿತು ವೃತ್ತಪರ ನ್ಯಾಯವಾದಿಯಾಗಬೇಕು ಎಂದೆಲ್ಲ ಕನಸು ಕಾಣುತ್ತಿದ್ದರೆ, ಹುಡುಗನಿಗೆ ಮಾತ್ರ ಶಾಲಾ ಕೊಠಡಿಗೆ ಸೀಮಿತನಾಗಿ ಕಲಿಯುವುದೆಂದರೆ, ಆಗುತ್ತಿರಲಿಲ್ಲಘಿ. ಇನ್ನೊಂದೆಡೆ ಸಹಪಾಠಿಗಳೆಲ್ಲ ಒಂದು ರೀತಿಯಲ್ಲಿ ಆಲೋಚಿಸುತ್ತಿದ್ದರೆ, ಈತನಿಗೆ ಹೊಳೆಯುವ ವಿಚಾರಗಳೆಲ್ಲ ತದ್ವಿರುದ್ಧವೇ ಆಗಿರುತ್ತಿತ್ತುಘಿ. ತುಸು ನರಪೇತಲನಂತೆ ಇದ್ದ ಈತನನ್ನು ಇತರ ವಿದ್ಯಾರ್ಥಿಗಳು ಗೇಲಿ ಮಾಡುತ್ತಿದ್ದರು. ಸಹಪಾಠಿಗಳೆದುರು ನಗೆಪಾಠಲಿಗೀಡಾಗುವ ಕೆಲವು ಸನ್ನಿವೇಶದಿಂದ ವಾರಗಟ್ಟಲೆ ಕುಗ್ಗಿ ಮನೆಯಲ್ಲಿಯೇ ಕುಳಿತುಬಿಡುತ್ತಿದ್ದಘಿ.ಇದರಿಂದ ಹೊರ ಬರಲು ಆಪ್ತ ಸಮಾಲೋಚಕರಲ್ಲಿ ಕೆಲವು ಬಾರಿ ಹೋಗಿ ಬರುತ್ತಿದ್ದನಾದರೂ, ತನ್ನ ಸಮಸ್ಯೆಗಳಿಗೆ ಪರಿಹಾರವೇ ಇಲ್ಲಘಿ, ತಪ್ಪು ಜಾಗದಲ್ಲಿಘಿ, ವಿಚಿತ್ರ ದೇಶದಲ್ಲಿ ತಾನು ಹುಟ್ಟಿ ಸಿಕ್ಕಿಹಾಕಿಕೊಂಡೆ ಎಂದೆಲ್ಲ ಆತನಿಗೆ ಅನ್ನಿಸುತ್ತಿತ್ತುಘಿ. ಚಿಕ್ಕ ಪುಟ್ಟ ಘಟನೆಗಳಿಂದ ಕುಗ್ಗಿ ಹೋಗುತ್ತಿದ್ದ ಬ್ರಿಟ್‌ವೈಸರ್‌ನ ವರ್ತನೆ ಆತನ ತಂದೆಗೆ ಹಲವು ಬಾರಿ ಆತಂಕ, ಕೋಪಕ್ಕೆ ಕಾರಣವಾಗುತ್ತಿತ್ತುಘಿ. ತಂದೆ ಒಂದು ರೀತಿಯಲ್ಲಿ ಕಟ್ಟು ನಿಟ್ಟಿನ ಅಕಾರಿಯಂತೆ ಮಗನಿಗೆ ಅದು ಇದು ಎಳೆದಾಡುವುದಿತ್ತುಘಿ. ಸುಮ್ಮನೇ ಕುಳಿತಿರುವ ಬದಲು ಏನಾದರೂ ಒಂದು ಕೆಲಸ ಕಾಣು ಎನ್ನುವುದಿತ್ತುಘಿ. ಆದರೆ ಹುಡುಗ ಸುಧಾರಿಸುವ ಲಕ್ಷಣ ಕಾಣದೇ ಹೋದಾಗ, ಒಂದು ಬೇಸಿಗೆಯಲ್ಲಿ ಕರೆದು, ಪ್ಯೂಗಟ್ ಪ್ರದೇಶದ ಅಟೋ ಉದ್ಯಮದ ಚಾಳವೊಂದರಲ್ಲಿ ಕೆಲಸಕ್ಕೆ ಸೇರಿಸಿ, ದಿನದ ಹೆಚ್ಚು ಕಾಲದ ಮೈ ಬಗ್ಗಿಸಿ ದುಡಿಯುವುದರಿಂದಾದರೂ, ಬಾಲಕ ಸುಧಾರಿಸಬಹುದು ಎಂದುಕೊಂಡಿದ್ದಘಿ. ತಂದೆ ಅಂದಾಜಿಸಿದಂತೆ ಆಶ್ಚರ್ಯವೇನೂ ಘಟಿಸಲಿಲ್ಲಘಿ, ಹೊರತಾಗಿ ಒಂದೇ ವಾರದಲ್ಲಿ ಅಲ್ಲಿನ ಕೆಲಸ ಬಿಟ್ಟಘಿ. ‘ ಆ ಘಟನೆಯಿಂದ ನನ್ನ ಬಗ್ಗೆ ಈ ಹುಡುಗ ಎಲ್ಲಿಯೂ ಸಲ್ಲದ ನಿಷ್ಪ್ರಯೋಜಕ’’ ಎಂದುಕೊಂಡಿರಬೇಕು. ಇನ್ನೊಂದೆಡೆ, ಮಗನ ವರ್ತನೆಯನ್ನು ನೋಡಿ ತಾಯಿ ಕರುಳಿನ ಸ್ಪಂದನೆಯೇ ಬೇರೆ ರೀತಿ ಆಗಿತ್ತುಘಿ. ಮಗನನ್ನು ದಾರಿಗೆ ತರಲು ಒಮ್ಮೊಮ್ಮೆ ತಾಯಿ ಸಟ್ಟೆದ್ದು ಎಗರಾಡುತ್ತಿದ್ದಳು, ಮತ್ತೊಮ್ಮೆ ಏನೂ ಆಗಿಲ್ಲ ಎಂಬಂತೆ ‘‘ಏನಾದರೂ ಹಾಳಾಗು’’ ಎಂದು ಆಚೆ ಹೋಗಿಬಿಡುತ್ತಿದ್ದಳು. ಮನೆಯಲ್ಲಿ ತಂದೆ ಹಾಗೂ ಮಗನ ನಡುವೆ ಆಗಾಗ ನಡೆಯುತ್ತಿದ್ದ ಜಗಳ, ದೊಂಬಿಯಲ್ಲಿ ಕೆಲವೊಮ್ಮೆ ಮಗನ ಪಕ್ಷವನ್ನೂ ವಹಿಸಿಕೊಂಡರೂ, ಹೆಚ್ಚು ಮಾತಾಡದೇ ಸುಮ್ಮನೇ ಇರುತ್ತಿದ್ದಳು. ವ್ಯರ್ಥ ಕಾಲ ಹರಣ ಮಾಡುತ್ತಿದ್ದ ಮಗನಿಗೆ, ಅದರಲ್ಲೂ ಒಮ್ಮೆ ಗಣಿತದಲ್ಲಿ ಸಿಂಗಲ್ ಡಿಜಿಟ್‌ನ ಅಂಕಪತ್ರಿಕೆಯನ್ನು ಮನೆಗೆ ತಂದಾಗ ‘‘ಇದನ್ನೆಲ್ಲ ನಿಮ್ಮ ತಂದೆ ನೋಡಿದರೆ ಸಿಟ್ಟು ಮಾಡುತ್ತಾರೆ ಕಣೊ’’ ಎಂದು ಎಚ್ಚರಿಸುತ್ತಿದ್ದಳು. ಆದರೆ, ಅಂಕಪತ್ರದಲ್ಲಿ ಗಣಿತದ ಅಂಕವನ್ನು ತಿದ್ದಿ ಡಬಲ್ ಡಿಜಿಟ್ ಮಾಡಿಕೊಂಡ ಮಗನ ತಪ್ಪು ತಿಳಿದರೂ, ತಾಯಿ ಏನೂ ಮಾತಾಡದೆ, ಮೌನ ಸಮ್ಮತಿಯನ್ನೂ ತೋರಿದ್ದಳು. ಆತ ಏನು ಹೇಳಿದರೂ ಗೋಣು ಅಲ್ಲಾಡಿಸುವುದು, ಆತನ ತಪ್ಪನ್ನು ಸಮ್ಮತಿಸುವುದು ಕ್ರಮೇಣ ಅವರ ಸಂಬಂಧದ ಸ್ಥಾಯಿಭಾವವೇ ಆಯಿತು. ತುಂಬ ಮಂಕು ಕವಿದಂತೆ ಕುಳಿತುಕೊಂಡಾಗ ಬ್ರಿಟ್‌ವೈಸರ್ ನನ್ನು ಯಾವುದಾದರೂ ಮ್ಯೂಸಿಯಂ ಗೆ ಕರೆದೊಯ್ದರೆ ಜೀವಕಳೆ ಬರುತ್ತದೆ ಎಂದು ತಿಳಿಯುತ್ತಲೇ ಆತನ ತಂದೆ ತಾಯಿಗಳು, ಅನಿವಾರ್ಯವಾಗಿ ಅದಕ್ಕೂ ಹೊಂದಿಕೊಂಡರು. ಸಮೀಪದ ಸಣ್ಣಪುಟ್ಟ ಮ್ಯೂಸಿಂಗಳಲ್ಲಿ ಒಂದಕ್ಕೆ ಆತನನ್ನು ಕಳುಹಿಸಿ, ಸುಮ್ಮನೇ ಸುತ್ತಾಡಲು ಅವಕಾಶಮಾಡಿಕೊಡುತ್ತಿದ್ದರು. ಮ್ಯೂಸಿಯಂನಲ್ಲಿ ಯಾವುದಾದರೂ ಒಂದು ಜಾಗದಲ್ಲಿ ಕುಳಿತು ಚಿತ್ರಕಲೆ, ಮ್ಯೂರಲ್‌ಗಳನ್ನು ನೋಡುತ್ತಘಿ, ಅವುಗಳನ್ನು ಮುಟ್ಟಿ ಹಿತಾನುಭವ ಪಡೆಯುವುದಲ್ಲದೆ, ಪ್ರಸಿದ್ಧ ಲಾಕೃತಿಗಳಲ್ಲಿಘಿ, ಅಲ್ಲಲ್ಲಿ ಸಿಗುವ ಸಣ್ಣಪುಟ್ಟ ವಕ್ರವನ್ನು ಕಂಡು ಹಿಡಿಯುವುದರಲ್ಲಿ ಖುಷಿಪಡುತ್ತ ಕಾಲ ಹರಣ ಮಾಡುತ್ತಿದ್ದಘಿ. ವಾಸ್ತವದಲ್ಲಿ ಯಾವುದೇ ಕಲಾವಿದನೂ ಪರಿಪೂರ್ಣನಲ್ಲಘಿ, ಯಾವುದೇ ಒಂದು ಗೆರೆಯೂ ಇನ್ನೊಂದರಂತೆ ಇರುವುದಿಲ್ಲ ಎಂಬುದು ಕಲಾ ವಲಯದಲ್ಲಿ ಸರ್ವಸಮ್ಮತವಾದ ವಿಚಾರ ತಾನೆ, ಇದನ್ನು ಬ್ರಿಟ್‌ವೈಸರ್ ಬೇರೆಯದೇ ರೀತಿಯಲ್ಲಿ ತೆಗೆದುಕೊಳ್ಳುತ್ತಿದ್ದಘಿ. ಅಂತೂ ಹಾಗೂ ಹೀಗೂ ಮಾಡಿ ಈತನ ಮೂಡು ಒಂದು ಸುಸ್ಥಿತಿಗೆ ಬರುತ್ತಲೇ ಪಾಲಕರು ಹೋಗಿ ಈತನನ್ನು ಕರೆತರುತ್ತಿದ್ದರು. ಇಂಥ ಸನ್ನಿವೇಶದಲ್ಲೂ ಕೆಲವೊಮ್ಮೆ ಅಪಘಾತಗಳು ಆಗುವುದಿದೆ. ಸ್ಟ್ರಾಂಗ್‌ಬರ್ಗ್‌ನ ಮ್ಯೂಸಿಯಂ ಒಂದರಲ್ಲಿ ಹೀಗೆ ಲೋಹದ ಶಿಪ್ಪದ ಮೇಲೆ ಬೆರಳಾಡಿಸಿ ಖುಷಿಯ ಲಹರಿಯಲ್ಲಿದ್ದ ಬ್ರಿಟ್‌ವೈಸರ್ ಬೆರಳು, ರೋಮನ್ ಶವಪೆಟ್ಟಿಗೆಯ ಬಿಚ್ಚಿಕೊಡ ದಬ್ಬೆಯೊಳಗೆ ಸಿಲುಕಿಕೊಂಡಿತು. ಕೈ ಬೆರಳನ್ನು ಆಚೆ ಸೆಳೆಯುವ ಬರದಲ್ಲಿ ಒಂದು ನಾಣ್ಯದ ಗಾತ್ರದ ಗಾಜಿನ ಕೆತ್ತೆಯೊಂದು ಬ್ರಿಟ್‌ವೈಸರ್ ಕೈಯ್ಯಲ್ಲಿ ಕಿತ್ತುಕೊಂಡು ಬಂದಿತು. ಅದೊಂದು ವಿಚಿತ್ರ ಉಭಯ ಸಂಕಟವಾಗಿ ಆಚೆ ಈಚೆ ನೋಡುತ್ತಘಿ, ಕಿತ್ತು ಬಂದ ಸುಂದರ ಕೆತ್ತೆಯನ್ನು ಅಮುಕಿ ಜೇಬಿಗೆ ಹಾಕಿಕೊಂಡ. ತಾನು ನಂಬುತ್ತಿದ್ದ ಪುರಾತತ್ವ ದೈವವೇ ತನಗೆ ಇದೊಂದು ಪ್ರಸಾದ ರೂಪದಲ್ಲಿ ಕೊಟ್ಟ ಕೊಡುಗೆ ಎಂದು ಒಮ್ಮೆ ರೋಮಾಂಚಿತನೂ ಆದ. ತಾತನೊಂದಿಗೆ ಕೋಟೆ ಕೊತ್ತಲ ಸುತ್ತುವಾಗ, ಅಲ್ಲಿ ಇಲ್ಲಿ ಸಿಗುತ್ತಿದ್ದ ಕಲಾ ತುಣಿಕುಗಳು, ಬೇರೊಂದು ಸ್ಥಳದಲ್ಲಿ ತನಗೆ ಈ ಬಾರಿ ದಕ್ಕಿತು ಎಂದುಕೊಂಡು ಒಳಗೊಳಗೇ ಪುಳಕಿತನೂ ಆದ. ಹಾಗೆ ನೋಡಿದರೆ, ಇದೊಂದು ಚಿಕ್ಕ ಅವಘಡ. ಎಕ್ಸಿಡೆಂಟ್ ಎಂದು ಕಂಡರೂ, ಆತ ಮುಂದೆ ಬೃಹತ್ ಮಾಸ್ಟರ್ ಪೀಸ್‌ಗಳನ್ನು ಎಗಿರಿಸಲು ಜೀವನದ ಮೊದಲ ಯಶಸ್ವೀ ಅಡ್ಡದಾರಿಯೂ ಆಯಿತು. ಮನೆಗೆ ಬಂದು ಈ ತುಣುಕನ್ನು ತನ್ನ ಕೆಳಮನೆಯ ಕೋಣೆಯಲ್ಲಿಘಿ, ಚಾರಣದಲ್ಲಿ ಸಿಕ್ಕ ತುಣುಕು, ಮಿಣುಕುಗಳ ಜತೆಯಲ್ಲೇ ಇದನ್ನೂ ಇಟ್ಟುಕೊಂಡ, ಆಗ ನೋಡಿದರೂ, ಹತ್ತಾರು ಶತಮಾನಗಳ ಹಿಂದೆ ಯಾವುದೋ ಶಿಲ್ಪಿ ತಯಾರಿಸಿದ ಆ ತುಣುಕ ಜೋಪಾನವಾಗಿಯೇ ಇದೆ. ಅದರ ಪಕ್ಕದಲ್ಲಿ ಈ ಹಿಂದೆ ತಾನು ಖರೀದಿಸಿ ತಂದ ಬೆಲೆ ಬಾಳುವ ಮಣಿಗಳು, ಗೋರಿಲ್ಲಾ ತರ ಕಾಣುವ ಕಾಫಿ ಬೊಡ್ಡೆಗಳು ಎಲ್ಲವೂ ಒಂದಕ್ಕೊಂದು ತಾಗಿಕೊಂಡು ಕುಖಿತಿವೆ. ಆಗಲೇ ಹೇಳಿದಂತೆ ಕೆಳಮನೆಯ ಈ ಪ್ರಪಂಚಕ್ಕೆ ಹೋದರೆ, ಮತ್ತೆ ಕಳೆದುಹೋಗುವಷ್ಟು ಕತೆಯಲ್ಲಿ ತಲ್ಲೀನನಾಗುತ್ತಿದ್ದ ಬ್ರಿಟ್‌ವೈಸರ್. ಹದಿಹರಯದಲ್ಲಿ ಸಂಗೀತದ ಪರಿಕರಗಳು ಹಾಗೂ ವೈದ್ಯಕೀಯ ಸ್ಟೆತಾಸ್ಕೋಪ್ ಮತ್ತಿತರ ಸಾಧನಗಳ ಬಗ್ಗೆ ಈತನಿಗೆ ಎಲ್ಲಿಲ್ಲದ ಕುತೂಹಲ ಇತ್ತುಘಿ. ಪಾನೀಯ ಲಾಳಿಕೆಗಳು, ಔನ್ಸ್‌ಗಳ ಕೊಕ್ಕುಘಿ, ದಾಗಿನಿಗಳನ್ನು ಇಡುತ್ತಿದ್ದ ಸುಂದರ ಪೆಟ್ಟಿಗೆ, ಅಲಾದಿ ದೀಪಗಳು, ಬಂದೂಕಿನ ಹೊದಿಕೆ, ಖಡ್ಗದ ವರೆ, ಚರ್ಮದ ಶಿರಸ್ತ್ರಾಣ, ಬತ್ತಳಿಕೆ, ಮನೆಯಲ್ಲಿ ತಂದೆ ಬಳಸುತ್ತಿದ್ದ ಪೀಠೋಪಕರಣ, ವಾಚುಗಳ ಪೆಟ್ಟಿಗೆ ಆಗೀಗ ಎತ್ತಿ ನೋಡಿ ಖುಷಿಪಡುತ್ತಿದ್ದಘಿ. ದಂತದಿಂದ ಸಿದ್ಧಪಡಿಸಿದ ತಂಬಾಕಿನ ಪೆಟ್ಟಿಗೆ, ಆ್ಯಂಟಿಕ್ ಪುಸ್ತಕಗಳು, ಹುಕ್ಕಾಗಳು ಹೀಗೆ ಐಶಾರಾಮಿ ಸಂದರ್ಭ ಬಳಸುವ ಹಳೆಯ ಪರಿಕರಗಳನ್ನು ಯಾವತ್ತೂ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಆತನ ಹವ್ಯಾಸವೇ ಆಗಿತ್ತುಘಿ. ಹೀಗೆ ಇಂಥದ್ದರಲ್ಲೇ ಲೋಕ ಮರೆಯುತ್ತಿದ್ದ ಮಗನ ಬಗ್ಗೆ ಒಂದೆರಡು ಬಾರಿ ಮೃದು ಮಾತಿನಲ್ಲಿ ಎಚ್ಚರಸಿದರು, ಕ್ರಮೇಣ ಬಯ್ದು ಆತನನ್ನು ಹದ್ದುಬಸ್ಥಿನಲ್ಲಿಡಲು ತಂದೆಯೂ ಪ್ರಯತ್ನಿಸಿದರು. ಹಾಗೇ ನಡೆಯುತ್ತಲೇ ಇದ್ದಾಗ, ೧೯೯೧ ರಲ್ಲಿ ಬ್ರಿಟ್‌ವೈಸರ್ ಪ್ರೌಢ ಶಿಕ್ಷಣವನ್ನೂ ಪಡೆದು ಹೊರಬಂದ. ಈಹೊತ್ತಿನಲ್ಲಿ ಮನೆಯಲ್ಲಿ ಆಗೀಗ ನಡೆಯುತ್ತಲೇ ಇದ್ದ ಗದ್ದಲದಿಂದ ಬೇಸತ್ತ ನೆರೆ ಕೆರೆಯವರು ಕೆಲವು ಬಾರಿ ಪೊಲೀಸರಿಗೂ ದೂರು ನೀಡಿದರು. ಇದೇ ಹಂತದಲ್ಲಿ ಮನೆಯಲ್ಲಿ ಬಿರುಕು ಮತ್ತಷ್ಟು ವಿಸ್ತಾರವಾಗಿ, ತಂದೆ, ಮನೆಯನ್ನು ಬಿಟ್ಟು ಹೋದರು. ಹೋಗುವಾಗ ಬ್ರಿಟ್‌ವೈಸರ್ ತುಂಬ ಹಚ್ಚಿಕೊಂಡ ಪೀಠೋಪಕರಣ, ಕೆಲವು ಮಿಲಿಟರಿ ಗುರಾಣಿತರದ ಎಂಟಿಂಕ್, ಚಿಕ್ಕವನಿರುವಾಗ ರಚಿಸಿಕೊಟ್ಟ ಸುಂದರವಾದ ಪೇಂಟಿಂಗ್, ವಾಚುಗಳ ಪೆಟ್ಟಿಗೆ ಸಹಿತ, ಬ್ರಿಟ್‌ವೈಸರ್ ಪ್ರಾಣ ಇಟ್ಟುಕೊಂಡ ಯಾವೊಂದು ವಸ್ತುವನ್ನೂ ಬಿಡದೆ, ಇದು ತನಗೆ ತಲೆಮಾರುಗಳಿಂದ ಬಂದ ಸ್ವಂತದ ಆಸ್ತಿ ಎಂದು ತಂದೆ, ಪ್ಯಾಕ್ ಮಾಡಿಕೊಂಡೇ ಮನೆಯಿಂದ ಆಚೆ ಹೋದಾಗ, ನಿಜ ಅರ್ಥದಲ್ಲಿಘಿ, ತಾಯಿ ಮಗ ಪರದೇಸಿಯೇ ಆದರು. ಜೀವಂತ ಅಪ್ಪ ಹಾಗೂ ಜೀವ ಇಟ್ಟುಕೊಂಡಿದ್ದ ಕಲಾಕೃತಿ, ದಾಗಿನಿಗಳೆರಡನ್ನೂ ಬ್ರಿಟ್‌ವೈಸರ್ ತನ್ನ ಹತ್ತೊಂಬತ್ತನೇ ವಯಸ್ಸಿನಲ್ಲಿ ಸಂಪೂರ್ಣ ಕಳೆದುಕೊಂಡು ಮಾನಸಿಕವಾಗಿ ಪರಿತ್ಯಕ್ತ ಭಾವನೆಯಲ್ಲಿ ಮುಳುಗಿದ. ನಂತರ ದಿನಗಳಲ್ಲಿ ತಾಯಿ ಮಾತ್ರ ಈತನ ಜತೆಯಲ್ಲಿದ್ದುದು ಬಿಟ್ಟರೆ, ತಂದೆಸಂಪರ್ಕವೇ ಕಡಿದುಹೋಯಿತು. ಜೀವನಾಧಾರ ಅಲುಗಾಡುತ್ತಲೇ ತಾಯಿ ಮಗನಿಗೆ ದೊಡ್ಡ ಮನೆಯಲ್ಲಿ ಇರುವುದು ಸಾಧ್ಯವಾಗದೆ, ಒಂದು ಅಪಾರ್ಟ್‌ಮೆಂಟ್ ಬಾಡಿಗೆ ಮನೆಗೆ ಸ್ಥಳಾಂತರ ಹೊಂದಬೇಕಾಯಿತು. ‘‘ ಹೊಸ ಮನೆಗೆ, ದೃತಿಗೆಟ್ಟ ನನ್ನನ್ನು ಹಾಗೂ ಇಕಿಯಾ ಕಂಪೆನಿಯ ಒಂದಿಷ್ಟು ಹೊಸ ಪೀಠೋಪಕರಣಗಳನ್ನು ತಂದು ಹಾಕಿದಳು.’’ ಎಂದು ತಾಯಿಯ ಅಂದಿನ ದಿನಗಳನ್ನು ಬ್ರಿಟ್‌ವೈಸರ್ ಸ್ಮರಿಸುತ್ತಾನೆ. ಅಪ್ಪನಿದ್ದ ಕಾಲದಲ್ಲಿ ಒಂದು ಸ್ವಂತ ನಾವೆಯನ್ನು ಹಾಗೂ ಮರಸಿಡೀಸ್ ಕಾರನ್ನು ಹೊಂದಿದ್ದ ಈ ಕುಟುಂಬ ಸಾಮಾಜಿಕವಾಗಿ ಸಂಪೂರ್ಣ ಕೆಳಕ್ಕೆ ಬಂದು, ಸರಕಾರಿ ಸಾರಿಗೆ ಬಸ್ಸುಗಳಲ್ಲಿ ಅಬ್ಬೇಪಾರಿಗಳಂತೆ ಸಂಚರಿಸುವ ಸ್ಥಿತಿಗೆ ತಲುಪಿತು. ಬದಲಾದ ತನ್ನ ಸಾಮಾಜಿಕ ಸ್ಥಿತಿಗತಿಯು, ಕೆಲವು ಬೇಜವಾಬ್ದಾರಿಗೂ ಹೇತುವಾಗ, ಕೆಲವೊಮ್ಮೆ ಅಂಗಡಿಗೆ ನುಗ್ಗಿ ಬಅಎಬರೆ, ದಿನಸಿ, ಕೆಲವೊಂದು ಬೆಲೆ ಬಳುವ ಗ್ಹೋಪಕರಣಗಳನ್ನೂ ಕದ್ದು ಮನೆಗೆ ತುಂಬಉವ ಮೂಲಕ, ಬ್ರಿಟ್‌ವೈಸರ್ ಮಾನಸಿಕವಾದ ಅಸಮಾನತೆಯನ್ನು ತುಂಬಿಕೊಳ್ಳಲು ಹೇಸಲಿಲ್ಲಘಿ. ಇದೆಲ್ಲದರ ಪರಿಣಾಮವಾಗಿ ಪೋಲೀಸು, ಕೋರ್ಟು, ಲಾಟಿ ಏಟುಗಳ ಅನುಭವ ಆಗತೊಡಗಿತು. ಇದರಿಂದೆಲ್ಲ ಬ್ರಿಟ್‌ವೈಸರ್, ‘‘ಏನೇ ಮಾಡಿದರೂ ಈ ಪೊಳಿಸರು ಹಾಗೂ ಕಾನೂನು ಕಟ್ಟಳೆ, ಸಾರ್ವಜನಿಕರ ಕೈಗೆ ಸಿಕ್ಕಿಹಾಕಿಕೊಳ್ಳಬಾರದು’’ ಎಂದು ಎಚ್ಚರಿಕೆಯ ಪಾಠ ಕಲಿತ. ಮಗಳು ಹಾಗೂ ಮೊಮ್ಮಗನ ಬದಲಾದ ಸ್ಥಿತಿಯ ಬಗ್ಗೆ ಅಮ್ಮಜ್ಜ ಮರುಗಿ, ಒಂದಿಷ್ಟು ಸಹಾಯ ಮಾಡಿ ಒಂದು ಕಾರನ್ನೂ ಕೊಡಿಸಿ ಒಂದಿಷ್ಟು ಬೆಂಬಲಕ್ಕೆ ನಿಂತರು ನಿಜ. ಆದರೆ, ಈ ಬೆಂಬಲವು, ಬ್ರಿಟ್‌ವೈಸರ್‌ನಲ್ಲಿದ್ದ ಕಳ್ಳನನ್ನೇ ಇನ್ನಷ್ಟು ಪುಸಲಾಯಿಸಿದಂತೆ ಆಯಿತು. ಅಜ್ಜ ಕೊಟ್ಟ ಕಾರನ್ನು ಹೆಮ್ಮೆಯಿಂದ ಓಡಿಸುವಾಗ ಒಮ್ಮೆ ಪಾರ್ಕಿಂಗ್ ಗಲಾಟೆಯಲ್ಲಿ ಮತ್ತೆ ಪೊಲೀಸ್ ಠಾಣೆಯನ್ನು ಸೇರುವಂತಾಯಿತು. ಇನ್ನೊಂದು ಅಂಗಡಿ ನುಗ್ಗಿದ ಘಟನೆಯಲ್ಲಂತೂ ಪೊಲೀಸರು ಹೊಡೆಯುವಾಗ ತಿರುಗಿ ಬಿದ್ದುಘಿ, ಪೊಲೀಸ್ ಅಕಾರಿಯ ಬೆರಳನ್ನೇ ತಿರುಪಿದ ಕಾರಣ, ಪ್ರಕರಣ ಇನ್ನಷ್ಟು ಸಂಕೀರ್ಣವಾಗಿ ಸ್ಥಳೀಯ ಕೋರ್ಟ್ ಒಂದು ಈತನನ್ನು ಎರಡು ವಾರಗಳ ಕಾಲ ವರ್ತನಾ ಚಿಕಿತ್ಸೆಯ ಜೈಲಿಗೆ ಹಾಕಿದರು. ಚಿತ್ರ ವಿಚಿತ್ರ ಒದ್ದಾಟ, ಜಗ್ಗಾಟ, ಜಂಜಡದಲ್ಲಿ ಸಿಲುಕಿದ ಬ್ರಿಟ್‌ವೈಸರ್ ತನ್ನ ವರ್ತನೆಗಳನ್ನು ದಕ್ಕಿಸಿಕೊಳ್ಳಲಾಗದೆ, ಮಾನಸಿಕ ಒತ್ತಡಕ್ಕೊಳಗಾಗಿ ಒಂದೆರಡು ಬಾರಿ ಆತ್ಮ ಹತ್ಯೆಯ ಆಲೋಚನೆಗಳೂ ಬಂದವು. ಇದರಿಂದ ಹೊರಕ್ಕೆ ಬರಲು, ಮಾನಸಿಕ ನೋವು ನಿವಾರಕ ರೊಲೊಫ್ಟ್ ಮಾತ್ರೆಗೀಗೆ ಮೊರೆ ಹೋದ. ಆ ಮಾತ್ರೆಗಳು ತನಗೆ ಸಂಪೂರ್ಣ ಪರಿಹಾರವಾಗದಿದ್ದರೂ, ಅಲ್ಲಿಂದಲ್ಲಿಗೆ ನಿರ್ವಹಣೆಯ ಅವಕಾಶ ಮಾಡಿತಲ್ಲದೆ, ತನ್ನ ಇಪ್ಪತ್ತನೇ ವಯಸ್ಸಿನ ಹೊತ್ತಿಗೆ ಪ್ರಸಿದ್ಧ ಮುಲ್‌ಹೌಸ್ ಮ್ಯೂಸಿಯಂನಲ್ಲಿ ಒಂದು ಚಿಕ್ಕ ಉದ್ಯೋಗ ದಕ್ಕಿಸಿಕೊಳ್ಳುವ ಮಟ್ಟಿಗೆ ಈತನಿಗೆ ಸಹಾಯವಾಯಿತು. ಆ ದಿನಗಲ್ಲಿ ಓರ್ವ ಗಾರ್ಡ್ ಆಗಿ ಮ್ಯೂಸಿಯಂನಲ್ಲಿ ನಲ್ಲಿ ಪ್ರಸಿದ್ಧ ಕಲಾವಿದರ ಚಿತ್ರಗಳನ್ನು ಇನ್ನಷ್ಟು ನಿಕಟವಾಗಿ ನೋಡುವುದು, ಇಂಥ ಸ್ಥಳಗಳಲ್ಲಿ ಭದ್ರತೆಯ ಕೆಲವು ಹುಳುಕುಗಳನ್ನು ತಿಳಿಯುತ್ತ ಮನೋ ಕ್ಷೇಬೆಯಿಂದ ಹೊರ ಬರಲು ನೌಕರಿಯೇ ಸಹಾಯ ವಾಯಿತು. ಆದರೂ ದೀರ್ಘ ಕಾಲ ಒಂದೆಡೆ ನಿಲ್ಲಬೇಕಾದ ಗಾರ್ಡ್ ಕೆಲಸದ ನಿಜವಾದ ಬೇಸರ ಅರಿವಾಗತೊಡಗಿತು. ಮ್ಯೂಸಿಯಂ ಸೆಕ್ಯುರಿಟಿ ನೌಕರಿಯಿಂದ ಹೊರ ಬರುವ ಹೊತ್ತಿಗೆ ಆತನಿಗೆ ದಕ್ಕಿದ ಎರಡು ಪ್ರಾಪ್ತಿಯಲ್ಲಿ ಮೊದಲನೆಯದು ಇಲ್ಲಿನ ಭಧ್ರಾ ಒಳನೋಟಗಳು, ಇನ್ನೊಂದು ಮುಲ್‌ಹೌಸ್ ಮ್ಯೂಸಿಯಂನ ಮೇಲ್ಮಹಡಿಯಲ್ಲಿ ಇಡಲಾಗಿದ್ದ ಐದನೇ ಶತಮಾನದ ಒಂದು ಬೆಲೆಬಾಳುವ ಬೆಲ್ಟ್‌ಘಿ. ಮ್ಯೂಸಿಯಂನ ಮೇಲ್ಮಹಡಿಯಲ್ಲಿ ಇಡಲಾಗಿದ್ದ ಫ್ರೆಂಚ್ ಮೊರ್ವಿಯನ್ ದೊರೆಗಳ ಸೊಂಟದ ಪಟ್ಟಿಯ ಲೋಹದ ಹುಕ್‌ಘಿ, ಆ ಜಾಗದಲ್ಲಿ ಕಳವಾಗಿದೆ ಎಂಬ ಯಾವೊಂದು ಗುರುತೂ ಬಿಡದ ರೀತಿಯಲ್ಲಿ ಎಗರಿಸಿಕೊಂಡು ಬ್ರಿಟ್‌ವೈಸರ್ ಮ್ಯೂಸಿಯಂ ನೌರಿಗೆ ವಿದಾಯ ಹೇಳಿ ಬಂದ. ಅಪ್ಪನ ವಿದಾಯದ ಜೊತೆಗೆ, ಆ ಮನೆಯ ಬೇಸ್ಮೆಂಟ್‌ನಲ್ಲಿ ಈತ ಇಟ್ಟಿದ್ದ ಈಗನ ಆಂಟಿಕ್ ಗಳಿಕೆಯ ಪೆಟ್ಟಿಗೆಯೂ, ಈತನೊಂದಿಗೆ ತಾಯಿ ಹಿಡಿದ ಅಪಾರ್ಟ್‌ಮೆಂಟ್‌ನ ಎಕೆಬಾ ಕಪಾಟಿಗೆ ಸ್ಥಳಾಂತರ ಆಯಿತು. ಅದಾದ ನಂತರ ಇತ್ತೀಚೆಗೆ ಮ್ಯೂಸಿಯಂನಲ್ಲಿ ಎಗರಿಸಿದ ಸೊಂಟದ ಪಟ್ಟಿಯ ಲೋಹದ ಹುಕ್‌ಘಿಸಹಿತ ಇನ್ನೂ ಇತರ ಗಳಿಗೆ, ಪ್ರಾಪ್ತಿಗಳು ಒಂದೊಂದಾಗ ಈ ಮನೆಯಲ್ಲಿ ಬಂದು ಕುಳಿತವು. ಹಾಗೆ ನೊಡಿದರೆ, ಇವೆಲ್ಲ ಈತನ ಸ್ವಂತದ್ದಾಗಿರುವುದರಿಂದ ಯಾರೂ ಅದು ತನ್ನದು, ಮನೆತನದ ಆಸ್ತಿ ಎಂದೆಲ್ಲ ಹೇಳುವಂತೆ ಇರಲಿಲ್ಲಘಿ. ಆತನಿಂದ ಇನ್ನೆಂದೂ ಬಿಟ್ಟು ಹೋಗುವ ಪ್ರಶ್ನೆಯೇ ಇರಲಿಲ್ಲಘಿ. ಅಪ್ಪ ಬಿಟ್ಟುಹೋದ ನಂತರ ಆ ಕಪಾಟನ್ನು ಕ್ರಮೇಣ ತುಂಬುವುದ, ಅದೂ ಏಕಾಂಗಿ ಹೋರಾಟದಲ್ಲಿ ಎಷ್ಟೊಂದು ಕಷ್ಟ ಎಂಬುದನ್ನು ಆತ ಯಾರಿಗೂ ಹೇಳಿಕೊಳ್ಳುವಂತೆ ಇರಲಿಲ್ಲಘಿ. ಕ್ರಮೇಣ ಆತನ ಸ್ವರ್ಗದ ಪ್ರಪಂಚ ಇಲ್ಲಿಗೆ ಇಲ್ಲಿನ ನೀಲಿ ಪೆಟ್ಟಿಗೆಗಳಿಗೆ ಬಂದು ಅಮರಿಕೊಳ್ಳತೊಡಗಿತು. ಇನರಿಗೆ ಇಲ್ಲಿನ ಬ್ರಿಟ್‌ವೈಸರ್‌ನ ಖುಷಿಯ ಪಾರವೆಲ್ಲ ಅರ್ಥವಾಗುವಂತೆ ಇರಲಿಲ್ಲಘಿ. ಇದೇ ಹೊತ್ತಿಗೆ ಆತನ ಜೀವನಕ್ಕೆ ಓರ್ವ ಸುಂದರಿಯ ಹಿತಾನುಭವ ಸೇರಿತು.
Read More

ದಂಗು ಬಡಿಸುವ ಕಲಾ ಅಂತಃಪುರ

ದಂಗು ಬಡಿಸುವ ಕಲಾ ಅಂತಃಪುರ
ದಿ ಆರ್ಟ ಥೀಫ್
ಶತಮಾನಗಳಿಂದ, ಪ್ರಪಂಚದಾದ್ಯಂತದ ಕಲಾಕೃತಿಗಳನ್ನು ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಕದಿಯಲಾಗಿದೆ. ಆದರೆ ಖದೀಮ ಕಳ್ಳ ಸ್ಟೀವನ್ ಬ್ರೀಟ್ವೀಸರ್ ತರ ಯಾರೂ ಅದರಲ್ಲಿ ದೀರ್ಘ ಕಾಲ ಯಶಸ್ವಿಯಾಗಲಿಲ್ಲ. ಸುಮಾರು ಎಂಟು ವರ್ಷಗಳ ಕಾಲ ಇನ್ನೂರಕ್ಕೂ ಹೆಚ್ಚು ದರೋಡೆಗಳನ್ನು ನಡೆಸುತ್ತಾ-ಯುರೋಪಿನಾದ್ಯಂತ ವಸ್ತುಸಂಗ್ರಹಾಲಯಗಳು ಮತ್ತು ಕ್ಯಾಥೆಡ್ರಲ್ಗಳಲ್ಲಿ- ಬ್ರೀಟ್ವೀಸರ್, ಈತನ ಎಲ್ಲ ಅಪರಾಧಗಳಿಗೆ ಬೆಂಗಾವಲಾಗಿ ನಿಲ್ಲುವ ಗೆಳತಿ ಅನ್ನೆ ಕ್ಯಾಥರಿನ್‌ಳೊಂದಿಗೆ, ಮುನ್ನೂರಕ್ಕೂ ಹೆಚ್ಚು ಕಲಾಕೃತಿ ಕಳವು ಮಾಡುತ್ತಾನೆ. ಅಂತಿಮವಾಗಿ ಎಲ್ಲವಕ್ಕೂ ಒಂದು ಅಂತ್ಯ ಎಂಬುದು ಇರುತ್ತದೆ. ದಿ ಆರ್ಟ್ ಥೀಫ್‌ನಲ್ಲಿ ಲೇಖಕ ಮೈಕೆಲ್ ಫಿಂಕೆಲ್ ಬ್ರೀಟ್ವೀಸರ್‌ನ ವಿಚಿತ್ರ ಮತ್ತು ಆಕರ್ಷಕ ಜಗತ್ತನ್ನು ನಮ್ಮೆದುರು ತೆರೆದಿಡುತ್ತಾನೆ. ಬ್ರೀಟ್ವೀಸರ್ ಹೆಚ್ಚಿನ ಕಳ್ಳರಂತಲ್ಲ, ಎಂದಿಗೂ ಹಣಕ್ಕಾಗಿ ಕದ್ದಿಯುವುದಿಲ್ಲ. ಬದಲಾಗಿ, ಅವನಿಗೆ ಉತ್ತಮ ಕಲಾಕೃತಿಗಳ ಬಗ್ಗೆ ಇನ್ನಿಲ್ಲದ ವ್ಯಾಮೋಹವೂ ಇತ್ತು. ಚಿತ್ರಗಳ ಆಸ್ವಾದನೆಯ ಪರಿಶ್ರಮವೂ ಇತ್ತು. ತಾನು ಕಳವು ಮಾಡಿದ ಸಂಪತ್ತನ್ನು ಒಂದು ಜೋಡಿ ರಹಸ್ಯ ಕೊಠಡಿಗಳಲ್ಲಿ ಪ್ರದರ್ಶಿಸಿದ್ದ. ಅಲ್ಲಿ ಅವನು ಕಲಾಕೃತಿಗಳನ್ನು, ಶಿಲ್ಪಗಳನ್ನು ಮನಃಪೂರ್ವಕವಾಗಿ ಮೆಚ್ಚಿ ಹೆಮ್ಮೆಪಡುತ್ತಿದ್ದ. ಕದ್ದು ತಪ್ಪಿಸಿಕೊಳ್ಳಲು ಯಾವ ವೇಗದಲ್ಲಾದರೂ ಓಟ ಕೀಳುವ ನಿಪುಣ, ದೇಹ ಸೌಷ್ಟವವೂ ಆತನಿಗಿತ್ತು. ಯಾವುದೇ ಭದ್ರತಾ ವ್ಯವಸ್ಥೆಯನ್ನು ಬೇಸಿ ನುಸುಳುವ, ಎಗರಿಸಿಕೊಂಡು ಬರುವ ಸಹಜ ಸಾಮರ್ಥ್ಯವನ್ನು ಹೊಂದಿದ್ದ. ಅಷ್ಟೇ ಅಲ್ಲ, ಉಸಿರುಕಟ್ಟುವಷ್ಟು ಭಯಾನಕ ಕಳವನ್ನೂ ಅಳುಕೇ ಇಲ್ಲದೆ ನಿಭಾಯಿಸುತ್ತಿದ್ದ. ಆದರೂ ಈ ವಿಚಿತ್ರ ಪ್ರತಿಭೆ -ಸೈಕೋ ದೊಡ್ಡ ದೊಡ್ಡ ಕಳವುಗಳನ್ನು ದಕ್ಕಿಸಿಕೊಂಡು ವ್ಯಸನಿಯಾಗಿ ಬೆಳೆದುಬಿಟ್ಟ. ಕೊನೇ ಕ್ಷಣದಲ್ಲಿ ಎಚ್ಚೆತ್ತ ಗೆಳತಿ ಕೆನ್ ತನ್ನ ಇನಿಯನಿಗೆ ಎಷ್ಟೇ ಹೇಳಿದರೂ ಕಿವಿಗೊಡದೆ ಹೋದ. ಒಂದು ಅಂತಿಮ ದರೋಡೆಯು ಈತ ಕಟ್ಟಿಕೊಂಡ ಕಳವಿನ ಬೃಹತ್ ಸಾಮ್ರಾಜ್ಯವನ್ನೇ ಉರುಳಿಸಿ ಹಾಕಿತು. ಇದು ಕಲೆ, ಅಪರಾಧ, ಪ್ರೀತಿ ಮತ್ತು ಯಾವುದೇ ವೆಚ್ಚದಲ್ಲಿಯಾದರೂ ಸರಿ, ಸೌಂದರ್ಯವನ್ನು ಹೊಂದುವ ಹಪಾಪಿ ಹಸಿವಿನ ಕಥೆಯಾಗಿದೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಶಿಫಾರಸು ಮಾಡಿದ ಬೆಸ್ಟ್ ಸೆಲ್ಲರ್ ಬರಹಗಾರ ಮೈಕೆಲ್ ಫಿಂಕೆಲ್ ಅವರ, ದಿ ಆರ್ಟ್‌ ಥೀಫ್ ಕಾದಂಬರಿಯನ್ನು ಕನ್ನಡಿಗರಿಗೆದಾರಾವಾಹಿ ರೀತಿಯಲ್ಲಿ ಇಲ್ಲಿದೆ..... . . . . ಅಧ್ಯಾಯ- 2 ಯಾವುದೇ ನಗರದಲ್ಲೂ ಕೆಲವಷ್ಟು ವಸತಿಪ್ರದೇಶಗಳು ಅಕ್ಕಪಕ್ಕದ ವಾತಾವರಣದ ಪ್ರಭಾವದಿಂದ ಮುಕ್ತವಾಗಿರುವುದು ಸಾಧ್ಯವಿಲ್ಲ. ಜಗತ್ತಿನ ಸುಂದರ ದೇಶಗಳ ಪಟ್ಟಿಯಲ್ಲಿ ಇರುವ ಫ್ರಾನ್ಸ್‌ನ ಪೂರ್ವದಲ್ಲಿರುವ ಮಲ್‌ಹೌಸ್ ನಗರದ ವಿಚಾರವನ್ನೇ ತೆಗೆದುಕೊಳ್ಳಿ. ಒಂದಿಷ್ಟು ಗ್ಯಾರೇಜ್‌ಗಳು, ಹಗಲಿಡೀ ಗದ್ದಲ ಹಾಕುವ ಲೇತ್ ಯಂತ್ರಗಳು, ಸಾಬೂನು ಘಟಕ ತರದ ಔದ್ಯಮಿಕ ವಲಯ ಇದೆ. ಮದ್ಯದಲ್ಲಿ ಅಲ್ಲಲ್ಲಿ ಒಂದಿಷ್ಟು ವಸತಿಯೂ ಇರುವ ಪ್ರದೇಶವನ್ನು ಊಹಿಸಿಕೊಳ್ಳಿ. ಗಾರೆ ಕಾಂಕ್ರೀಟ್ನ ಮಸುಕಾದ ತುಸು ಹಳೆಯ ಕಾಲದ ಚೌಕಾಕಾರದ ಒಂದಿಷ್ಟು ಸಣ್ಣ ಕಿಟಕಿ, ಕಡಿದಾದ, ಕೆಂಪು ಹೆಂಚಿನ ಛಾವಣಿಯಿಂದ ಆವೃತವಾದ ಅದೊಂದು ಮನೆ ಇದೆ. ಇಲ್ಲಿ ಇರುವಿಕೆಯ ತಾವು ಬಹುಪಾಲು ನೆಲ ಮಹಡಿಯಲ್ಲಿದ್ದರೆ, ಕಿರಿದಾದ ಮೆಟ್ಟಿಲುಗಳು ಎರಡು ಬೃಹತ್ ಕೋಣೆಗಳಿರುವ ಮಹಡಿಗೆ ದಾರಿ ಮಾಡಿಕೊಡುತ್ತವೆ. ಮನೆಯ ವಾಸಿಸುವ ಪ್ರದೇಶ ಮತ್ತು ಮಲಗುವ ಕೋಣೆ, ತಗ್ಗಿ ಹೋಗಬೇಕಾದ ಕಡಿಮೆ ಎತ್ತರದ ಸೀಲಿಂಗ್ ಮತ್ತು ಇಕ್ಕಟ್ಟಾದ ಸೊಟ್ಟ ಮಹಡಿ ಅದು. ಈ ಕೋಣೆಗಳ ಬಾಗಿಲಿಗೆ ಯಾವಾಗಲೂ ಬೀಗ ಇರುತ್ತದೆ. ಇಲ್ಲಿನ ಕಿಟಕಿ ಕವಾಟುಗಳು ಶಾಶ್ವತವಾಗಿ ಮುಚ್ಚಿರುತ್ತವೆ. ಅಲ್ಲಿರುವ ಕೋಣೆಯ ಒಂದು ಗೋಡೆಗೆ ತಾಗಿದಂತೆ ಹೊಂದಿಸಿರುವ ಮಂಚದ ಕುರಿತು ತುಸು ಹೇಳಬೇಕು. ಆ ಯುವ ಜೋಡಿ ಮಲಗುವುದು, ಸುಂದರ ಕೆತ್ತನೆಯ ಮಂಚದ ತುಪ್ಪಟ ಮೃದುವಿನ ಹಾಸಿಗೆಯಲ್ಲಿ. ಅಲ್ಲಿರುವ ಕುಸುರಿಯ ದಿಂಬುಗಳಿರಬಹದು, ಪಕ್ಕದಲ್ಲಿ ಹಾಕಲಾದ ನೇರಳೆ ಪರದೆ, ಅದನ್ನು ಸರಿಸಲು ಹಾಕಿರುವ ಜರಿಯ ರಿಬ್ಬನ್ ಕೂಡ ರಾಜರ ಕಾಲದ ಒಂದು ಅಂತಃಪುರವನ್ನು ನೆನಪಿಗೆ ತರುತ್ತಿತ್ತು. ಇಲ್ಲಿ ಮಲಗಿದರೆ ಬ್ರೀಟ್ವೀಸರ್ ತನ್ನ ಕಣ್ಣುಗಳನ್ನು ತೆರೆದಾಗ, ಅವನು ನೋಡುವ ಮೊದಲ ದೃಶ್ಯವೇ ದಂತದ ಆಡಮ್ ಮತ್ತು ಈವ್. ತಾನು ಕದ್ದು ತಂದ ಅಪೂರ್ವ ಕಲಾ ಕುಸುರಿಯನ್ನು ಇಡುವುದಕ್ಕಾಗಿ ಮಂಚದ ಪಕ್ಕದಲ್ಲಿ ಒಂದು ಮೇಜನ್ನು ಜೋಡಿಸಿದ್ದ. ನಯವಾದ ಶಿಲ್ಪದ ಬಗ್ಗೆ ಎಷ್ಟೊಂದು ವ್ಯಾಮೋಹ ಎಂದರೆ, ಕೆಲವೊಮ್ಮೆ ಅದರ ಕೆತ್ತನೆಯ ಮೇಲೆ ತನ್ನ ಬೆರಳ ತುದಿಗಳನ್ನು ನೇವರಿಸುತ್ತಿದ್ದ. ಈವ್ ಮೂರ್ತಿಯ ಕೈಗಳು, ಅದರ ಅಲೆಯಾದ ಕೂದಲು ಅಥವಾ ದೇಹದ ಸುತ್ತಿದ ಹಾವು, ಜತೆಯಲ್ಲಿರುವ ಕುಳ್ಳ ಮರದ ಕಾಂಡದ ಮೇಲೆ ಗಾಗ ಹರಿದಾಡುವುದು ಹೇಗೆಂದರೆ, ಇದನ್ನು ಕೆತ್ತಿದ ಶಿಲ್ಪಿಯು ಮೇಲ್ಮೈ ನುಣುಪನ್ನು ಖಾತ್ರಿಪಡಿಸಲು ಬೆರಳು ಜಾರಿಸಿದಂತೆ. ಇದು ಆತನ ಮಟ್ಟಿಗೆ ಜೀವನದಲ್ಲೇ ಸಿಕ್ಕ ಅತ್ಯಂತ ಬೆಲೆಬಾಳುವ ವಸ್ತುವಾಗಿದ್ದರೆ, ಅದರ ಬೆಲೆಯಂತೂ, ಆ ಸಾಲಿನಲ್ಲಿರುವ ಮನೆಗಳನ್ನೆಲ್ಲ ಒಟ್ಟೂ ಸೇರಿಸಿ ಮಾರಿದರೂ, ಇದರ ಬೆಲೆಯ ಅರ್ಧ ಮೊತ್ತ ಸಿಗುವುದಿಲ್ಲ. ಇದು ಅವನ ಹಾಸಿಗೆ ಪಕ್ಕದ ಮೇಜಿನ ಮೇಲಿಟ್ಟ ಎರಡನೇ ದಂತದ ಕೆತ್ತನೆ. ಅಲ್ಲೇ ಪಕ್ಕದಲ್ಲಿ ರೋಮನ್ನರ ಬೇಟೆ ಹಾಗೂ ಸಂತಾನ ಪ್ರಾಪ್ತಿಸುವ ದೇವತೆ ಡಯನಾಳ ಮೂರ್ತಿ ಇತ್ತುಘಿ. ಡಯಾನಾ ಪ್ರತಿಮೆಯ ವಿಶೇಷ ಎಂದರೆ, ಅವಳ ಬಲಗೈ ಮೇಲಕ್ಕೆತ್ತಿದ ಸ್ಥಿತಿಯಲ್ಲಿ ಚಿನ್ನದ ಬಾಣಗಳನ್ನು ಎತ್ತಿ ಹಿಡಿದಿದ್ದಾಳೆ. ಅದಾದ ನಂತರ ಮೂರನೆಯದು ಕೂಡ ಮಹತ್ವದ್ದೇ. ಕ್ರಿಶ್ಚಿಯನ್ನರ ಆರಂಭಿಕ ಸಂತರಲ್ಲೊಬ್ಬರಾದ ಅಲೆಕ್ಸಾಂಡ್ರಿಯಾದ ಕ್ಯಾಥರೀನ್ ಅವರ ಪ್ರತಿಮೆ. ಮುಂದೆ ತನ್ನ ಪಾದವನ್ನು ತಲೆಬುರುಡೆಯ ಮೇಲೆ ಇಟ್ಟು ವಿಶ್ರಾಂತಿ ಪಡೆಯುತ್ತಿರುವ ಗುಂಗುರು ಕೂದಲಿನ ಕ್ಯುಪಿಡ್. ಹೀಗೆ ಬ್ರೀಟ್ವೀಸರ್‌ನ ದಂತದ ಬೊಂಬೆಗಳ ಸಂಗ್ರಹದ ಅಲೌಕಿಕ ಲೋಕ, ಅವುಗಳ ಹಾಲಿನ ಹೊಳಪಿನ ಪ್ರಪಂಚವು ನೀಡುವ ಸ್ಪೂರ್ತಿ ಬೇರೆಲ್ಲೂ ಸಿಗುವದು ಕಷ್ಟ ಎಂಬ ದಿವ್ಯತೆ ಅಲ್ಲಿತ್ತು. ಅದೆಲ್ಲಕ್ಕಿಂತ ಇಲ್ಲಿ ನೆಪೋಲಿಯನ್ ಬಳಸಿದ ಚಿನ್ನ ಹಾಗೂ ದಂತದ ತಂಬಾಕು ಪೆಟ್ಟಿಗೆ ಮನೋಹರವಾಗಿದೆ. ಪ್ರಕಾಶಮಾನವಾದ ನೀಲಿ ದಂತಕವಚದ ಪೆಟ್ಟಿಗೆಯನ್ನು ನಿಮ್ಮ ಅಂಗೈಯಲ್ಲಿ ಹಿಡಿದಿಟ್ಟುಕೊಳ್ಳುವುದು ಎಂದರೆ, ನೆನಪಿನ ಲೋಕಕ್ಕೆ ಜಾರಿದಂತೆ. ಅದರ ಪಕ್ಕದಲ್ಲಿ ೧೮ನೇ ಶತಮಾನದ ಉತ್ತರಾರ್ಧದಲ್ಲಿ ಫ್ರೆಂಚ್‌ನ ಪ್ರಸಿದ್ಧ ಕುಪ್ಪಿ ಕಲಾವಿದ ಎಮಿಲ್ ಗ್ಯಾಲೆ ತಯಾರಿಸಿದ ಪ್ರಿಸಂ ಪಾರದರ್ಶಕದಲ್ಲಿ ರಮ್ಯ ಬಣ್ಣಗಳ ಹೂ ಹೂದಾನಿಯಿದೆ. ನಂತರ ಹಳೆಯ ಐಟಂ, ಹೂಮಾಲೆಗಳು ಮತ್ತು ಸುರುಳಿಗಳಿಂದ ಕೆತ್ತಿದ ದೊಡ್ಡ ಬೆಳ್ಳಿಯ ಭೂಗೋಳ ಇದನ್ನೆಲ್ಲ ನೋಡಿದರೆ, ಬ್ರೀಟ್ವೀಸರ್ ಸಂಗ್ರಹದಲ್ಲಿ ಬೆಲೆಕಟ್ಟಲಾದ, ಯಾವುದೇ ಶ್ರೀಮಂತನಿಗೂ ದುಬಾರಿ ಎನಿಸುವಷ್ಟು ಶತಶತಮಾನದ ಪುರಾತನ ಚಿತ್ರ ವಿಚಿತ್ರ ಕಲೆಗಳಿವೆ. ರಾಜರು, ಸೇನಾಕಾರಿಗಳು ಬಳಸುತ್ತಿದ್ದ ಹುಕ್ಕಾಗಳು, ಎಲಡಿಕೆ ಪೆಟ್ಟಿಗೆ, ಅವುಗಳ ಸುಂದರ ಆಕಾರ, ತುಂಡಾದ ಕಂಚಿನ ಕಂಬಗಳು, ಚೀನಿ ಮೂಲದ ಹಳೆಯ ಪಿಂಗಾಣಿ ಪ್ರತಿಮೆ.. ಒಂದೆರಡೇ ಅಲ್ಲಘಿ, ಅದೊಂದು ಸುಂದರ ಕನಸುಗಳ ದ್ವೀಪದಂತೆ, ಪೋಣಿಸಿದ ಮ್ಯೂಸಿಯಂ ರೀತಿಯಲ್ಲಿದೆ ಆ ಕೋಣೆ. ಮಂಚದ ಇನ್ನೊಂದು ಪಕ್ಕ ಅಂದರೆ, ಅನ್ನೆ -ಕ್ಯಾಥರೀನ್ ಅವರ ಹಾಸಿಗೆಯ ಬದಿಯಲ್ಲಿ ರಾತ್ರಿಯ ಪರಿಕರಗಳನ್ನೊಳಗೊಂಡ ಒಂದು ಟೇಬಲ್. ಅದಕ್ಕೆ ಗಾಜಿನ ಬಾಗಿಲುಗಳಿಂದ ಆವೃತವಾದ ಮಾಟದ ದೊಡ್ಡ ಆಲಮೇರಾ ಜೋಡಿಸಿದೆ. ಅದರೊಳಗೆ ಒಂದು ರಾಶಿ ವೈವಿಧ್ಯಮಯ ಡ್ರೆಸ್. ಕೋಣೆಯ ಮೇಲ್ಮಂಟಪಕ್ಕೆ ತಾಗಿದ ನಾಗಂದಿಗೆಯಲ್ಲಿ ಬೆಳ್ಳಿಯ ತಟ್ಟೆಗಳು, ಬೆಳ್ಳಿಯ ಬಟ್ಟಲುಗಳು, ಬೆಳ್ಳಿಯ ಹೂದಾನಿಗಳು, ಚಹ ಕಪ್ಪುಗಳ ಸಹಿತ ಟ್ರೇಘಿ, ಮರದ ಗೊಂಬೆ ಚಿಕಣಿಗಳು ಜೋಡಿಸಲಾಗಿತ್ತು. ಅದೇ ಸಾಲಿನಲ್ಲಿ ಒಂದು ಲೋಹದ ಬಿಲ್ಲು, ಒಂದು ಸೇಬರ್ ಡಾಲ್, ಒಂದು ಹಳೆಯ ಭರ್ಚಿ, ಒಂದು ಗದೆ ಇದೆ. ಅಮೃತಶಿಲೆ ಮತ್ತು ಸ್ಪಟಿಕ, ಮರದ ಮುತ್ತಿಮ ತುಣುಕುಗಳು. ಚಿನ್ನದ ಪಾಕೆಟ್ ವಾಚು, ಚಿನ್ನದ ಅತ್ತರ್ ಕಲಶ, ಚಿನ್ನದ ಚೊಂಬು, ಚಿನ್ನದ ಲಾಕೆಟ್. ದಂಪತಿಗಳ ನಿಜ ಅಡಗುತಾಣವಾದ ಇದರ ಮುಂದಿನ ಕೊಠಡಿಯು ಇನ್ನಷ್ಟು ತುಂಬಿಕೊಂಡಿದೆ. ಮರದ ಬಲಿಪೀಠ, ತಾಮ್ರದ ತಟ್ಟೆ, ಕಬ್ಬಿಣದ ಭಿಕ್ಷಾ ಪೆಟ್ಟಿಗೆ, ಬಣ್ಣದ ಗಾಜಿನ ಕಿಟಕಿ, ದುಬಾರಿ ಮದ್ಯದ ಮಾಟದ ಬಾಟಲಿಗಳು, ಮತ್ತು ಪುರಾತನ ಕಾಲದ ಲೋಹದ ಚೆಸ್ ಬೋರ್ಡ್‌ಗಳು, ದಂತದ ಕೆತ್ತನೆಗಳ ಮತ್ತೊಂದಷ್ಟು ಮೂರ್ತಿ, ಪಿಟೀಲು, ಶ್ರುತಿಮೋರೆ, ಕೊಳಲು, ಕಹಳೆ. ಮತ್ತಷ್ಟು ತುಣುಕುಗಳನ್ನು ಕೆಲವು ವಿರಾಮಾಸನದ ಮೇಲೆ ಜೋಡಿಸಲಾಗಿದೆ. ಗೋಡೆಗಳಿಗೆ ಒಂದಿಷ್ಟು ಬೇಟೆ ಪರಿಕರಗಳನ್ನು ಸಾಚಿ ಆಸರೆ ಮಾಡಲಾಗಿತ್ತುಘಿ. ಕಿಟಕಿಗಳ ಮೇಲೆ ಜೋತು ಬಿಟ್ಟಿರುವ ಇನ್ನಷ್ಟು ಸರದ ತುಣುಕು. ತೊಳೆಯಲು ಹಾಕಿದ ಬಟ್ಟೆಗಳ ಮೇಲೆ ರಾಶಿಯಾಗಿ ಬಿದ್ದ ಸಮುದ್ರದ ಚಿಪ್ಪಿನ ಒಡವೆಗಳು, ಹಾಸಿಗೆಯ ಕೆಳಗೆ ಜಾರಿ ಬಿಡಲಾದ ಶಂಕದ ಹಾರಗಳು. ಕೈಗಡಿಯಾರಗಳು, ಕೈ ಗಡಗ, ಬಿಯರ್ ಮಗ್ಗುಗಳು, ಫ್ಲಿಂಟ್ಲಾಕ್ ಪಿಸ್ತೂಲ್ಗಳು, ಕೈಯಿಂದ ಬರೆದ ಪುರಾತನ ಪುಸ್ತಕಗಳು ಮತ್ತು ಒಂದಿಷ್ಟು ಬಿಡಿ ದಂತಗಳು ರಾಶಿಯಾಗಿ ಬಿದ್ದಿವೆ. ಮಧ್ಯಕಾಲೀನ ಕಮಾಂಡರ್‌ಗಳ ಶಿರಸ್ತ್ರಾಣ, ವರ್ಜಿನ್ ಮೇರಿಯ ಮರದ ಪ್ರತಿಮೆ, ವಜೃ ಖಚಿತ ಟೇಬಲ್ ಗಡಿಯಾರ, ಮಧ್ಯ ಯುಗದ ಸಚಿತ್ರ ಪ್ರರ್ಥನಾ ಹೊತ್ತಿಗೆ. ಬೆಲೆಬಾಳುವ ಕಲಾಕೃತಿಗಳಲ್ಲದೆ ಇದೆಲ್ಲವೂ ಕೊಠಡಿಯ ವೈಭವಕ್ಕೆ ಪೂರಕವಾಗಿದೆ. ಭವ್ಯವಾದ, ಅತ್ಯಮೂಲ್ಯವಾದ ವಸ್ತುಗಳು, ಗೋಡೆಗಳ ಗೂಟಕ್ಕೆ ತೂಗಾಡುತ್ತಿವೆ. ಅವುಗಳಲ್ಲಿ ಒಂದಿಷ್ಟು ತೈಲ ವರ್ಣಚಿತ್ರಗಳು, ಹದಿನಾರು ಮತ್ತು ಹದಿನೇಳನೇ ಶತಮಾನಗಳಿಂದ ಆರಂಭವಾಗಿ ನವೋದಯ ಮತ್ತು ಆರಂಭಿಕ ಬರೊಕ್ ಶೈಲಿಗಳ ದುಬಾರಿ ಪೇಂಟಿಂಗ್ ಕಲಾವಿದರ ವಿವರ ಸಹಿತ ವರ್ಣರಂಜಿತವಾಗಿವೆ. ಭಾವಚಿತ್ರಗಳು, ಭೂದೃಶ್ಯಗಳು, ಕಡಲತೀರಗಳು, ಸ್ಥಿರ ಚಿತ್ರಗಳು, ಸಾಂಕೇತಿಕ ಕಥೆಗಳು, ರೈತರು, ಹಳ್ಳಿಗರ ನಡಿಗೆಯ ದೃಶ್ಯಗಳು, ಪ್ಯಾಸ್ಟೋರಲ್ ಗಳು ಕೆಲವಷ್ಟು ಇಲ್ಲಿವೆ. ನೆಲದಿಂದ ಸೀಲಿಂಗ್ ತನಕ, ಎಡದಿಂದ ಬಲದ ತುದಿ, ಒಂದು ಕೋಣೆಯಿಂದ ಇನ್ನೊಂದು ಕೋಣೆಯ ಉದ್ದಕ್ಕೂ ಪ್ರದರ್ಶಿಸಲಾಗಿದೆ. ಅವುಗಳಲ್ಲಿ ಒಂದಿಷ್ಟು ವಿಷಯಾಧಾರಿತ ಅಥವಾ ಭೌಗೋಳಿಕವಾಗಿ ಅಥವಾ ವಿಷಮ ಆಕರ್ಷಣೆಯಲ್ಲಿ ಜೋಡಿಸಲಾಗಿದೆ. ಇಲ್ಲಿ ಹತ್ತಾರು ಕಾಲ, ಶತಮಾನದ ಶ್ರೇಷ್ಠರ ಕಲಾಕೃತಿಗಳಿವೆ. ಕ್ರಾಂಚ್, ಬ್ರೂಗಲ್, ಬ್ರೋಷರ್, ವ್ಯಾಟ್ಟೂ, ಗೊಯೆನ್, ಡ್ಯೂರರ್, - ಹೀಗೆ ಅನೇಕ ಮಾಸ್ಟರ್‌ಗಳ ಕಲಾಕೃತಿಗಳು, ಮುಖಚಿತ್ರಗಳು ಕೋಣೆಯ ಎಲ್ಲೆಡೆ ತುಂಬಿವೆ. ದಂತದ ಕಾಂತಿಯಿಂದ ಆವರಿಸಲ್ಪಟ್ಟ ಕೆಲವು, ಬೆಳ್ಳಿಯ ಹೊಳಪಿಗೆ, ಮಿರಿ ಮಿರಿ ಮಿನುಗಿಗೆ ನೂರ್ಮಡಿಯ ಚಿನ್ನದ ವಸುತಗಳಿವೆ. ಎಲ್ಲವನ್ನೂ, ಒಟ್ಟಾರೆಯಾಗಿ ಸಮೀಕರಿಸಿ ಕಲಾ ಪತ್ರಕರ್ತರು ಮಾಡಿದ ಅಂದಾಜಿನಂತೆ ಇಲ್ಲಿನ ಮೌಲ್ಯವು ಎರಡು ಶತಕೋಟಿ ಡಾಲರ್‌ಗಳಾಗಬಹುದು ಎಂದು ಅಂದಾಜಿಸಿದ್ದಾರೆ. ಇಷ್ಟೊಂದು ಬೆಲೆ ಬಾಳುವ, ಹಣ ಕೊಟ್ಟರೂ ಸಿಗದ ಕಲಾ ಬಂಡಾರವನ್ನು ಮುಲ್ ಹೌಸ್ ಉಪನಗರದ ಹಳೆಯ ಕಟ್ಟಡವೊಂದರ ಅಸಂಬದ್ದ ಎನ್ನಬಹುದಾದ ಮನೆಯಲ್ಲಿ ಇರಿಸಲಾಗಿದೆ. ಯುವ ದಂಪತಿಗಳು ಇಲ್ಲೊಂದು ವಾಸ್ತವದ ವಾಸ್ತವ್ಯವನ್ನು ಸೃಷ್ಟಿಸಿಕೊಂಡಿದ್ದು, ಅದು ಏನೆಲ್ಲ ಕಲ್ಪನೆಯನ್ನೂ ಮೀರಿಸುವ ಆಗರ್ಭ ಶ್ರೀಮಂತಿಕೆಯ ಲೋಕವಾಗಿದೆ. ಹಾಗೆ ನೋಡಿದರೆ, ಅವರು ನಿ ಪೆಟ್ಟಿಗೆಯೊಳಗೆ ವಾಸಿಸುತ್ತಾರೆ ಎಂದು ಬಣ್ಣಿಸಿದರೇ ಸರಿ.
Read More

ದಿ ಆರ್ಟ ಥೀಫ್

ದಿ ಆರ್ಟ ಥೀಫ್
ಅನುವಾದ : ಸದಾನಂದ ಹೆಗಡೆ
ಶತಮಾನಗಳಿಂದ, ಪ್ರಪಂಚದಾದ್ಯಂತದ ಕಲಾಕೃತಿಗಳನ್ನು ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಕದಿಯಲಾಗಿದೆ. ಆದರೆ ಖದೀಮ ಕಳ್ಳ ಸ್ಟೀವನ್ ಬ್ರೀಟ್ವೀಸರ್ ತರ ಯಾರೂ ಅದರಲ್ಲಿ ದೀರ್ಘ ಕಾಲ ಯಶಸ್ವಿಯಾಗಲಿಲ್ಲ. ಸುಮಾರು ಎಂಟು ವರ್ಷಗಳ ಕಾಲ ಇನ್ನೂರಕ್ಕೂ ಹೆಚ್ಚು ದರೋಡೆಗಳನ್ನು ನಡೆಸುತ್ತಾ-ಯುರೋಪಿನಾದ್ಯಂತ ವಸ್ತುಸಂಗ್ರಹಾಲಯಗಳು ಮತ್ತು ಕ್ಯಾಥೆಡ್ರಲ್ಗಳಲ್ಲಿ- ಬ್ರೀಟ್ವೀಸರ್, ಈತನ ಎಲ್ಲ ಅಪರಾಧಗಳಿಗೆ ಬೆಂಗಾವಲಾಗಿ ನಿಲ್ಲುವ ಗೆಳತಿ ಅನ್ನೆ ಕ್ಯಾಥರಿನ್‌ಳೊಂದಿಗೆ, ಮುನ್ನೂರಕ್ಕೂ ಹೆಚ್ಚು ಕಲಾಕೃತಿ ಕಳವು ಮಾಡುತ್ತಾನೆ. ಅಂತಿಮವಾಗಿ ಎಲ್ಲವಕ್ಕೂ ಒಂದು ಅಂತ್ಯ ಎಂಬುದು ಇರುತ್ತದೆ. ದಿ ಆರ್ಟ್ ಥೀಫ್‌ನಲ್ಲಿ ಲೇಖಕ ಮೈಕೆಲ್ ಫಿಂಕೆಲ್ ಬ್ರೀಟ್ವೀಸರ್‌ನ ವಿಚಿತ್ರ ಮತ್ತು ಆಕರ್ಷಕ ಜಗತ್ತನ್ನು ನಮ್ಮೆದುರು ತೆರೆದಿಡುತ್ತಾನೆ. ಬ್ರೀಟ್ವೀಸರ್ ಹೆಚ್ಚಿನ ಕಳ್ಳರಂತಲ್ಲ, ಎಂದಿಗೂ ಹಣಕ್ಕಾಗಿ ಕದ್ದಿಯುವುದಿಲ್ಲ. ಬದಲಾಗಿ, ಅವನಿಗೆ ಉತ್ತಮ ಕಲಾಕೃತಿಗಳ ಬಗ್ಗೆ ಇನ್ನಿಲ್ಲದ ವ್ಯಾಮೋಹವೂ ಇತ್ತು. ಚಿತ್ರಗಳ ಆಸ್ವಾದನೆಯ ಪರಿಶ್ರಮವೂ ಇತ್ತು. ತಾನು ಕಳವು ಮಾಡಿದ ಸಂಪತ್ತನ್ನು ಒಂದು ಜೋಡಿ ರಹಸ್ಯ ಕೊಠಡಿಗಳಲ್ಲಿ ಪ್ರದರ್ಶಿಸಿದ್ದ. ಅಲ್ಲಿ ಅವನು ಕಲಾಕೃತಿಗಳನ್ನು, ಶಿಲ್ಪಗಳನ್ನು ಮನಃಪೂರ್ವಕವಾಗಿ ಮೆಚ್ಚಿ ಹೆಮ್ಮೆಪಡುತ್ತಿದ್ದ. ಕದ್ದು ತಪ್ಪಿಸಿಕೊಳ್ಳಲು ಯಾವ ವೇಗದಲ್ಲಾದರೂ ಓಟ ಕೀಳುವ ನಿಪುಣ, ದೇಹ ಸೌಷ್ಟವವೂ ಆತನಿಗಿತ್ತು. ಯಾವುದೇ ಭದ್ರತಾ ವ್ಯವಸ್ಥೆಯನ್ನು ಬೇಸಿ ನುಸುಳುವ, ಎಗರಿಸಿಕೊಂಡು ಬರುವ ಸಹಜ ಸಾಮರ್ಥ್ಯವನ್ನು ಹೊಂದಿದ್ದ. ಅಷ್ಟೇ ಅಲ್ಲ, ಉಸಿರುಕಟ್ಟುವಷ್ಟು ಭಯಾನಕ ಕಳವನ್ನೂ ಅಳುಕೇ ಇಲ್ಲದೆ ನಿಭಾಯಿಸುತ್ತಿದ್ದ. ಆದರೂ ಈ ವಿಚಿತ್ರ ಪ್ರತಿಭೆ -ಸೈಕೋ ದೊಡ್ಡ ದೊಡ್ಡ ಕಳವುಗಳನ್ನು ದಕ್ಕಿಸಿಕೊಂಡು ವ್ಯಸನಿಯಾಗಿ ಬೆಳೆದುಬಿಟ್ಟ. ಕೊನೇ ಕ್ಷಣದಲ್ಲಿ ಎಚ್ಚೆತ್ತ ಗೆಳತಿ ಕೆನ್ ತನ್ನ ಇನಿಯನಿಗೆ ಎಷ್ಟೇ ಹೇಳಿದರೂ ಕಿವಿಗೊಡದೆ ಹೋದ. ಒಂದು ಅಂತಿಮ ದರೋಡೆಯು ಈತ ಕಟ್ಟಿಕೊಂಡ ಕಳವಿನ ಬೃಹತ್ ಸಾಮ್ರಾಜ್ಯವನ್ನೇ ಉರುಳಿಸಿ ಹಾಕಿತು. ಇದು ಕಲೆ, ಅಪರಾಧ, ಪ್ರೀತಿ ಮತ್ತು ಯಾವುದೇ ವೆಚ್ಚದಲ್ಲಿಯಾದರೂ ಸರಿ, ಸೌಂದರ್ಯವನ್ನು ಹೊಂದುವ ಹಪಾಪಿ ಹಸಿವಿನ ಕಥೆಯಾಗಿದೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಶಿಫಾರಸು ಮಾಡಿದ ಬೆಸ್ಟ್ ಸೆಲ್ಲರ್ ಬರಹಗಾರ ಮೈಕೆಲ್ ಫಿಂಕೆಲ್ ಅವರ, ದಿ ಆರ್ಟ್‌ ಥೀಫ್ ಕಾದಂಬರಿಯನ್ನು ಕನ್ನಡಿಗರಿಗೆದಾರಾವಾಹಿ ರೀತಿಯಲ್ಲಿ ಇಲ್ಲಿದೆ.....
ಅಧ್ಯಾಯ- 1 ಕಳವಿನ ಸಂಚಿನೊಂದಿಗೆ ವಸ್ತುಸಂಗ್ರಹಾಲಕ್ಕೆ ಧಾವಿಸುತ್ತಿದ್ದ ಸ್ಟೀವನ್ ಬ್ರೀಟ್ವೀಸರ್ ತನ್ನ ಗೆಳತಿ ಆನ್ನೆ-ಕ್ಯಾಥರೀನ್ ಕ್ಲೀನ್ಕ್ಲಾಸ್‌ಳ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ಖುಷಿಯಿಂದ ಸುತ್ತುವ ಪ್ರೇಮಿಗಳಂತೆ ಕಟ್ಟಡದ ಮುಂಭಾಗದ ಮೇಜಿನ ಬಳಿಗೆ ಹೋಗಿ ಹಲೋ ಹೇಳುತ್ತಾರೆ. ಮುದ್ದಾದ ಯುವ ಜೋಡಿಯು ಗರಿಯಾದ ನೋಟ್ ಮುಂದಿಟ್ಟು ಎರಡು ಟಿಕೆಟ್‌ಳನ್ನು ಖರೀದಿಸಿ ಒಳಗೆ ಹೋಗುತ್ತಾರೆ. ಅದು ಫೆಬ್ರವರಿ 1997, ಬೆಲ್ಜಿಯಂ ದೇಶದ ಎಂಟ್ವರ್ಪ್ ಪಟ್ಟಣದಲ್ಲಿ ಗೌಜಿನ ಒಂದು ಭಾನುವಾರ. ಆಗ ಊಟದ ಸಮಯವಾಗಿದ್ದರಿಂದ ಕದಿಯಲು ಹೇಳಿಮಾಡಿಸಿದ ಸಮಯ. ರೂಬೆನ್ಸ್ ಹೌಸ್‌ನ ವಸ್ತುಸಂಗ್ರಹಾಲಯದಲ್ಲಿ ಯುವ ಜೋಡಿಯು ಪ್ರವಾಸಿಗರ ಸೋಗಿನಲ್ಲಿ ನುಗ್ಗಿ ಒಳಕ್ಕೆ ಹೋಗುತ್ತಾರೆ. ಶಿಲ್ಪಗಳು ಮತ್ತು ತೈಲಚಿತ್ರಗಳನ್ನು ಗಮನಿಸುತ್ತ ತಲೆದೂಗುತ್ತಾರೆ. ಹುಡುಗಿ ಆನ್ನೆ-ಕ್ಯಾಥರೀನ್ ಸೆಕೆಂಡ್ ಹ್ಯಾಂಡ್ ಅಂಗಡಿಗಳಲ್ಲಿ ಖರೀದಿಸಿದ ಆಹ್ಲಾದಕರ ಶನೆಲ್ ಮತ್ತು ಡಿಯೋರ್ ಅತ್ತರ್ ಪೂಸಿಕೊಂಡು ಗಮನ ಸೆಳೆಯುತ್ತಿದ್ದಳು. ಆಕೆಯ ಭುಜದ ಮೇಲೆ ದೊಡ್ಡ ವೈವ್ಸ್ ಸೇಂಟ್ ಲಾರೆಂಟ್ ಜಂಬದ ಚೀಲವಿತ್ತು. ಜತೆಗಾರ ಬ್ರೀಟ್ವೀಸರ್ ಬೆಲ್ ಬಾಟಮ್ ಪ್ಯಾಂಟ್ಗೆ ಸಿಕ್ಕಿಸಿದ ಗುಂಡಿ -ಬಿಚ್ಚಿದ ಶರ್ಟ್ ಧರಿಸಿದ್ದ. ಅದರ ಮೇಲಿರುವ ಓವರ್ಕೋಟ್ ಸ್ವಲ್ಪ ದೊಡ್ಡದಾಗಿಯೇ ಇತ್ತು. ಸ್ವಿಸ್ ಸೇನೆಯ ಚಾಕು ಒಂದನ್ನು ತನ್ನ ಕೋಟ್ ಜೇಬಿನಲ್ಲಿ ಇರಿಸಿಕೊಂಡಿದ್ದ. ರೂಬೆನ್ಸ್ ಹೌಸ್ ಹದಿನೇಳನೇ ಶತಮಾನದ ಡಚ್ ಫ್ಲಾನಿಶ್ ಮೂಲದ ಮಹಾನ್ ವರ್ಣಚಿತ್ರಕಾರ ಪೀರ್ಟ ಪಾಲ್ ರೂಬೆನ್ಸ್ ಅವರು ಬಾಳಿದ ಮನೆ. ರೂಬೆನ್ಸ್ ಬಳಿಕ ಅವರ ನಿವಾಸವನ್ನು ಅವರ ಕೃತಿಗಳು, ಸಂಗ್ರಹವನ್ನೆಲ್ಲ ಜೋಡಿಸಿ ಸೊಗಸಾದ ವಸ್ತುಸಂಗ್ರಹಾಲಯ ಮಾಡಲಾಗಿದೆ. ಪ್ರಣಯ ಜೋಡಿಯು ಪಾರ್ಲರ್, ಅಡುಗೆಮನೆ ಮತ್ತು ಊಟದ ಕೋಣೆಯಲ್ಲಿ ಚಿತ್ರಗಳನ್ನು ನೋಡುತ್ತ ಅಲೆಯುತ್ತಾರೆ. ಬ್ರೀಟ್ವೀಸರ್ ಕಳ್ಳ ಪಕ್ಕದ ಬಾಗಿಲುಗಳನ್ನು ಪರಾಂಬರಿಸಿ ನೆನಪಿಟ್ಟುಕೊಳ್ಳುತ್ತಾನೆ ಮತ್ತು ಕಾವಲುಗಾರರ ಚಲನ-ವಲನ ಗಮನಿಸುತ್ತಾನೆ. ಹಲವಾರು ತಪ್ಪಿಸಿಕೊಳ್ಳುವ ಮಾರ್ಗಗಳು ಅವನ ಮನಸ್ಸಿನಲ್ಲಿ ರೂಪುಗೊಳ್ಳುತ್ತವೆ. ಕಳವಿಗೆ ಹೊಂಚು ಹಾಕಿದ್ದ ಬೆಲೆ ಬಾಳುವ ವಿಗ್ರಹವೊಂದು ವಸ್ತುಸಂಗ್ರಹಾಲಯದ ಹಿಂಭಾಗದಲ್ಲಿ ಹಿತ್ತಾಳೆಯ ಗೊಂಚಲು ಮತ್ತು ಎತ್ತರದ ಕಿಟಕಿಗಳೊಂದಿಗೆ ನೆಲ-ಮಹಡಿಯ ಗ್ಯಾಲರಿಯಲ್ಲಿ ಆಶ್ರಯ ಪಡೆದಿತ್ತು. ಆಗ ಮಧ್ಯಾಹ್ನದ ಪ್ರಖರ ಬಿಸಿಲಿನಿಂದ ಕೃತಿಗಳನ್ನು ರಕ್ಷಿಸಲು ಕೆಲವು ಕಿಟಕಿ ಮುಚ್ಚಲಾಗಿತ್ತುಘಿ. ಒಂದೆಡೆ ಅಲಂಕೃತವಾದ, ನಿಲುವುಗನ್ನಡಿಯೊಳಗೊಂಡ ಮರದ ಮೇಕಪ್ ಕಪಾಟಿನಲ್ಲಿ ವಿಗ್ರಹವನ್ನು ಮಜಬೂತ್ ಆಗಿ ತಳಕ್ಕೆ ಜೋಡಿಸಲಾಗಿತ್ತು. ಬ್ರೀಟ್ವೀಸರ್ ಕೆಲವು ವಾರಗಳ ಹಿಂದೆ ಕಳವಿನ ಯೋಜನೆ ರೂಪಿಸಲು ಬಂದಾಗ ವಿಗ್ರಹ ಇಟ್ಟ ಜಾಗವನ್ನೊಮ್ಮೆ ನೋಡಿಕೊಂಡಿದ್ದ. ಇಂದು ಮತ್ತದೆ ಜಾಗಕ್ಕೆ ಬಂದು ಇಬ್ಬರೂ ಒಳಗೊಳಗೆ ಸ್ಕೆಚ್ ಹಾಕಿದರು. ನಾಲ್ಕು ನೂರು ವರ್ಷಗಳ ಹಳೆಯ ಕೆತ್ತನೆಯ ನುಣುಪು ಹಾಗೇ ಹೊಳೆಯುತ್ತಿತ್ತು. ಇದು ದಂತದ ವಿಗ್ರಹಗಳ ವಿಶಿಷ್ಟ ಗುಣವಾಗಿದೆ. ಶಿಲ್ಪವು ಅವನಿಗೆ ಅತೀಂದ್ರಿಯ ಅನ್ನಿಸಿದೆ. ಒಮ್ಮೆ ನೋಡಿದ ಬಳಿಕ ಶಿಲ್ಪದ ಬಗ್ಗೆ ಕನಸು ಕಾಣುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಆತ ಗೆಳತಿ ಆನ್ನೆ-ಕ್ಯಾಥರೀನ್ ಜತೆಗೆ ಮತ್ತೊಮ್ಮೆ ರೂಬೆನ್ಸ್ ಮನೆಗೆ ಮರಳಿದ್ದ. ಎಲ್ಲಾ ರೀತಿಯ ಭದ್ರತೆಯು ಎಲ್ಲೋ ಒಂದೆಡೆ ಬಿರುಕು ಹೊಂದಿರುತ್ತದೆ. ಮರದ ಮೇಕಪ್ ಕಪಾಟಿನಲ್ಲಿ ನ್ಯೂನತೆಯನ್ನು ಅವನು ಮೊದಲ ಭೇಟಿಯಲ್ಲೇ ಗಮನಿಸದ್ದ. ಎರಡು ಮೊಳೆಯನ್ನು ಕಿತ್ತರೆ ಕಪಾಟಿನ ಮೇಲಿನ ಭಾಗವನ್ನು, ತಳದಿಂದ ಬೇರ್ಪಡಿಸಬಹುದಿತ್ತು. ತಿರುಣೆಯ ಮೊಳೆಗಳು ಕೆಲವೊಮ್ಮೆ ಹತಿಯಾರಿಗಳಿಗೆ ಕಚ್ಚಿಕೊಳ್ಳುವುದಿಲ್ಲ, ಕಪಾಟಿನ ಹಿಂಭಾಗದಲ್ಲಿ ಹತಿಯಾರ ಓಡಿಸಿ ಮೊಳೆಯನ್ನು ತಿರುಗಿಸುವುದೂ ಸವಾಲಾಗಿತ್ತು. ಆದರೆ ಭದ್ರತಾ ಸಿಬ್ಬಂದಿಯ ನ್ಯೂನತೆಯೆಂದರೆ ಅವರು ಮನುಷ್ಯರಲ್ಲವೇ. ಅವರಿಗೆ ಹಸಿವಾಗುತ್ತದೆ. ಕೆಲವೊಮ್ಮೆ ಕುಳಿತಲ್ಲೇ ತೂಕಡಿಸುತ್ತಾರೆ. ದಿನದ ಬಹುಪಾಲು ಪ್ರತಿ ಗ್ಯಾಲರಿಯಲ್ಲಿ ಒಬ್ಬ ಸಿಬ್ಬಂದಿ ಮಾತ್ರ ಇರುವುದನ್ನು ಬ್ರೀಟ್ವೀಸರ್ ಗಮನಿಸಿದ್ದ. ಕುರ್ಚಿಯಲ್ಲೇ ಕುಳಿತು ವೀಕ್ಷಿಸುತ್ತಾರೆ. ಊಟದ ಸಮಯವನ್ನು ಹೊರತುಪಡಿಸಿಯೂ ತಿಂಡಿ, ಕಾಫಿ, ಸಿಗರೇಟ್ ಎಂದು ಭದ್ರತಾ ಸಿಬ್ಬಂದಿಗಳು ಆಚೆ ಈಚೆ ಹೋಗುತ್ತಿದ್ದರು. ಆಗ ಭದ್ರತಾ ಸಿಬ್ಬಂದಿಗಳ ಕುರ್ಚಿಗಳು ಖಾಲಿಯಾಗಿ ಏನೆಲ್ಲ ನಡೆಯಲು ಅವಕಾಶ ಇರುವುದನ್ನು ಕಳ್ಳನ ಮನಸ್ಸು ಕರಾರುವಾಕ್ಕಾಗಿ ಲೆಕ್ಕ ಹಾಕಿತ್ತು. ಇಲ್ಲಿ ಗ್ಯಾಲರಿಯ ಪ್ರವಾಸಿಗರು ಹೊತ್ತು ಗೊತ್ತು ಇಲ್ಲದೆ ಕಿರಿ ಹುಟ್ಟಿಸುತ್ತಾರೆ. ಮದ್ಯಾಹ್ನದ ಹೊತ್ತಿನಲ್ಲಿಯೂ ತುಂಬಾ ಮಂದಿ, ಕಾಲಹರಣ ಮಾಡುತ್ತಿದ್ದಾರೆ. ವಸ್ತುಸಂಗ್ರಹಾಲಯದ ಹೆಚ್ಚು ಜನಪ್ರಿಯ ಕೊಠಡಿಗಳಲ್ಲಿ ರೂಬೆನ್ಸ್ ಅವರ ವರ್ಣಚಿತ್ರಗಳೇ ಪ್ರದರ್ಶನಗೊಂಡಿವೆ. ಈ ನಡುವೆ ಈ ಶಿಲ್ಪವನ್ನು ಸುರಕ್ಷಿತವಾಗಿ ಕದ್ದೊಯ್ಯಲು ತುಂಬಾ ದೊಡ್ಡದಾಗಿದೆ. ಅದಕ್ಕಿಂತ ಬ್ರೀಟ್ವೀಸರ್ ತುಂಬಾ ಧಾರ್ಮಿಕವಾಗಿದೆ ಇದನ್ನು ನೋಡುತ್ತಾನೆ. ಗ್ಯಾಲರಿಯ ಪ್ರಮುಖ ಆಕರ್ಷಣೆ ಎನ್ನಬಹುದಾದ - ಆಡಮ್ ಮತ್ತು ಈವ್ - ರೂಬೆನ್ಸ್ ತನ್ನ ಜೀವಿತಾವಯಲ್ಲಿ ಸಂಗ್ರಹಿಸಿದ ಅಪರೂಪದ ವಸ್ತುಗಳಲ್ಲಿ ಒಂದು. ರೋಮನ್ ದಾಶನಿಕರ ಅಮೃತಶಿಲೆಯ ಪ್ರತಿಮೆಗಳು, ಹರ್ಕ್ಯೂಲಸ್ ಟೆರಾಕೋಟಾ ಶಿಲ್ಪ, ಡಚ್ ಮತ್ತು ಇಟಾಲಿಯನ್ ತೈಲ ವರ್ಣಚಿತ್ರಗಳು ಇಲ್ಲಿ ಕಾಣುತ್ತವೆ. ಜರ್ಮನಿಯ ಕುಶಲಕರ್ಮಿ ಜಾರ್ಜ್ ಪೆಟೆಲ್ ಕೆತ್ತಿದ ಡಮ್- ಈವ್ ದಂತ ಶಿಲ್ಪವವು ರೂಬೆನ್ಸ್ ಅವರಿಗೆ ಉಡುಗೊರೆಯಾಗಿ ಬಂದಿತ್ತು. ಪ್ರವಾಸಿಗರು ಸುತ್ತುತ್ತಿರುವಂತೆ, ಬ್ರೀಟ್ವೀಸರ್ ತುಸು ಸರಿದು ತೈಲವರ್ಣಚಿತ್ರದ ಮುಂದೆ ಬಂದು ನಿಂತು ಚಿತ್ರಪಟ ನೋಡುವನಂತೆ ನಟಿಸುತ್ತಿದ್ದ. ಒಮ್ಮೆ ಸೊಂಟದ ಮೇಲೆ ಕೈ ಇಟ್ಟುಕೊಳೂವುದು, ಮತ್ತೊಮ್ಮೆ ಎರಡೂ ಕೈ ಜೋಡಿಸಿ, ಇನ್ನೊಮ್ಮೆ ಮಸ್ತಕ ಸವರಿಕೊಳ್ಳುತ್ತ ಏನೆಲ್ಲ ಬಂಗಿಯಲ್ಲಿ ಚಿತ್ರವನ್ನೇ ನೋಡತೊಡಗಿ. ಮೇಲ್ನೋಟಕ್ಕೆ ಏನೂ ಆಗದವನಂತೆ ಸುಭಗನಂತಿದ್ದರೂ ಆತನ ಹೃದಯವು ಉತ್ಸಾಹ ಹಾಗೂ ಒಳಗೊಳಗೆ ಭಯದಿಂದ ಕಂಪಿಸುತ್ತಿತ್ತು. ಅನ್ನೆ - ಕ್ಯಾಥರೀನ್ ಒಮ್ಮೆ ಗ್ಯಾಲರಿಯ ಬಾಗಿಲ ಬಳಿ ಸುಳಿದಾಡುತ್ತಾಳೆ. ಇನ್ನೊಮ್ಮೆ ವಿಚಿತ್ರವಾಗಿ ನಿಂತಿರುತ್ತಾಳೆ. ಕೆಲವೊಮ್ಮೆ ಬೆಂಚಿನ ಮೇಲೆ ಕುಳಿತು, ಏನನ್ನೋ ಕಾಯುತ್ತಿರುವಂತೆ, ಒಮ್ಮೆ ಉದಾಸೀನ, ಇನ್ನೊಮ್ಮೆ ಆತಂಕದ ಮನಸ್ಥಿತಿಯಲ್ಲಿ . ಆಕೆಯ ಕಣ್ಣು ಮಾತ್ರ ಆಚೆ ಹಜಾರದ ಚಲನವಲನವನ್ನು ಸ್ಪಷ್ಟವಾಗಿ ಅಳೆದು ಏನೋ ಖಚಿತಪಡಿಸಿಕೊಳ್ಳುತ್ತಿತ್ತು. ಈ ಪ್ರದೇಶದಲ್ಲಿ ಯಾವುದೇ ಭದ್ರತಾ ಕ್ಯಾಮೆರಾಗಳಿಲ್ಲ. ಹಾಗೆ ನೋಡಿದರೆ ಇಡೀ ವಸ್ತುಸಂಗ್ರಹಾಲಯದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕ್ಯಾಮೆರಾಗಳಿದ್ದವು. ಈ ಕ್ಯಾಮೆರಾಗಳ ಸ್ಥಿತಿಗತಿ, ಇವುಗಳ ಜೋಡಣೆಯ ಸ್ಥಳ, ಚಿತ್ರಗಳನ್ನಿ ತಲುಪಿಸುವ ವಯರಿಂಗ್ ವ್ಯವಸ್ಥೆಯನ್ನೆಲ್ಲ ಇವರು ನೋಡಿಕೊಂಡಿದ್ದಾರೆ. ಕೆಲವೊಮ್ಮೆ ಸಣ್ಣ ವಸ್ತುಸಂಗ್ರಹಾಲಯಗಳಲ್ಲಿ ಸಿಸಿ ಟೀವಿಗಳು ನಾಮಕೇವಾಸ್ತೆ ಎಂಬುದೂ ಇವರಿಗೆ ಗೊತ್ತು. ಜನರೆಲ್ಲ ತೆರವಾಗಿ ದಂಪತಿ ಮಾತ್ರ ಕೋಣೆಯಲ್ಲಿ ಉಳಿಯುವ ಒಂದು ಕ್ಷಣ ಅಷ್ಟರಲ್ಲೇ ಬರುತ್ತದೆ. ತಕ್ಷಣ ಚುರುಕಾದ ಕಳ್ಳರ ರಕ್ತ ಜಾಗೃತವಾಗುತ್ತದೆ. ಅಲ್ಲಿಯ ತನ ತನ್ನ ಅಧ್ಯಯನದ ಭಂಗಿಯನ್ನು ಬದಲಿಸುತ್ತಿದ್ದ ಬ್ರೀಟ್ವೀಸರ್ ಒಮ್ಮೆಲೇ ಭದ್ರತಾ ಚೌಕಿಯನ್ನು ನೋಡಿಕೊಂಡು ಇತ್ತ ದಾವಿಸುತ್ತಾನೆ. ತನ್ನ ಜೇಬಿನಿಂದ ಸ್ವಿಸ್ ಸೇನೆಯ ಚಾಕುವನ್ನು ಅಗೆಯುತ್ತಾನೆ. ಸ್ಕ್ರೂ ಡ್ರೈವರ್ ತೆಗೆದು ಮೇಕಪ್ ಕಪಾಟಿನ ಮಳೆಗಳನ್ನು ಮೆಲ್ಲನೆ ಎಬ್ಬಿಸಲು ತೊಡಗುತ್ತಾನೆ. ಸ್ಕ್ರೂವನ್ನು ನಾಲ್ಕಾರು ಸುತ್ತು ತಿರುಗಿಸಿರಬಹದು. ಕಪಾಟಿನಲ್ಲಿದ್ದ ಆ ದಿವ್ಯ ಜೋಡಿ ಮೂರ್ತಿ ಆತನನ್ನು ಆವರಿಸತೊಡಗುತ್ತದೆ. ಕೇವಲ ಹತ್ತು ಇಂಚಿನ ಆದಂ-ಈವ್ ಅದೆಷ್ಟು ಅದ್ಬುತವಾಗಿದೆ ಎಂದರೆ, ನಗ್ನ ದೇಹದ ಮೈಮಾಟಕ್ಕೆ ಸ್ನಿಗ್ಧ ಮುಖಮಾಟ ಬೆರಗುಗೊಳಿಸುವ ವಿವರವಾಗಿದೆ. ಜಗತ್ತಿನ ಮೊದಲ ಮಾನವರು ಒಬ್ಬರನ್ನೊಬ್ಬರು ನೋಡುತ್ತಿದ್ದಾರೆ. ಅವರು ಅಪ್ಪಿಕೊಳ್ಳಲು ದಾವಿಸುವಂತೆ, ಅವರ ಹಿಂದೆ ಜ್ಞಾನದ ಮರದ ಸುತ್ತ ಸುತ್ತಿಕೊಂಡ ನಾಗರಹಾವು. ತಿನ್ನಬಾರದ ಹಣ್ಣುಗಳನ್ನು ಹಿಡಿದುಕೊಂಡರೂ ಕಚ್ಚಲಿಲ್ಲ : ಮಾನವೀಯತೆ ಪಾಪದ ಪ್ರಪಾತವನ್ನು ಆವೀರ್ಭವಿಸುವ ಅನುಭವ. ಆ ಹೊತ್ತಿಗೆ ಅವನಿಗೆ ಮೃದುವಾದ ಕೆಮ್ಮಿನ ದನಿ ಕೇಳುತ್ತದೆ. ಅದು ಅನ್ನೆ ಕ್ಯಾಥರೀನ್. ಡ್ರೆಸರ್ಸ್‌ನಲ್ಲಿ ಕಾವಲುಗಾರನು ಕಾಣಿಸಿಕೊಂಡ ಎಂಬ ಎಚ್ಚರಿಸುವ ದನಿ. ಜಾಗೃತನಾದ ಬ್ರೀಟ್ವೀಸರ್ ಸ್ಕರೂ ತಿರುಗಿಸುವುದನ್ನು ತಕ್ಷಣ ಹಿಂದಕ್ಕೆ ಎಳೆದುಕೊಂಡು ಚಾಕುವನ್ನು ಕೋಟ್ ಜೇಬಿನಲ್ಲಿ ಅಡಗಿಸಿ, ಪ್ರವಾಸಿಯೊಬ್ಬ ಆದಂ- ಈವ್ ಶಿಲ್ಪವನ್ನು ಹತ್ತಿರದಿಂದ ವೀಕ್ಷಿಸುವ ಬಂಗಿಯಲ್ಲಿ ಸ್ಥಬ್ಧನಾಗಿಬಿಟ್ಟ. ಭದ್ರತಾ ಸಿಬ್ಬಂದಿ ಕೊಠಡಿಯೊಳಗೆ ಬಂದು ಇವನಿದ್ದ ಮೂರಡಿ ದೂರದಲ್ಲಿ ನಿಂತು ಒಮ್ಮೆ ಅಪಾದಮಸ್ತಕ ಗಮನಿಸಿ ಮುಂದೆ ಹೋಗುತ್ತಾನೆ. ಬ್ರೀಟ್ವೀಸರ್ ಒಳಗೆ ತಿದಿಯೊತ್ತಿದಂತೆ ಉಸಿರು ಆಚೆ ಈಚೆ ಆದರೂ ಸಿಬ್ಬಂದಿ ಆಚೆ ಹೋದ ಬಳಿಕ ಕೆಲಸ ಮುಂದುವರಿಸುತ್ತಾನೆ. ಚಾಕುವಿನ ತುದಿಯಲ್ಲಿ ಮೀಟುವಾಗ ಅದು ಜಾರದಂತೆ ನೋಡಬೇಕು, ಶಬ್ದ ಆದರೆ ಮತ್ತೆ ಭದ್ರತೆಯವರಿಗೆ ಸಂದೇಹ ಬರುತ್ತದೆ. ತುಕ್ಕು ಹಿಡಿದ ಸ್ಕರೂಗಳು ಬೇಗನೆ ತಿರುಗುವುದಿಲ್ಲ ಬೇರೆ. ಒಂದೆಡೆ ಪ್ರವಾಸಿಗರು ಇನ್ನೊಂದೆಡೆ ಕಾವಲುಗಾರರು. ಇಬ್ಬರನ್ನೂ ತಪ್ಪಿಸಿ ಒಂದೊಂದು ಸ್ಕ್ರೂ ಬಿಚ್ಚಲು ಹತ್ತು ನಿಮಿಷ ಹಿಡಿಯುತ್ತಿತ್ತು. ಇಂಥ ಕಳವಿನ ಸಂದರ್ಭದಲ್ಲಿ ಬ್ರೀಟ್ವೀಸರ್ ಕೈಗವಸುಗಳನ್ನು ಧರಿಸುವುದಿಲ್ಲ! ಬೆರಳಿನ ಅಚ್ಚುಗಳು ಸಿಗಬಾರದು ಎಂದುಕೊಂಡು, ಕೈ ಗವಸನ್ನು ಹಾಕಿಕೊಂಡರೆ, ಸ್ಕ್ರೂ ಬಿಡಿಸಲು ಹಿಡಿತ ಸಿಗುವುದಿಲ್ಲಘಿ. ಒಂದು ಮೊಳೆ ತೆಗೆಯುವಷ್ಟರಲ್ಲಿ ಒಂದಿಷ್ಟು ಸಂದರ್ಶಕರು ಆಗಮಿಸಿದರು. ತೆಗೆದ ಮೊಳೆಯನ್ನುಘಿ, ಚಾಕುವನ್ನು ಮತ್ತೊಮ್ಮೆ ಜೇಬಿನಲ್ಲಿ ಹಾಕಿಕೊಂಡ. ಅನ್ನೆ -ಕ್ಯಾಥರೀನ್ ಕೋಣೆಯ ಚಲನವಲನವನ್ನು ಕಣ್ಣಿಗೆ ಕಣ್ಣಿಟ್ಟು ಬ್ರೀಟ್ವೀಸರ್ ಗೆ ಸಂದೇಶ ಕೊಡುತ್ತಿದ್ದಳು. ಇನ್ನೆಷ್ಟು ಹೊತ್ತು, ಉಳಿದ ಸ್ಕ್ರೂಗಳ ಸಂಖ್ಯೆ, ಬಿಚ್ಚಿದ್ದೆಷ್ಟು ಎಂಬುದನ್ನು ಆತ ಸನ್ನೆ ಮೂಲಕವೇ ಆಕೆಗೆ ತಿಳಿಸುತ್ತಿದ್ದಘಿ. ಕಳವು ಮಾಲು ಸಾಗಿಸಲು ಅಂಥದ್ದೇನೂ ದೊಡ್ಡ ಚೀಲ ಬೇಡ ಇನ್ನೇನು ಮುಗಿದೇ ಹೋಯಿತು ಎಂದು ಬ್ರೀಟ್ವೀಸರ್ ಸಂದೇಶ ಕೊಟ್ಟ. ಆ ಹೊತ್ತಿಗೆ ಒಮ್ಮೆ ಅವಳು ಮ್ಯೂಸಿಯಂನ ನಿರ್ಗಮನ ದ್ವಾರದತ್ತ ಹೋಗುತ್ತಾಳೆ. ಸೆಕ್ಯುರಿಟಿ ಗಾರ್ಡ್ ಈಗಾಗಲೇ ಮೂರು ಬಾರಿ ಇಣಿಕಿದ್ದ. ಬ್ರೀಟ್ವೀಸರ್ ಮತ್ತು ಅನ್ನೆ -ಕ್ಯಾಥರೀನ್ ಇಬ್ಬರೂ ಪ್ರತಿ ಹಂತದಲ್ಲೂ ಒತ್ತಡಕ್ಕೊಳಗಾಗುತ್ತಿದ್ದಾರೆ. ಬ್ರೀಟ್ವೀಸರ್ ಪ್ರೌಢಶಾಲೆ ಮುಗಿಸಿ ಖಾಲಿ ಇದ್ದಾಗ ಮ್ಯೂಸಿಯಂ ಗಾರ್ಡ್ ಆಗಿ ಕೆಲಸ ಮಾಡಿದ್ದ. ಇಂಥ ಸಂದರ್ಭದಲ್ಲಿ ಯಾರೂ ಸಣ್ಣ ಸಣ್ಣ ವಸ್ತುಗಳನ್ನೆಲ್ಲ ಗಮನಿಸುವುದಿಲ್ಲ, ಸ್ಕ್ರೂನಷ್ಟು ಚಿಕ್ಕದಾದ ವಿವರ ಯಾರಿಗೂ ತಿಳಿದಿಲ್ಲವಾದರೂ ಬಹುತೇಕ ಭದ್ರತಾ ಸಿಬ್ಬಂದಿ ಜನರ ಮೇಲೆ ಮಾತ್ರ ಕಣ್ಣು ಇಟ್ಟೇ ಇರುತ್ತಾರೆ ಎಂಬುದು ಆತನಿಗೆ ಮೊದಲೇ ಗೊತ್ತಿತ್ತು. ಒಂದು ಕಳವು ಮಾಡಬೇಕು ಎಂದರೆ ಕೇವಲ ಎರಡು ಬಾರಿ ಸ್ಥಳನೋಡಿಕೊಂಡು ಯೋಜನೆ ರೂಪಿಸಿದರೆ ಸಾಲುವುದಿಲ್ಲ. ಕನಿಷ್ಟ ನಾಲ್ಕು ಬಾರಿಯಾದರೂ ವಸ್ತುಸಂಗ್ರಹಾಲಯಕ್ಕೆ ಹೋಗಬೇಕು, ಅಲ್ಲಿಗೆ ತಲುಪುವ ಮಾರ್ಗ, ಹೊರಬರುವ ವಿಧಾನ, ಭದ್ರತಾ ಸಿಬ್ಬಂದಿಗಳಲ್ಲಿ ಯಾರಿಗೆ ಷ್ಟು ಹೊತ್ತಿಗೆ ನಿದ್ದೆಯ ಮಂಪರು ಇರುತ್ತದೆ ಎಂಬುದನ್ನೆಲ್ಲ ತಿಳಿದು ಕಳವಿನ ಯೋಜನೆ ರೂಪಿಸುತ್ತಿದ್ದ. ನಾಲ್ಕನೆಯ ಭೇಟಿಯಲ್ಲಿ ಕಳವು ಮಾಡುವ ವೇಗವನ್ನು ತಾಲೀಮು ತರ ಮಾಡಿ ಕಳವಿಗೆ ಖಚಿತ ಯೋಜನೆ ರೂಪಿಸುತ್ತಿದ್ದ. ಸಮಸ್ಯೆಯೆಂದರೆ ನೋಡುತ್ತ ನಿಲ್ಲುವ ಸಂದರ್ಶಕರ ಗುಂಪು. ಪಕ್ಕದ ಪೇಂಟಿಂಗ್ ಒಂದರ ಬಳಿ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಪ್ರೇಕ್ಷಕರು ಗೋಲೆಯಾಗಿ ಜಮಾಯಿಸಿದ್ದರು. ಅವರು ಅಲ್ಲಿಂದ ಕದಲಿಸಲು ಬ್ರೀಟ್ವೀಸರ್ ಒಂದಿಷ್ಟು ಹೊತ್ತು ದುರು ದುರು ನೋಡುತ್ತಾನೆ. ಗೋಲೆಯಲ್ಲಿದ್ದ ಒಬ್ಬ ಪ್ರೇಕ್ಷಕ ಬ್ರೀಟ್ವೀಸರ್‌ನ ತೀಕ್ಷ್ಣ ನೋಟಕ್ಕೆ ವಿಚಲಿತನಾಗಿ ಅಲ್ಲಿಂದ ಆಚೆ ಸರಿಯುತ್ತಾನೆ. ಎಲ್ಲೋ ಜೈಲಿನಿಂದ ತಪ್ಪಿಸಿಕೊಂಡ ದುರುಳ ಕಳ್ಳನು ಇಲ್ಲಿ ಬಂದಿರಬೇಕು ಎಂಬ ಸಂದೇಹವು ಅವನಿಗಾಯಿತು. ಅಂತೂ ಆತನಿಗೆ ಅಲ್ಲಿಂದ ಕದಲುವ ಸಂದೇಶ ಹೋಗುತ್ತಿದ್ದಂತೆ ಇಡೀ ಗುಂಪು ಚದುರಿತು. ಬ್ರೀಟ್ವೀಸರ್ ಡ್ರೆಸ್ಸರ್ಸ್‌ಗೆ ಹೆಜ್ಜೆ ಹಾಕುತ್ತಾನೆ. ಮೇಕಪ್ ಕಪಾಟಿನ ಹಿಂಬಾಗವನ್ನು ಬುಡ ಸಮೇತ ಎತ್ತಿ ನಿಧಾನವಾಗಿ ಪಕ್ಕಕ್ಕೆ ಇಡುತ್ತಾನೆ. ದಂತದ ಶಿಲ್ಪವನ್ನು ನಾಜೂಕಾಗಿ ಎತ್ತಿ ಕೋಟ್ ಸರಿಸಿಕೊಂಡು ಅದನ್ನು ಒಳಕ್ಕೆ ಅಡಗಿಸುತ್ತಾನೆ. ನಿಲುವಂಗಿಯಂತಿದ್ದ ದೊಡ್ಡ ಕೋಟಿನ ಕಂಕುಳಿನಲ್ಲಿ ಅಮುಕಿಕೊಂಡ ಗಂಟೊಂದು ಪರಾಂಬರಿಸಿ ನೋಡಿದವರಿಗೆ ಕಾಣದೇ ಇರುತ್ತಿರಲಿಲ್ಲಘಿ. ಕೆತ್ತನೆಯ ಚೂಪುಗಳ ಉಬ್ಬು ಕೋಟಿನ ಹೊರಭಾಗದಲ್ಲಿ ಉಬ್ಬಿದಂತೆ ಇದ್ದರೂ ಅಲ್ಲಿ ಯಾರೂ ಕಳ್ಳನನ್ನು ಗಮನಿಸಿದಂತಿಲ್ಲ. ಮೇಕಪ್ ಕಪಾಟನ್ನು ಅಲ್ಲಿಯೇ ಪಕ್ಕಕ್ಕೆ ತಳ್ಳಿ , ಸ್ವಲ್ಪವೂ ತಡಮಾಡದೆ ಕಳ್ಳ ಚಲಿಸತೊಡಗಿದ್ದ, ಮುಂದಿನ ಇಕ್ಕಟ್ಟಿನಲ್ಲೂ ಯಾರೂ ಗಮನಿಸಲಿಲ್ಲ. ಇಂಥ ಮಹತ್ವದ ಕಳವು ತುಸುವಾದರೂ ಗಮನಕ್ಕೆ ಬಂದರೆ, ಎಲ್ಲ ಬಾಗಿಲುಗಳೂ ಮುಚ್ಚುತ್ತವೆ, ಭದ್ರಾಪಡೆಯ ಜೊತೆಗೆ ಪೊಲೀಸರೂ ಬಂದು ಸುತ್ತುಹಾಕಿ ತಕ್ಷಣವೇ ಮ್ಯೂಸಿಯಂಗೆ ಬೀಗ ಬೀಳುತ್ತದೆ ಎಂಬ ಎಚ್ಚರಿಕೆಯೊಂದು ಕಳ್ಳರಲ್ಲಿ ಇದ್ದೇ ಇತ್ತು. ಆದರೂ ಅವನು ಓಡುವುದಿಲ್ಲ. ಓಡುವುದು ಜೇಬುಗಳ್ಳರಿಗೆ ಮತ್ತು ಪರ್ಸ್ ಕಳ್ಳರಿಗೆ ಮಾತ್ರ ಸರಿ. ಮೊದಲೇ ಗುರುತಿಸಿದ್ದ ಬಾಗಿಲಿನಲ್ಲಿ ಜಾರಿಕೊಳ್ಳುತ್ತಾನೆ. ಪಕ್ಕದ ಬಾಗಿಲನ್ನು ಮ್ಯೂಸಿಯಂ ಸಿಬ್ಬಂದಿಗಳಿಗೆಂದು ಗೊತ್ತಿದ್ದರೂ, ಹಾಗೆ ಹೊರ ಬರುವುದೇ ತನ್ನ ಭದ್ರತೆ ದೃಷ್ಟಿಯಿಂದ ಒಳಿತೆಂದು ಮ್ಯೂಸಿಯಂನ ಕೇಂದ್ರ ಅಂಗಳದಲ್ಲಿ ಹೊರಬೀಳುತ್ತಾನೆ. ಹಾಗೇ ಚಲಿಸುತ್ತ ಮಸುಕಾದ ಕಲ್ಲುಗಳು, ಬಳ್ಳಿಯಿಂದ ಮುಚ್ಚಿಕೊಂಡಿದ್ದ ಗೋಡೆ ಅಂಚಿನ ಕಾಲುದಾರಿಯಲ್ಲಿ ಬರುವಾಗ ಶಿಲ್ಪವು ಅವನ ಹಿಂಭಾಗದಲ್ಲಿ ಬಡಿಯುತ್ತದೆ. ಅಲ್ಲಿಂದ ತಿರುಗಿ ಇನ್ನೊಂದು ಬಾಗಿಲನ್ನು ತಲುಪುಪಿ ಮುಖ್ಯ ದ್ವಾರದ ಮೂಲಕ ಆಂಟ್ವರ್ಪ್ ನಗರದ ಬೀದಿಗಳಲ್ಲಿ ಇಬ್ಬರೂ ಮುಂದುವರಿಯುತ್ತಾರೆ. ಪೋಲೀಸ್ ಅಕಾರಿಗಳು ಕೆಳಗಿಳಿಯುವ ಸಾಧ್ಯತೆ ಇರುವುದರಿಂದ ಪ್ರಜ್ಞಾಪೂರ್ವಕವಾಗಿ ಸಂದೇಹ ಬಾರದಂತೆ ಸಾದಾ ನಡಿಗೆಯಲ್ಲೇ ಜನರೊಂದಿಗೆ ಸೇರುತ್ತಾನೆ. ಅಲ್ಲಿದ್ದ ಅನ್ನೆ -ಕ್ಯಾಥರೀನ್ ಅನ್ನು ಗುರುತಿಸುವವರೆಗೂ ತುಸು ಆಚೆ ಈಚೆ ಹುಡುಕಿ, ಇಬ್ಬರೂ ಸೇರಿ ಕಾರನ್ನು ನಿಲ್ಲಿಸಿದ ರಸ್ತೆ ಪಾರ್ಕಿಂಗ್ ಹತ್ತಿರ ಧಾವಿಸಿದರು. ರಾತ್ರಿ ವೇಳೆಯ ಆಕಾಶದಂತೆ ಕಡು ನೀಲಯ ಒಪೆಲ್ ಟಿಗ್ರಾದ ಬಾನೆಟ್ ಕಡೆಯಿಂದ ಬಾಗಿಲು ಹತ್ತಿರ ಬಂದ ಬ್ರೀಟ್ವೀಸರ್ ಕೋಟ್ ಹಿಂದಿನಿಂದ ಹೊರತಂದು ಶಿಲ್ಪವನ್ನು ಒಳಕ್ಕೆ ಜಾರಿಸುತ್ತಾನೆ. ಪಕ್ಕದಲ್ಲಿ ಕೈ ಚಾಚಿ ಶಿಲ್ಪವನ್ನು ಹಿಡಿದುಕೊಂಡ ಅನ್ನೆಘಿ, ಪ್ಯಾಸೆಂಜರ್ ಆಸನದಲ್ಲಿ ಅದನ್ನು ಸರಿಹೊಂದಿಸಿ ಕುಳಿತರೆ , ಈತ ಬಾಗಿಲು ಎಳೆದುಕೊಂಡು ಇಗ್ನೀಶನ್ ತಿರುವಿ ಕಾರ್ ಚಾಲೂ ಮಾಡುತ್ತಾನೆ. ತನ್ನ ಕಾರನ್ನು ಶರವೇಗದಲ್ಲಿ ಓಡಿಸುವುದೂ ಆತನಿಗೆ ಗೊತ್ತುಘಿ, ಆದರೆ ಒಳಗೊಂದು ಅಮೂಲ್ಯ ವಿಗ್ರಹ ಇಟ್ಟುಕೊಂಡು ಬೇಕಾಬಿಟ್ಟಿ ವ್ಯವಹರಿಸುವುದು ಆಗ ಅವನಿಗೆ ಬೇಕಾಗಿರಲಿಲ್ಲಘಿ. ಪಟ್ಟಣದ ವರ್ತುಲ ರಸ್ತೆಗೆ ಸೇರಿಕೊಂಡು ಟ್ರಾಫಿಕ್ ದೀಪಗಳ ಪ್ರಖರತೆ ತಪ್ಪಿಸಿ ಕಾರು ಹೆದ್ದಾರಿಯನ್ನು ತಲುಪುತ್ತಲೇ ವೇಗ ಪಡೆಯುತ್ತದೆ. ಆದಂ- ಈವ್ ವಿಗ್ರಹದ ಪ್ರಭಾವವೋ, ಹೆದ್ದಾರಿಯಲ್ಲಿ ಸಿಗುವ ಓಟದ ಸ್ವಾತಂತ್ರವೋ ಅಂತೂ ೨೫ರ ಹರಯದ ಪ್ರೇಮಿಗಳು ವಾಯು ಯಾನದಲ್ಲಿ ಇರುವವರಂತೆ ವೇಗವಾಗಿ ತಮ್ಮ ಗೂಡನ್ನು ಸೇರಿಕೊಂಡರು. -- ಮುಂದುವರರಿಯುವುದು..
Read More

ಉಚ್ಚಂಗಿದುರ್ಗ ನೋಡಲು ಇದು ಸಕಾಲ

ಉಚ್ಚಂಗಿದುರ್ಗ ನೋಡಲು ಇದು ಸಕಾಲ
ದಾವಣಗೆರೆಯಿಂದ 25 ಕಿಲೋಮೀಟರ್ ದೂರದಲ್ಲಿರುವ ಉಚ್ಚಂಗಿದುರ್ಗವು ನಿರ್ಲಕ್ಷಕ್ಕೊಳಗಾದ ಇನ್ನೊಂದು, ಪಿಕ್ನಿಕ್ ಸ್ಪಾಟ್ ‌. ಬಳ್ಳಾರಿ ಜಿಲ್ಲೆಗೆ ಸೇರುವ ಈ ಪ್ರದೇಶವು ದಾವಣಗೆರೆ ಜಿಲ್ಲೆ ಜಗಳೂರು ಶಾಸನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದೆ. ಬನವಾಸಿಯ ಕದಂಬರ ಕಾಲದ ಹಿನ್ನೆಲೆ ಹೊಂದಿರುವ ಇಲ್ಲಿನ ಕೋಟೆ, ಉತ್ಸವಾಂಬೆ ನಮಗೆ ಕರುನಾಡಿನ ಇತಿಹಾಸದ ಮಹತ್ವ ಸಾರುತ್ತವೆ. ಸಣ್ಣದಾಗಿ ಗುಡ್ಡ / ಕೋಟೆ ಹತ್ತಿ, ದೊಡ್ಡದೊಂದು ದಿಗಂತ ನೋಡುವ ಇಲ್ಲಿನ ಸಂಭ್ರಮ, ನಮ್ಮ ಸಂವೇದನೆಯನ್ನು ಹರಿತಗೊಳಿಸುವ ತಾಣ. ಕೋಟೆಯ ಕಲ್ಲುಗಳು ಸುತ್ತಲಿ ಹಸಿರು ಕವಿದ ಹುಲ್ಲು ಗಳಿಂದ ಈಗಂತೂ ಹೊಸ ಬಣ್ಣ ಪಡೆದಿದೆ. ಮಾನವ ಕಣ್ಣಿನ 576 ಮೆಗಾ ಫಿಕ್ಸೆಲ್ ಕ್ಯಾಮರಾಕ್ಕೆ ಸಮೃದ್ಧ ಫೋಕಸ್ ಕೊಡುವ ಹಸಿರು ತಿಟ್ಟ ಬೆಟ್ಟದ ಮಾಲೆಗಳು, ಮೋಡದ ಚಪ್ಪರದಲ್ಲಿ ಏನೆಲ್ಲ ಸಂಭ್ರಮವನ್ನು ಸ್ಪುರಿಸುತ್ತವೆ. ಇದನ್ನೆಲ್ಲ ಸವಿಯಲು ಜಾತ್ರೆಯ ಹೊರತಾದ ದಿನವೇ ಹೋಗಬೇಕು..ಇದು ಸಕಾಲ. ಇನ್ನು ಉತ್ಸವಾಂಬೆಯ ಕಾರಣಿಕ ಹಲವುಬಗೆಯಲ್ಲಿದೆ. ಹೊರಗೆ ಕಾಣುವ ಉತ್ಸವಾಂಬೆಗೆ, ಒಳಗೊಂದು ಶಕ್ತಿ ರೂಪ. ಬೆನ್ನಿಗೊಂದು ಪೂಜೆ, ಎಡದಲ್ಲಿ ಹಿರಿಯ ದೇವಿಗೆ ಎಡೆಯ ಸ್ಥಾನ,ಪಾಳೆಗಾರರ ಕಾಲದ ಗಂಟೆ ಸಹಿತ ಎಷ್ಟೊಂದು ನಿಗೂಢ. ಉಚ್ಚಂಗೆಮ್ಮ ನಿನ್ನಾಲುಕು ಉಧೋ.. ! ಆ ಜಾತ್ರೆ ಜಂಗುಳಿಯ ವಿಶೇಷ, ಬಲಿ, ಹರಕೆ ಎಲ್ಲವೂ ಇರಲಿ. ಆದರೆ ಅವುಗಳಿಗೊಂದು ಕ್ರಮ ಇರಲಿ ಅಲ್ಲವೇ. ಈಗ ಮೌಢ್ಯವು ಬಹುತೇಕ ತಗ್ಗಿದೆ. ಇದಕ್ಕೆ ಬೇರೊಂದು ಉದ್ದೇಶದಿಂದ ಸಂದರ್ಶಕರ ಸಂಖ್ಯೆ ಹೆಚ್ಚಬೇಕು. ಕೋಟೆಯ ಇತಿಹಾಸ ಹಾಗೂ ಪ್ರಾಕೃತಿಕ ದೃಷ್ಟಿಯಿಂದ ಇವುಗಳನ್ನು ನೋಡುವ ದೃಷ್ಟಿ ನಮ್ಮಲ್ಲಿ ತೆರೆಯಬೇಕು.. ಆರಮನೆಯ ಅವಶೇಷಗಳು, ದ್ವಾರಗಳು, ಇಂಥ ಕೋಟಯಲ್ಲಿ ಅಂದಿನವರ ಬದುಕು ಎಷ್ಟು ಸಾಹಸಮಯವಾಗಿತ್ತು.. ನಮ್ಮ ಪೂರ್ವಜರ ಕಷ್ಟ ವಸಹಿಷ್ಣುತೆ ನಮ್ಮ ಇಂದಿನ ಸ್ಟ್ರೆಸ್ ಗಳಿಗೆ ಒಂದು ರಿಲೀಫ್ ಹೇಗೆ ? ಇಂಥವುಗಳನ್ನು ಪ್ರೇಕ್ಷಕರ ಗಮನ ಸೆಳೆಯುವಂತಾಗಬೇಕು.. ಇಂಥದ್ದೊಂದು ಸ್ಪಾಟ್ ಇದ್ದರೆ ಪಾಶ್ಚಾತ್ಯ ದೇಶ ಪಡುತ್ತಿದ್ದ ಹೆಮ್ಮೆ, ಸಂಭ್ರಮ ಎಷ್ಟು ಎಂದು ಅಲ್ಲಿಗೆ ಹೋಗಿಬರುವವರು ಹೇಳಬೇಕು.. ಯಾಕೆ ನಮಗೆ ನಮ್ಮೂರು ಸುಂದರವಾಗಿ ಕಾಣುತ್ತಿಲ್ಲ ?! ನಾವೇಕೆ ನಮ್ಮ ಯಾತ್ರಾಸ್ಥಳದ ಬಗ್ಗೆ ಹೆಮ್ಮೆಪಟ್ಟು, ಸ್ವಚ್ಚವಾಗಿ ಇಡುತ್ತಿಲ್ಲ ? ಸರಿಯಾದ ಮೂತ್ರದೊಡ್ಡಿ ಇಲ್ಲ, ಸ್ವಚ್ಚತೆಯ ಕೊರತೆ, ಮುತ್ತಿಗೆ ಹಾಕುವ ಭಿಕ್ಷುಕರ ನಡುವೆಯೂ, ಖುಷಿಪಡಿಲು ಸಾಕಷ್ಟು ವಿಷಯ ಇದೆ ಎಂದಾದರೆ, ಇವೆಲ್ಲವನ್ನೂ ಸರಿಪಡಿಸಿದರೆ ನಮ್ಮ ಹೆಮ್ಮೆಗೆ ಎಣೆ ಉಂಟೆ.. ಜನಪ್ರತಿನಿಧಿಗಳ ಪ್ರಯಾರಿಟಿ ಏನು ಅಂತಲೇ ಅರ್ಥವಾಗುವುದಿಲ್ಲ. ಉಚ್ಚಂಗಿ ದುರ್ಗದ ಪಿಕ್ ನಿಕ್ ಗೆ ಇದು ಸಕಾಲ. 1- ಮಳೆಯ ಕಾರಣ ಎಲ್ಲೆಡೆ ಹಸಿರೇ ಗೋಚರಿಸುತ್ತದೆ. 2- ಕೋಟೆ ಹತ್ತಿದರೂ ದಣಿವು ಅನಿಸುವುದಿಲ್ಲ. 3- ಜಾತ್ರೆ ಸಂದರ್ಭಗಳ ರಶ್ಶು ಇಲ್ಲ. 4 - ಕೊರೊನಾ ಕಾರಣದಿಂದ ಸ್ಥಳೀಯ ಪ್ರವಾಸ ಸ್ವೀಟ್ & ಶಾರ್ಟ್ ‌. ಉಚ್ಚಂಗಿದುರ್ಗಕ್ಕೆ ಹೋಗಿ ಬನ್ನಿ..
Read More

ವಿದ್ಯಾರ್ಥಿ ನಿಲಯದ ಕೀ ಪರ್ಸನ್

ವಿದ್ಯಾರ್ಥಿ ನಿಲಯದ ಕೀ ಪರ್ಸನ್

ವಿದ್ಯಾರ್ಥಿ ನಿಲಯದ ಕೀ ಪರ್ಸನ್ - ಮಾರುತಿ
ನನ್ನ ಹಾಸ್ಟೆಲ್ ವಾಸ್ತವ್ಯದ ನೆನಪುಗಳಲ್ಲಿ ಒಂದನ್ನು ಇಲ್ಲಿ ಹೇಳುತ್ತೇನೆ...
ಧಾರವಾಡ ಕೆಎಚ್ಕೆ ಹಾಸ್ಟೆಲ್ ನಲ್ಲಿ  ಇದ್ದಾಗ  ಜೆಎಸ್ಎಸ್ ಸಮೂಹದ ವಿದ್ಯಾರ್ಥಿ ನಿಲಯಕ್ಕಾಗಿ ಅಲ್ಲೊಬ್ಬ ಮಾರುತಿ ಎಂಬ ಸಹಾಯಕ ಇದ್ದ.
ಹಗಲಿಡೀ ಕಡು ಮೌನಿಯಾಗಿರುತ್ತಿದ್ದ ಆತ ಸಂಜೆ ಕುಡಿದು ಬಂದಾಗ ಆತನ ವಾಗ್ವೈಕರಿ, ಚೀರಾಟ ನೋಡುವುದು ನಮಗೆಲ್ಲ ಒಂದು ಮನರಂಜನೆ.
1990 ರಲ್ಲಿಯೇ ಆತ 70 ವರ್ಷದ  ಸೇವಾ ನಿರತ ಹಿರಿಯ ನಾಗರೀಕ. ಆತನಿಗೆ ಅಷ್ಟೊಂದು ವಯಸ್ಸಾಗಿತ್ತೋ ಅಥವಾ ದಿನ ರಾತ್ರಿ ದ್ರವಾಹಾರ ಮಾತ್ರ (ಸರಾಯಿ) ಸೇವಿಸುತ್ತಿದ್ದ ಕಾರಣ ಅಷ್ಟೊಂದು ವಯಸ್ಸಾದಂತೆ ಕಾಣುತ್ತಿದ್ದನೋ ! ಗೊತ್ತಿಲ್ಲ.
ಮುಖವಿಡೀ ತುಂಬಿದ್ದ ಹುಲುಸಾದ ದಾಡಿ. ಹಲ್ಲುಗಳೇ ಇಲ್ಲದ ಬಾಯಿ. ಜತೆಗೆ ಬರೋಬ್ಬರಿ ಒಂದಿಂಚು ದಪ್ಪದ ಸೋಡಾ ಗ್ಲಾಸ್ ಕನ್ನಡಕ ಆತನ ಮುಖ ಲಕ್ಷಣ. ಮಾತಾಡಿದರೆ ಆ ಸಣಖು ದೇಹದ ನಾಭಿಯಿಂದಲೇ ಹೊರಡುತ್ತಿದ್ದ ಹೆಣ್ಣು ಸ್ವರ ಇನ್ನೂ ಮಾರ್ಧನಿಸುವಂತಿದೆ.
ಇಷ್ಟೊಂದು ನರಪೇತಲ ಎಂದು ಅನ್ನಿಸುವುದಿಲ್ಲವೇ ?
ನಿಜಕ್ಕೂ ಈ ವ್ಯಕ್ತಿಯಲ್ಲಿ ಏನು ಸಾಧ್ಯ ಇತ್ತು ಎಂದು ಆತನನ್ನು ನಮ್ಮ ಕೆಮೆಸ್ಟ್ರೀ ಲೆಕ್ಚರರ್ ಕಮ್  ವಾರ್ಡನ್ ಅಷ್ಟಪತ್ರಿ ಸರ್ ಇಟ್ಟುಕೊಂಡಿದ್ದರು ಎಂದು ಕುತೂಹಲ ಉಂಟಾಗುತ್ತಿತ್ತು.
ಅಷ್ಟು ಕೃಷವಾದ ದೇಹಿ.
ಆತನ ಕನ್ನಡಕ ಅವನೊಂದಿಗೆ ಅವಿನಾಭಾವ ಹೊಂದಿತ್ತು.
ಈ ಕನ್ನಡಕ ಇಲ್ಲದಿದ್ದರೆ ಆತನಿಗೆ ನಡು ಹಗಲೂ ಕೂಡ ಏನು ಅಂದರೆ ಏನೇನೂ ಕಾಣಿಸುತ್ತಿರಲಿಲ್ಲ.. !
ನಿಜ.. ಗೋಳಿ ಸೋಡಾ ಬಾಟಲಿನ ತಳದಲ್ಲಿ ಹೊಂದಿಸುವ ಗಾಜುಗಳನ್ನು ಜೋಡಿಸಿದಂತೆ ಕಾಣುತ್ತಿತ್ತು.
ರಾತ್ರಿ ಕುಡಿದ ಮೇಲೆ ತಾನು ಬಿದ್ದರೂ ಕನ್ನಡಕ ಬೀಳದಂತೆ ಇರಲು ಅವುಗಳ ಕಾಲಿಗೆ ಸೊಣಬೇ ಹುರಿಯನ್ನು ಹೆಣೆದು ಹಿಂದಕ್ಕೆ ಕಟ್ಟಿ  ಭದ್ರವಾಗಿ ಇಡುತ್ತಿದ್ದ..!
ಹಾಸ್ಟೆಲ್ ಎದುರಿಗೇ ಇತ್ತು ಅನ್ನಿಸುತ್ತದೆ ಒಂದು go down. ಅಲ್ಲಿ ಆತನಿಗೊಂದು ಶೆಡ್ ಇತ್ತು. ಮುರಿದ ಚೇರು, ಕಾಟು, ಬೆಡ್ಡು, ಬಕೆಟ್ ಸೇರಿದಂತೆ ಏನೆಲ್ಲ ಅಲ್ಲಿ ಇರುತ್ತಿತ್ತು. ವಿಶೇಷವಾಗಿ ಅಲ್ಲಿನ ಗೂಟಗಳಿಗೆ ಕೀಲಿಯ ಗೊಂಚಲುಗಳನ್ನು ತೂಗಿ ಹಾಕಲಾಗುತ್ತಿತ್ತು.
ಇಡೀ ಹಾಸ್ಟೆಲ್ ಚಾವಿಗಳ ಉಸ್ತವಾರಿಯೇ ಮಾರುತಿಗಿತ್ತು.
No doubt he was a key person.!
ಯಾರೇ ಹೊಸ ಹುಡುಗರು ಬಂದರೂ ದೊಡ್ಡದೊಂದು ಗೊಂಚಲು (ಸುಮಾರು ಐವತ್ತು) ಚಾವಿಯನ್ನು ಹಿಡಿದು ರೂಮ್ ಬಾಗಿಲು ತೆಗೆದು ಕೊಡುತ್ತಿದ್ದ.
ತಾತ್ಕಾಲಿಕವಾಗಿ ಅವನಲ್ಲಿ ಬೀಗದ ಕೈಗಳು ಎರವಲು ಸಿಗುತ್ತಿದ್ದವು. ಬಂದ ಹುಡುಗರಿಗೆ ನಿರ್ಭಾವುಕವಾಗಿ ರೂಂ ತೋರಿಸುತ್ತಿದ್ದ. ಹುಡುಗರನ್ನು ಹದ್ದು ಬಸ್ತಿಗಿಡುವ ಸಂಪೂರ್ಣ ಜವಾಬ್ದಾರಿ  ವಾರ್ಡನ್ ಅವರದ್ದಾಗಿತ್ತು.
ಊರಿಂದ ತಂದೆ ತಾಯಿಯನ್ನು, ಅಜ್ಜ ಅಜ್ಜಿಯರನ್ನು, ಕೀಟಲೆ ಮಾಡುವುದಕ್ಕೆಂದೇ ಇರುವ ತಂಗಿಯರನ್ನು ಬಿಟ್ಟು ಬರುವ ಕಾಲೇಜು ಹುಡುಗರಿಗೆ ಇವನೊಬ್ಬ ಸಾಂತಾ ಕ್ಲಾಸ್..!
ಇದೇ ಕಾರಣಕ್ಕೆ ಆತನ ಕುರಿತು ಎಲ್ಲರಿಗೂ ಪ್ರೀತಿ..ಕೆಲವೊಮ್ಮೆ ಮನೆಯಿಂದ ಬರುವ ಪಾಕಿಟ್ ಮನಿಯಲ್ಲೂ ಹತ್ತಿಪ್ಪತ್ತು ಕೊಟ್ಟು ರಾತ್ರಿ "ಮಾರುತಿ ಪ್ರತಾಪ" ನೋಡುವ ಶ್ರೀಮಂತ ದಾನಿಗಳೂ ನಮ್ಮ ಹಾಸ್ಟೆಲ್  ಸಹಪಾಟಿಗಳಾಗಿದ್ದರು.
ಗಾಳಿಗೆ ಊದಿದರೆ ಹಾರಿಸಿಕೊಂಡು ಹೋಗಬಹುದಾಗಿದ್ದ ಮಾರುತಿಯಲ್ಲಿ   ಒಂದು ಮಹಾನ್ ಶಕ್ತಿ ಇತ್ತು ಕಣ್ರಿ. ಹಾಸ್ಟೆಲ್ ನಲ್ಲಿ ಆಗೀಗ ಕಟ್ಟಿಕೊಳ್ಳುತ್ತಿದ್ದ ಚರಂಡಿ ಪೈಪನ್ನು ಸ್ವತಃ ಇಳಿದು ರಿಪೇರಿ ಮಾಡುತ್ತಿದ್ದ ಪುಣ್ಯಾತ್ಮ. ಹುಡುಗರು ಹಾಗೂ ಒಟ್ಟು ವಿದ್ಯಾರ್ಥಿ ನಿಲಯದ  ಸೇವೆ ಸಲ್ಲಿಸುವುದಕ್ಕೆ ಆತನಿಗೆ ಹೇಸಿಗೆ ಎಂಬದೇ ಇರಲಿಲ್ಲ.
ಹಾಸ್ಟೆಲ್ ವಿದ್ಯಾರ್ಥಿಗಳ ಬಗ್ಗೆ ಆತನಲ್ಲಿ  ಒಂದು ತಾಯಿ ಹೃದಯ ಇತ್ತು. ಅದನ್ನು ಸಾಬೀತು ಪಡಿಸುವ ಒಂದು ನಿದರ್ಶನ ಹೇಳುತ್ತೇನೆ.
ನಾವು ಕಾಲೇಜಿಗೆ, ಮೆಸ್ ಗೆ ಕೊನೆಗೆ ಶೌಚಾಲಯಕ್ಕೆ ಹೋಗುವಾಗಲೂ ನಮ್ಮ ರೂಮಿನ ಚಾವಿಯನ್ನು ಹಿಡಿದುಕೊಂಡೇ ಹೋಗಬೇಕಿತ್ತು.
ಭದ್ರತಾ ದೃಷ್ಟಿಯಿಂದ ಹಾಗೊಂದು ನಿಯಮವನ್ನು ಮೊದಲಿನಿಂದಲೂ ಪಾಲಿಸಲಾಗುತ್ತಿತ್ತು.
ಅದರಲ್ಲಿ ಕೆಲವು ಬಾತ್ ರೂಂ, ಟಾಯ್ಲೆಟ್ ಗಳಲ್ಲಿ  ಟವೆಲ್ ಹಾಗೂ ಚಾವಿಯನ್ನು ಇಡಲು ಮೊಳೆ ಇರುತ್ತಿರಲಿಲ್ಲ. ನಮ್ಮ ಸ್ನೇಹಿತರಂತೇ ಕಾಣುತ್ತಿದ್ದ ಕೆಲವು ತಮ್ನ ಬಾತ್ ರೂಂ ಬಹದ್ದೂರ್ ಗಿರಿ ಭಾಗವಾಗಿ  ಕಿತ್ತು ಹಾಕುತ್ತಿದ್ದರು.
ಸ್ನಾನಕ್ಕೆ ಹೋದಾಗ, ಶೌಚಾಲಯಕ್ಕೆ ಹೋದಾಗ ಕೆಲವೊಮ್ಮೆ ಕೈ ತಪ್ಪಿ  ಬೇಸಿನ್ ಗೆ ಬೀಳುತ್ತಿದ್ದ ರೂಂ ಚಾವಿ ದೊಡ್ಡ ಪಜೀತಿ ತಂದಿಡುತ್ತಿತ್ತು.
ಆ ಸಂದರ್ಭದಲ್ಲಿ ನನಗೆ ಸಹಾಯಕ್ಕೆ ಬರುತ್ತಿದ್ದ ಪುಣ್ಯಾತ್ಮ ಕೂಡ ಇದೇ ಮಾರುತಿ.
ಯಾವ ಮುಜುಗರವೂ ಇಲ್ಲದೆ ಬೇಸಿನ್ ಒಳಕ್ಕೆ ಕೈ ಹಾಕಿ
ಚಾವಿ  ತೆಗೆದುಕೊಡುತ್ತಿದ್ದ.
ಇದು ಮಕ್ಕಳಿಗೆ ಒಬ್ಬ ತಾಯಿ ಮಾತ್ರ ಮಾಡಬಹುದಾದ ಸೇವೆ ಎಂದು  ಈಗಲೂ ನನಗೆ ಅನಿಸುತ್ತದೆ.
ಬಹುಶಃ ಇದೀಗ ಬದುಕಿದ್ದರೆ ಸೆಂಚುರಿ ಬಾರಿಸುತ್ತಿದ್ದ ಮಾರುತಿ ನನಗಂತೂ ಮರೆಯಲಾಗದ ವ್ಯಕ್ತಿ.
ಜೆಎಸ್ಎಸ್ ಕಾಲೇಜಿನ ನಮ್ಮ ಬ್ಯಾಚಿನ ವಿದ್ಯಾರ್ಥಿಗಳನ್ನೆಲ್ಲ ಸೇರಿಸುವಾಗ, ಸ್ನೇಹಿತ ಶ್ರೀಕಾಂತ ಜೋಶಿ  ನನ್ನ ಸಹಪಾಠಿಗಳ ನೆನಪನ್ನು ಮಾತ್ರವಲ್ಲ ಇಂಥ ಕೆಲವು ಒಡನಾಟ ಮೆಲುಕು ಹಾಕುವಂತೆ ಮಾಡಿದ್ದಾರೆ.
-ಸದಾನಂದ ಹೆಗಡೆ

Read More

ನೀಲಿ ಕಣ್ಣಿನ ಕಪ್ಪು ನಾಯಿ

ನೀಲಿ ಕಣ್ಣಿನ ಕಪ್ಪು ನಾಯಿ
ನೀಲಿ ಕಣ್ಣಿನ ಕಪ್ಪು ನಾಯಿ
****#########*****
ನಾಯಿ ಗೇಟಿನ ಆಚೆ ಇದ್ದ ಕಾರಣ ನನಗೆ ಅದರ ಕಣ್ಣನ್ನು ನೋಡಲು ಭಯ ಇರಲಿಲ್ಲ.
ಇಪ್ಪತೈದು ವರ್ಷ ಹಿಂದೆ ಕಂಡ  ಆ ನಾಯಿಯ ಕಣ್ಣು ಇನ್ನೂ ನನಗೆ ಚೆನ್ನಾಗಿ ನೆನಪಿದೆ.  ಕಪ್ಪಾದ ನಾಯಿಯ ಆ ಕಣ್ಣು  ಒಳ್ಳೆ ನೀಲಿ ವಜ್ರ ಹೊಳೆದಂತೆ ಹೊಳೆಯುತ್ತಿತ್ತು.
ಚಿಕ್ಕವಳಾಗಿದ್ದಾಗ ನನಗೆ ನಾಯಿಗಳ ಬಗ್ಗೆ  ಭಯ ಮಿಶ್ರಿತ ಕುತೂಹಲ.  ಆಚೆ ಕೇರಿಗೆ ತೊಕ್ಕಲಿಕ್ಕೆ ಹೋಗಿ ಬರುತ್ತಿದ್ದಾಗಲೆಲ್ಲ  ಆ ಮಾರ್ಗದಲ್ಲಿ ಈ  ನಾಯಿ ಮುಖಾಮುಖಿ ಆಗುತ್ತಿತ್ತು. ಗೇಟಿನ ಆಚೆಯಿಂದ ನಮ್ಮನ್ನು ನೋಡುತ್ತಿದ್ದ  ನಾಯಿಯನ್ನು ಹೊರಗಿನಿಂದಲೇ ಕಣ್ಣಲ್ಲೇ ಮಾತಾಡಿಸಿ ಹಾಯ್ ಮಾಡಿ ಬರುತ್ತಿದ್ದೆ.
 ಮನೆಯಿಂದ ತೋಪನ್ನು ದಾಟಿ, ಕೂಗಳತೆಯ ದೂರದಲ್ಲಿ  ಆಚೆ ಕೇರಿ ಮಾರ್ಗದಲ್ಲಿ  ನಾಯಿ ಕಾರಣಕ್ಕೆ ಅ ಮನೆ ಕೂಡ ನೆನಪಿದೆ. ಆಗಿನ್ನೂ ನಮ್ಮದು ಮಂಗಳೂರು ಹೆಂಚಿನ ಮನೆ.  ಕಾರಂತರ  ಆರ್‌ಸಿಸಿ ಮನೆಯಲ್ಲಿ ಬಾಡಿಗೆ ಇದ್ದ  ಅದರ ಯಜಮಾನರು, ಬಹುಶಃ ಪೋರ್ಬುಗಳು ಅನ್ಸುತ್ತೆ. ಅವರೆಲ್ಲ ಗಲ್ಫ್‌ಗೆ ವೃತ್ತಿ ಕಾರಣಕ್ಕೆ ವಲಸೆ ಹೋಗುವಾಗ, ಆ ನಾಯಿಯನ್ನು ಅಲ್ಲಿಯೇ ಬಿಟ್ಟು ಹೋಗಿಬಿಡಬೇಕೆ ? ಅದೊಂದು ಹೆಣ್ಣು ನಾಯಿ ಆಗಿದ್ದರಿಂದ ಯಾರೂ ಖಾಯಾಸ್ ಮಾಡಿರಲಿಲ್ಲ ಅನಿಸುತ್ತದೆ. ಅವರು ಹೋದ ಬಳಿಕ ಒಂದು ವಾರ ಅದು ಯಾರ ನಾಯಿಯೂ ಆಗಿರಲಿಲ್ಲ.
ಇದೇ ಹೊತ್ತಿಗೆ  ಮಹಾ ನಗರ ಪಾಲಿಕೆಯವರು ನಾಯಿಗಳನ್ನು ಹಿಡಿದು ಕೊಲ್ಲುವ ಕರ್ಯಾಚರಣೆ ಆರಂಭಿಸಿಬಿಡಬೇಕೆ. ಕೇರಳವೋ, ತಮಿಳುನಾಡೋ ಎಲ್ಲಿಂದಲೋ ಬಂದೂಕು ಹಿಡಿದು ಬಂದಿದ್ದ  ಭಯಾನಕ ವ್ಯಕ್ತಿಗಳು ನಾಯಿಗಳನ್ನು ಅಟ್ಟಾಡಿಸಿ ಕೊಲ್ಲುತ್ತಿದ್ದರು. ಮಾಲೀಕರಿಲ್ಲದ ನಾಯಿಗಳನ್ನು ನುಸಿಗಳ ಹಾಗೇ ಕೊಂದು ಹಾಕುತ್ತಿದ್ದರಂತೆ. ಈ ಕಾರ್ಯಾಚರಣೆಯಲ್ಲಿ ಕಪ್ಪು ನಾಯಿಯೂ ಉಳಿದಿರಲಿಕ್ಕಿಲ್ಲ ಎಂದು ನನಗೆ ಭಯವಾಯಿತು.
ಅಪ್ಪ ಕೂಡ ಆತಂಕ ವ್ಯಕ್ತಪಡಿಸಿದ್ದರು.
ನಮ್ಮ ವಾರ್ಡ್ ನಲ್ಲಿ ಕಾರ್ಯಾಚರಣೆ ನಡೆಸಿದ
ಸಂಜೆವೇಳೆಗೆ ನಮಗೆಲ್ಲ ಒಂದು ಅಚ್ಚರಿ ಕಾದಿತ್ತು. ಇದೀಗ ನಮ್ಮ ಬಾತ್ ರೂಮಿನ ನೀರು ಹೋಗುವ ಪಕ್ಕದಲ್ಲಿ  ಆಗ, ಇನ್ನೂ ಸಸಿ ನೆಡದೇ ದೊಡ್ಡ ತೆಂಗಿನ ಗುಳಿ ಇತ್ತು. ಅಲ್ಲಿ ಆ ಕಪ್ಪು ನಾಯಿ ಅಡಗಿಕೊಂಡು, ಬೇಟೆಗಾರರಿಂದ ಬಚಾವ್ ಆಗಿತ್ತು.
ಅದೇ ಮೊದಲು ನಮ್ಮ ಮನೆಯ ಕಂಪೌಂಡ್‌ನಲ್ಲಿ  ಕಂಡ ನಾಯಿ, ನನಗೆ ಭಯ ಹುಟ್ಟಿಸದೆ, ಅಕ್ಕರೆಯ ನಾಯಿಯಾಗಿ ಕಂಡಿತು. ಅಪ್ಪನಿಗೆ ನಾನು ಆ ನಾಯಿಯನ್ನು ತೋರಿಸಿದೆ, ಅಲ್ಲದೆ, ಇಬ್ಬರೂ ಹೋಗಿ ಮಾತಾಡಿಸಿ, ಒಂದು ದೋಸೆಯನ್ನೂ ಕೊಟ್ಟು ಬಂದೆವು.
ಅದೇ ದಿನದಿಂದ ಆ ಕಪ್ಪು ನಾಯಿ ನಮ್ಮ ಮನೆಯದಾಗಿತ್ತು.
ಅಷ್ಟಾದರೂ ತಾವು ಬೇರೆ ದೇಶಕ್ಕೆ ಹೋಗುವಾಗ ಪೊರ್ಬುಗಳು ನಾಯಿಯನ್ನು ಬಿಟ್ಟು ಹೋಗಬಾರದಿತ್ತು ಪಾಪ.
ನಿಜಕ್ಕೂ ಅದೊಂದು ಪಾಪದ ನಾಯಿ. ಯಾವತ್ತೂ ಯಾರನ್ನೂ ಕಚ್ಚಲಿಲ್ಲ. ಉಳಿದ ಹೊತ್ತು ಎಲ್ಲಿ ಇರುತ್ತಿತ್ತೋ ಗೊತ್ತಿಲ್ಲ. ಬೆಳಗ್ಗೆ  ಸಂಜೆ ನಮ್ಮ ಮನೆಗೆ, ನಾನು ಶಾಲೆ ಬಿಟ್ಟು ಬರುವಾಗ ನನ್ನನ್ನು, ತಂಗಿಯನ್ನೂ ಸ್ವಾಗತಿಸುತ್ತಿತ್ತು. ರಜೆಯ ದಿನ ನಾನು ಹೋದಲ್ಲೇ ಬರುತ್ತಿತ್ತು. ಸಮೀಪದ ಮಾರಿಗುಡಿಗೆ ಹೋದರೆ, ನಮ್ಮ ಜತೆಯೇ ಬಂದು, ನಾವು ದೇವಸ್ಥಾನದೊಳಗೆ ಹೋಗಿ, ಸುತ್ತು ಹೊಡೆದು ಬರುವ ತನಕ ಬಾಗಿಲಲ್ಲಿ ಕಾಯ್ದು ವಾಪಸ್ ನಮ್ಮ ಜತೆಗೆ ಬರುತ್ತಿತ್ತು.
ಪೊರ್ಬುಗಳ ಮನೆಯಲ್ಲಿ  ನಾಲ್ಕಾರು ವರ್ಷ ಇದ್ದರೂ, ಅದೇಕೋ ಮರಿಯನ್ನು ಇಟ್ಟಿರಲಿಲ್ಲ. ಬಹುಶಃ ಮರಿಯಾಗದಂತೆ ಔಷಧ ಕೊಟ್ಟಿದ್ದರು ಅನ್ನಿಸುತ್ತದೆ. ಮನೆಯಲ್ಲೇ ಕೂಡಿ ಇರುತ್ತಿದ್ದ ಕಾರಣ ಹೊರ ಜಗತ್ತಿನ ಸಂಬಂಧ ಇಲ್ಲದೆ ಸುರಕ್ಷಿತವಾಗಿತ್ತು.
ನಮ್ಮ  ಮನೆಯಲ್ಲಿ ನಾಯಿಗೆ ಯಾವತ್ತೂ ಸರಪಳಿ ಹಾಕಿರಲಿಲ್ಲ. ಎಲ್ಲೆಲ್ಲಿ ಹೋಗಿ ಬರುತ್ತಿತ್ತೋ ಗೊತ್ತಿಲ್ಲ. ಆದರೂ ನಮ್ಮ ಮನೆಯ ಹೊರತೂ ಇನ್ನೊಬ್ಬರಿಗೆ ಅದು ಯಾವತ್ತೂ ನಿಷ್ಟೆ ತೋರಿದ್ದಿಲ್ಲ.
ಎಲ್ಲೆಲ್ಲ ಹೋಗಿ ಏನೆಲ್ಲ ತಿಂದು ಬರುತ್ತದೆ ಎಂದು ಕೆಲವರು ಹೇಳಿದ್ದರೂ ನನಗೆ ಹಾಗೆಲ್ಲ ಅನ್ನಿಸುತ್ತಿರಲಿಲ್ಲ.. ಅಂತೂ ಕ್ರಮೇಣ ಆ ನಾಯಿ ಊರಿಗೆಲ್ಲ ನಮ್ಮ ಮನೆಯ ನಾಯಿ ಆಗಿ ಗುರುತಿಸಿಕೊಂಡಿತು.  ಪ್ರತೀ ಆರು ತಿಂಗಳಿಗೊಮ್ಮೆ ಒಂದು ವರ್ಷಕ್ಕೊಮ್ಮೆ  ಮರಿ ಇಡುವ ಕಾರ್ಯ ಮುಂದು ವರಿಸಿತು.
ಅದು ಮೊದಲ ಬಾರಿ ಮರಿ ಇಡುವಾಗ ಅದರ ಜಾಗ ಹುಡುಕುವ ಕಟಪಟೆಯನ್ನು ನಾನು ಚೆನ್ನಾಗಿ ಗಮನಿಸಿದ್ದೇನೆ. ಆಗಲೇ ಅದರ ಹೊಟ್ಟೆಯಲ್ಲಿ ಚಿಕ್ಕ ಮರಿಗಳು ಓಡಾಡುವುದನ್ನು ನಾವು ಮಕ್ಕಳೆಲ್ಲ  ಗಮನಿಸುತ್ತಿದ್ದೆವು. ಹೊರ ಬರುವ ಚಿಕ್ಕ ಚಿಕ್ಕ ಮರಿಗಳ ಬಗ್ಗೆ ನಾನು ವಿಶೇಷ ಕುತೂಹಲಿಯಾಗಿದ್ದೆ.
ಅದೊಂದು ಸಂಜೆ ನಮ್ಮ ಮನೆಯ ಕಿರು ಕಟ್ಲ ಹಿಂದೆ, ಒಂದಿಷ್ಟು ಮೃದುವಾದ ಮಣ್ಣನ್ನು ತನ್ನ ಮುಂಗಾಲಿನಲ್ಲಿ  ಅಗೆದು ರಾಶಿ ಹಾಕಿ ಅಲ್ಲೊಂದು ಪೊಟರೆಯನ್ನು  ನಿರ್ಮಿಸಿಕೊಳ್ಳುವಷ್ಟರಲ್ಲಿ  ಕತ್ತಲಾಗಿದ್ದರಿಂದ ನಾವೆಲ್ಲ, ಮನೆಯೊಳಗೆ ಸೇರಿ, ಕೈ ಕಾಲು ತೊಳೆದು,ಹಾಗೇ ಚಿಕ್ಕ ಭಜನೆಯನ್ನು ಮಾಡಿ, ಊಟ ಮಾಡಿ ಮಲಗಿ ನಾಯಿಯನ್ನು ಮರೆತೆವು..
ಬೆಳಗ್ಗೆ ಎದ್ದು, ಮನೆ ಸುತ್ತಲಿನ ಗಿಡಗಳನ್ನು ನೋಡುತ್ತ ಹಲ್ಲುಜ್ಜುವುದು ನನ್ನ ರೂಢಿ. ಹಾಗೆಯೇ ನೋಡುತ್ತ, ತಕ್ಷಣ ನಾಯಿಯ ನೆನಪಾಗಿ ಕಿರು ಕಟ್ಲಿಗೆ ಬಂದೆ.
ಅಲ್ಲಿ ಮುಖವಷ್ಟನ್ನೇ ಹೊರ ಚಾಚಿಕೊಂಡು ದಣಿದ ಕಣ್ಣಿನಿಂದ ನನ್ನನ್ನು ನೋಡಿ, ಕಿವಿ ಅಲ್ಲಾಡಿಸಿತು. ಪಕ್ಕದಲ್ಲಿ ಕುಯ್ ಕಯ್ ಎಂದು ಒಂದರ ಕುತ್ತಿಗೆಯ ಮೇಲೆ ಇನ್ನೊಂದು ಹೇರಿಕೊಂಡು ಕಣ್ಣು ಮುಚ್ಚಕೊಂಡೇ ಏನೋ ಹುಡುಕುತ್ತಿದ್ದ  ನಾಲ್ಕು ಪುಟ್ಟ ಮರಿಗಳಿದ್ದವು.
ಬೆಳಗಾಗುವಷ್ಟರಲ್ಲಿ ನಮ್ಮ ಮನೆ ಒಂದು ಬಾಳಂತಿ ಗೂಡಾಗಿ,  ಅಕ್ಕ ಪಕ್ಕದ ನನ್ನ ಸ್ನೇಹಿತರಲ್ಲ  ಬಂದು ನೋಡ ತೊಡಗಿದ್ದರು. ನಾನು ಮತ್ತು ಅಪ್ಪ ಇಬ್ಬರನ್ನು ಬಿಟ್ಟರೆ, ಉಳಿದೆಲ್ಲರಿಗೂ ಗುರ್ ಅನ್ನುತ್ತಿದ್ದ ನಾಯಿ, ನಮ್ಮ ಮೇಲೆ ಇಟ್ಟ ವಿಶ್ವಾಸಕ್ಕೆ ನನಗೆ ಒಳಗೊಳಗೇ ಖುಷಿ. ಅಂದು ಅಲ್ಲಿಗೇ ತಂದು ದೋಸೆಯನ್ನು ಎಸೆದೆವು. ಕ್ರಮೇಣ ಮರಿಗಳು ಕಣ್ಣು ಬಿಟ್ಟು, ತಾಯಿಯ ಹಾಲು ಕುಡಿಯುವುದು..ಮರಿಗಳು ಒಂದು ಎರಡು ತಿಂಗಳು ಆಗುತ್ತಲೇ, ತಾಯಿಯ ಹಿಂದೆ ಓಡುವುದು, ಪರಸ್ಪರ ಗೊರ್ ಅನ್ನುತ್ತ ಆಟ ಕುಪ್ಪಳಿಸಿ ಬಾಲ ಅಲ್ಲಾಡಿಸಿ ಆಡುವುದು..
ನಿಜಕ್ಕೂ ನಾಯಿ ಮರಿಗಳು ಬೆಳೆಯುವ ದಿನಗಳನ್ನು ನೋಡುವುದೇ ಒಂದು ಖುಷಿ. ತಾಯಿಗೆ ತಿರುಗಾಡಲು ಹೋಗಬೇಕಾದರೆ, ಮೊಲೆಯನ್ನು ಕಚ್ಚಿಕೊಂಡೇ ಓಡುವ ಮರಿಗಳು, ಅದರಲ್ಲೂ ಕೆಲವೊಂದು ಮರಿಗಳು, ಉಳಿದವುಗಳ ಪಾಲನ್ನೆಲ್ಲ ಕುಡಿದು ಟುಮ್ ಟುಮ್ ಆಗಿ ಬೆಳೆಯುವುದು.
 ಇನ್ನೂ ಏನೇನೋ ದೃಶ್ಯಗಳು !
ಅಬ್ಬ ಅವೆಷ್ಟು ಚುರುಕಾಗಿ ಇರುತ್ತವೆ!!
ಮರಿಯನ್ನು ಯಾರಾದರೂ ಒಯ್ದರೆ  ನಮ್ಮ ನಾಯಿಗೆ ಬೇಜಾರು ಆಗುತ್ತಿತ್ತೊ ಗೊತ್ತಿಲ್ಲ. ನನಗಂತೂ ಬೇಡ ಎಂದು ಅನ್ನಿಸುತ್ತಿತ್ತು. ಕೊಡುವುದು ಬೇಡವೆಂದು ನಾನು ಹಟ ಹಿಡಿದಾಗ ಅಮ್ಮ ನನಗೆ ಮತ್ತು ಅಪ್ಪನಿಗೆ ಇಬ್ಬರಿಗೂ ಸೇರಿಸಿ ಬಯ್ಯುತ್ತಿದ್ದಳು. ಯಾಕೆಂದರೆ, ಊರೆಲ್ಲ  ಕೊಳಕು ಮಾಡು ಮರಿಗಳ ಘನಂಧಾರಿ ಹೇಸಿಗೆ ಸ್ವಚ್ಛಗೊಳಿಸುವುದು ಅಮ್ಮನ ಕೆಲಸವಾಗಿತ್ತಲ್ಲ.
ಆಗಲೇ ಹೇಳಿದಂತೆ ಇಂಥ ಮರಿ ಇಡುವ ಕಾರ್ಯ, ನಂತರ ನಾಯಿ ಮರಿಗಳು ತಮಗೂ ಬೇಕು ಎಂದು, ಒಂದೆರಡನ್ನು ತೆಗೆದುಕೊಂಡು ಹೋಗುವವರು ಎಲ್ಲ ನಡೆಯುತ್ತಿತ್ತು.
ವಿಶೇಷವಾಗಿ ಟುಮ್ ಟುಮ್ ಆಗಿದ್ದ  ಮರಿಗಳನ್ನು ಅದರಲ್ಲೂ ಗಂಡು ಮರಿಗಳನ್ನು ಎಲ್ಲರೂ ಒಯ್ದು, ಮೂರು ತಿಂಗಳಲ್ಲಿ ಮರಿಗಳ ಸಂತೆ ಮುಗಿಯುತ್ತಿತ್ತು.  ಹೀಗೆ ಒಂದೆರಡು ಸೂಲುಗಳ ಹಂತದಲ್ಲಿ ಯಾರ್ಯಾರೋ ನಮ್ಮ ಮನೆಯ ನಾಯಿ ಮರಿಗಳನ್ನು ಕೊಂಡು ಹೋಗಿದ್ದರು. ಕೆಲವರು ಮುಂದಿನ ಬಾರಿ ಮರಿ ಹಾಕಿದಾಗ ನನಗೊಂದು ಬೇಕು ಎಂದು ಮುಂಗಡ ಹೇಳುತ್ತಿದ್ದರು..
 ಯಾರೂ ಕೊಂಡು ಹೋಗದ ಇನ್ನೊಂದು ಹೆಣ್ಣು ಮರಿ ನಮ್ಮ ಮನೆಯಲ್ಲೇ  ದೊಡ್ಡದಾಗಿದ್ದರೂ, ನಂತರ ಒಂದು ದಿನ ಇದ್ದಕ್ಕಿದ್ದಂತೆ ಮಾಯ ಆಗಿತ್ತು. ನಾಲ್ಕನೆ ಸೂಲಿನ ಒಂದು ಗಂಡು ಮರಿಯು ನಮ್ಮ ಮನೆಯಲ್ಲೇ ಉಳಿದು, ಒಂದು ವರ್ಷದಲ್ಲಿ  ತಾಯಿಹಗಿಂತ ದೊಡ್ಡದಾಗಿ ಬೆಳೆದು ಒಳ್ಳೆ ಲೀಡರ್ ಥರ ಕಾಣುತ್ತಿತ್ತು.
ಮರಿ ಬೆಳೆದು ನಾಯಿಯಾಗಿ ನಮ್ಮ ವಠಾರ ಆವರಿದಂತೆ ಕ್ರಮೇಣ ಬೇರೆಯದೇ ವಾತಾವರಣ. ನಂತರ ಒಂದೆರಡು ವರ್ಷ.
ಇಂಥ ನಾಯಿ ಸಂತತಿ ಅದು ಹೇಗೆ, ನಮ್ಮ , ಮನೆಯಿಂದ ತೆರವಾಯಿತೋ ಗೊತ್ತಿಲ್ಲ. ನಾನು ನೈಂತ್ ಆಗುವ ಹೊತ್ತಿಗೆ, ಆ ಕಪ್ಪು ನಾಯಿ ಇದ್ದಕ್ಕಿದ್ದಂತೆ ನಾ ಪತ್ತೆ ಆಗಿತ್ತು. ಎಲ್ಲೋ ವಾಹನಕ್ಕೆ ಸಿಕ್ಕಿ ಸತ್ತಿರಬೇಕು ಅಂದು ನಾವೆಲ್ಲ ನಿರಾಶೆ ಅನುಭವಿಸಿದ್ದರೆ, ಅದು ಹಾಗಾಗಿರಲಿಲ್ಲ.
ಪ್ರತೀ ಆರು ತಿಂಗಳಿಗೊಮ್ಮೆ ಒಂದಿಷ್ಟು ಮರಿಗಳ ಸಂತೆ,  ಮರಿಗಳೆಲ್ಲ ವಿಲೇವಾರಿ ಆದ ನಂತರ, ಮತ್ತೆ ಒಂದು ಗೋಲೆ ಗಂಡು ನಾಯಿಗಳ ಸಂತೆ ಬರುವುದು, ಅಮ್ಮನಿಗೂ ಇಷ್ಟ ಆಗುತ್ತಿರಲಿಲ್ಲ.
ಒಮ್ಮೆ ಹೀಗೆ ಆಚೆ ಕೇರಿಗೆ ಹೋದಾಗ ಅಲ್ಲೊಂದು ಮನೆಯ ಎದುರು ನಮ್ಮ ನಾಯಿ ಕಂಡಿತು. ಅಂತೂ ನಮ್ಮ ನಾಯಿ ಸತ್ತಿಲ್ಲ ಎಂದು ಖಾತ್ರಿ ಆಗಿ ನಿರಾಳನಾದೆ.. ಅಂದು ಬಾ ಎಂದು ಕರೆದರೂ ಬರಲೇ ಇಲ್ಲ.  ಇದ್ಯಾಕೆ ಹೀಗೆ ಮಾಡುತ್ತಿದೆ ಎಂದು ತಿಳಿಯಲಿಲ್ಲ. ಬಹುಶಃ ದೊಡ್ಡವನಾದ ಅದರ ಮಗ, ನಾವು ಹೆಚ್ಚು ಆತನನ್ನನು ಪ್ರೀತಿಸುವುದು, ಮಗನೇ ಹೆಚ್ಚು ತಿಂಡಿಯನ್ನು ನುಂಗಿ ತಾಯಿಗೆ ಹೆದರಿಸುವುದು ಮಾಡುತ್ತಿದ್ದ ಕಾರಣವೋ ಏನೋ ಅಂತೂ ಆ ಕಪ್ಪು ನಾಯಿ ನಮ್ಮ ಮನೆಯನ್ನು ಬಿಟ್ಟಿತ್ತು. ಕ್ರಮೇಣ ಅದರ  ಮಗ ವಠಾರದ ಲೀಡರ್ ಕೂಡ, ರಸ್ತೆ ರಾಜನಾಗಿ, ಎಲ್ಲೆಲ್ಲೋ ಕೋಳಿ ಬೇಟೆ ಆಡಲು ಹೋಗಿ ಕೈಕಾಲಿಗೆ ಪೆಟ್ಟು ತಿಂದು ಬರುತ್ತಿದ್ದ.ಯಾಕೋ ಕಪ್ಪು ನಾಯಿಯ ವಿಶ್ವಾಸವನ್ನು ಆತ ಹುಟ್ಟಿಸಲಿಲ್ಲ.
ಹಾಗೇ ಆ ನಾಯಿಯ ಕುಟುಂಬ ನಮ್ಮ ಮನೆಯಿಂದ ದೂರಸರಿದ ನಿರ್ದಿಷ್ಟ ಘಟನೆಗಳು ಇದೀಗ ನನಗೆ ಸ್ಪಷ್ಟ ನೆನಪಿಲ್ಲ.
ಬೇಸಿಗೆ ರಜೆಗೆ ಶಿರಸಿಗೆ ಹೋಗಿ ಬರುವಷ್ಟರಲ್ಲಿ ನಮ್ಮ ಮನೆಯಲ್ಲಿ ಈ ಬಗೆಯ ಸ್ಥಿತ್ಯಂತರ ಆಗುತ್ತಿತ್ತು. ಕೆಲವೊಮ್ಮೆ ಸಾಕು ಪ್ರಾಣಿಗಳ ಕುಟುಂಬದಲ್ಲಿ ಹೊಸ ಸದಸ್ಯರು ಸೇರ್ಪಡೆ ಆಗಿದ್ದರೆ, ಇನ್ನೂ ಕೆಲವೊಮ್ಮೆ ಕಣ್ಮರೆ ಆಗಿತ್ತಿದ್ದುದು ಇದೆ.
ಹಾಗೆ ಕಣ್ಮರೆಯಾದವುಗಳ ಪೈಕಿ ಕಪ್ಪು ನಾಯಿಯೂ ಒಂದು. ಕೊನೆ ತನಕ ಆ ನಾಯಿಗೆ ಹೆಸರನ್ನೇ ಇಡದೆ, ಬಣ್ಣದಿಂದ ಬಂದ ಹೆಸರಿನಿಂದಲೇ  ಗುರುತಿಸಿ ಕರೆದರೂ ಈಗಲೂ ನನ್ನ ಮನಸ್ಸಿನಿಂದ  ಕಪ್ಪು ನಾಯಿ ಆಚೆ ಹೋಗಿಲ್ಲ.
ನಿಜಕ್ಕೂ ಅದೊಂದು ನೀಲಿ ಕಣ್ಣಿನ ಕಪ್ಪು ಬಣ್ಣದ ಚಲೋ ನಾಯಿ.
Read More

ಹಲೋ ಒನ್‌ ಟೂತ್ರಿ ಮೈಕ್‌ ಟೆಸ್ಟಿಂಗ್‌..

ಹಲೋ ಒನ್‌ ಟೂತ್ರಿ ಮೈಕ್‌ ಟೆಸ್ಟಿಂಗ್‌..

LVK article published on 17/2/2019  
ಸದಾನಂದ ಹೆಗಡೆ
ಕಾಶಿನಾಥ್‌  ಸಿನಿಮಾ ಒಂದರಲ್ಲಿ   ಮೈಕ್‌  ಅವಾಂತರವನ್ನು  ತುಂಬ ಸುಂದರವಾಗಿ ತೋರಿಸುತ್ತಾರೆ. ಮೈಕ್‌ ಎದುರು ನಿಂತು ‘ನೀನು’ ಎಂದು ಹೇಳಿದರೆ, ಮೈಕ್‌ನಲ್ಲಿ  ‘ನಿನ್ನ್‌ ಅಪ್ಪ ’ ಎಂದು ವಾಪಸ್‌ ಬರುತ್ತದೆ. ಮೈಕ್‌ನಲ್ಲಿ  ಏನು ಹೇಳಿದರೂ ಧ್ವನಿವರ್ಧಕದಲ್ಲಿ ಅದರ ವಿರುದ್ಧವೇ ಕೇಳುತ್ತದೆ. ಸ್ಟ್ಯಾಂಡಿ ಮೈಕ್‌ ಬಿಚ್ಚಿ  ಕೈಗೆತ್ತಿಕೊಳ್ಳಲು ಹೋದಾಗ ಇಡೀ ಕಂಬವೇ ಉರುಳಿ ಬಿದ್ದು ಹೀರೋ ನಗೆಪಾಟಿಲಿಗೀಡಾಗುತ್ತಾರೆ. ಇದು ಕೇವಲ ಆ ಸಿನಿಮಾದ ದೃಶ್ಯ ಮಾತ್ರವಲ್ಲ. 
ಭಾಷಣ ಕಾರ್ಯಕ್ರಮ  ಹೇಗೋ ನಡೆದು ಗೋಗುತ್ತದೆ. ಆದರೆ ಒಳಗಿನ ಸ್ವರ ತೆಗೆದು ವಿಭಿನ್ನ ಪಿಚ್‌ಗಳಲ್ಲಿ  ಧ್ವನಿಯ ಪರಿಣಾಮ ನಿರೀಕ್ಷಿಸುವ ಸಂಗೀತಗಾರರಿಗೆ ಬಹುದೊಡ್ಡ ಸವಾಲು. ಕೆಲವರು ಮೈಕ್‌ ಕೈ ಕೊಟ್ಟಾಗ ಸಹನೆ ಕಳೆದುಕೊಂಡು ಏನæೂೕ ಒಂದಿಷ್ಟು  ಹಾಡಿ ಹೋಗುತ್ತಾರೆ. ವೇದಿಕೆಗೆ ಬಂದು, ತಾವು ತಂದ ಹಾರ್ಮೋನಿಯಂನಲ್ಲಿ  ಶ್ರುತಿ ಹೊಂದಿಸಿ, ತಬಲಾ, ಕೀ ಬೋರ್ಡ್‌, ರಿದಂ ಪ್ಯಾಡ್‌ನ ವೈಯರ್‌ ಸಂಪರ್ಕ ಸರಿ ಇದೆಯೇ ಎಂದು ಚೆಕ್‌ ಮಾಡಿ, ಸಮಸ್ಯೆ ಇದ್ದರೆ ಹೇಳಿ ಕೇಳಿ ಮಾಡಿ ಸರಿಪಡಿಸಿಕೊಳ್ಳುವವರು ಕೆಲವರಿದ್ದಾರೆ. ಅಂಥವರಲ್ಲಿ ‘ಘಮ ಘಮ ಗಮ್ಮಾಡಿಸ್ತಾವ ಮಲ್ಲಿಗೀ ’ ಖ್ಯಾತಿಯ ಸಂಗೀತಾ ಕಟ್ಟಿ  ಕೂಡ ಒಬ್ಬರು.
ಇತ್ತೀಚೆಗೆ ದಾವಣಗೆರೆಯಲ್ಲಿ  ಏರ್ಪಡಿಸಿದ್ದ  ಸಿರಿಧಾನ್ಯ ಪ್ರಚಾರ ಕಾರ್ಯಕ್ರಮದಲ್ಲಿ  ಹೀಗೆಯೇ ಆಯಿತು. ಆರಂಭಿಕ ತಡವಡ ಬಳಿಕ ‘ತಂದೆ ನೀನು ತಾಯಿ ನೀನು ’ ವಚನವನ್ನು ಹಾಡುತ್ತಲೇ ‘ಮೈಕ್‌ ಟೆಸ್ಟ್‌’ ಗೇ ಬರೋಬ್ಬರಿ 25 ನಿಮಿಷ ಹಿಡಿಯಿತು. !  ಪಲ್ಲವಿ ಮಧ್ಯೆ ‘ಔಟ್‌ ಪುಟ್‌ ಸರಿಮಾಡಿ’ ಎಂದು, ಚರಣದ ಕೊನೆಗೆ ‘ ಹಿಂದಿನ ಸ್ಪೀಕರ್‌ಗೆ ವಾಲ್ಯೂಮ್‌ ಕೊಡಿ..’ ಇನ್ನೊಮ್ಮೆ.. ಮಾನೀಟರ್‌ ಸೌಂಡ್‌ ಕಡಿಮೆ ಮಾಡ್ರಿ.. ಎನ್ನುತ್ತಲೇ ಹಾಡಿದರು. ನಡುವೆ ಸಹನೆ ಕಳೆದುಕೊಳ್ಳುವ ಪ್ರೇಕ್ಷಕರಿಗೆ ‘ರೆಕಾರ್ಡಿಂಗ್‌ ಬ್ಯಾರೆ, ಸ್ಟೇಜ್‌ ಕಾರ್ಯಕ್ರಮದ ಸಮಸ್ಯೆ ಬ್ಯಾರೆæ’ ಎಂದು  ಮನವಿ ಮಾಡಿದರು. 
ಹಾಡುಗಳ  ಕಾರ್ಯಕ್ರಮಕ್ಕೂ  ಮೈಕ್‌ ಸಮಸ್ಯೆಗೂ ಅವಿನಾಭಾವ ಸಂಬಂಧ ಎಂಬಂತಿದೆ. ಯಂತ್ರದ ವ್ಯವಸ್ಥೆ ಸರಿ ಇದ್ದರೆ ಮೈಕ್‌ ತಂತ್ರಜ್ಞರು ಸರಿ ಇರುವುದಿಲ್ಲ. ಮೈಕ್‌ ಸೆಟ್‌ ಮಾಡಿ ತಂತ್ರಜ್ಞರು ಎಲ್ಲೋ ಕುಳಿತು ಮೊಬೈಲ್‌ ನೋಡುತ್ತಿರುತ್ತಾರೆ. ಎಲ್ಲ ಕಡೆ ಬಟನ್‌ಗಳೇ ಆನ್‌ ಆಗಿರುವುದಿಲ್ಲ. ರಸಮಂಜರಿಯಲ್ಲಿ  ನಿರೂಪಕರಿಗೆ ಕೊಡುವ  ಕಾರ್ಡ್‌ ಲೆಸ್‌ ಮೈಕ್‌ಗಳಿಗೆ  ಮೊಡೆಮ್‌ ಸಿಗ್ನಲ್‌ ಸಮಸ್ಯೆ ಅಥವಾ ಬ್ಯಾಟರಿ ಸೆಲ್‌  ರೋಗಗ್ರಸ್ಥ. ಇನ್ನು ಹೊತ್ತು ಗೊತ್ತಿಲ್ಲದ ಹಮ್ಮಿಂಗ್‌ ಎಂಬುದು  ಮೈಕ್‌ ಯಂತ್ರ ಹುಟ್ಟಿದಾಗಿನಿಂದ ಇರುವ ಸಮಸ್ಯೆಇರಬೇಕು. ಅದೇನೋ ಸ್ವಾರಸ್ಯ ಹೇಳುವಾಗ ಕೊಯ್‌ಂ  ಎಂದು.. ಕುರುಕ್ಷೇತ್ರದಲ್ಲಿ  ಅಶ್ವತ್ಥಾಮ ಹತ .. ಎನ್ನುತ್ತಲೇ ಶ್ರೀ ಕೃಷ್ಣನ ಪಾಂಚಜನ್ಯ ಮೊಳಗುವ ರೀತಿಯ ಹಮ್ಮಿಂಗ್‌ ! ಆಗಾಗ ಕೇಳುಗರ ಪ್ರಾಣವನ್ನೇ ತೆಗೆಯುತ್ತದೆ.
  ಕೆಲವೆಡೆ ಸಭಾ ಭವನಗಳು ಧ್ವನಿ ನಿಯಮಕ್ಕೆ ಹೊಂದಿಕೊಳ್ಳುವುದಿಲ್ಲ.  ಮೈಕ್‌ ಸರಿ ಇದ್ದರೆ, ಸ್ಪೀಕರ್‌ ಸರಿ ಇರುವುದಿಲ್ಲ, ಎರಡೂ ಸರಿ ಇದ್ದರೆ, ಜೋಡಣೆಯ ವೈರ್‌ ಸಾಮರ್ಥ್ಯ‌ ಸಾಕಷ್ಟು ಇರುವುದಿಲ್ಲ. ಮಾರುಕಟ್ಟೆಗೆ ಒಂದಾದ ನಂತರ ಇನ್ನೊಂದು ಆವೃತ್ತಿಯ ಸುಸಜ್ಜಿತ ಮ್ಯೂಸಿಕ್‌ ಸಿಸ್ಟ್‌ಮ್‌ಗಳು ಬರುತ್ತಿದ್ದು, ಅದರ ನಿರ್ವಹಣೆ, ರಿಪೇರಿಗೆ ಇಂಜಿನೀಯರ್‌ಗಳೇ ಸಿಗುವುದಿಲ್ಲ.  ಅರ್ಧಮರ್ಧ ಓದಿದವರು ಯಾರದ್ದೋ ಮೈಕ್‌ನಲ್ಲಿ , ಯಾರದ್ದೋ ಸ್ಟೇಜ್‌ ಶೋದ  ಎರವಲು ಸಮಯದಲ್ಲಿ ಮೈಕ್‌ ರಿಪೇರಿ ಕೆಲಸದ  ತರಬೇತಿಯನ್ನು ಪಡೆದುಕೊಳ್ಳುತ್ತಾರೆ !  ವಾಹನ ಚಲಾಯಿಸುವ ಡ್ರೈವರ್‌ಗಳು, ಧ್ವನಿ ವರ್ಧಕ ಇಳಿಸು ಹತ್ತಿಸಿ ಮಾಡುವ ಕಾರ್ಮಿಕರು ಸಭಾ ಕಾರ್ಯಕ್ರಮ ಶುರುವಾಗುತ್ತಲೇ ಮೈಕ್‌ ಮಿಕ್ಸರ್‌ ಎದುರು ಬಂದು ಕುಳಿತು ಕಸುಬು ಕಲಿಯುತ್ತಾರೆ. ಎಲ್ಲ ಉದ್ಯಮಗಳಂತೆ ಮೈಕ್‌ ಉದ್ಯಮಿಗಳಿಗೆ ಬಂಡವಾಳ ರಿಟರ್ನ್‌ ಪಡೆಯುವುದೇ ಸವಾಲು. ಸಾಗಾಟ ಸಂದರ್ಭ ಯಂತ್ರಗಳು ಕೈ ಕೊಡುತ್ತವೆ. ದೊಡ್ಡ ಮೊತ್ತ ಹೇಳಿದರೆ ಸಂಘಟಕರು ಇನ್ನೊಮ್ಮೆ ಕರೆಯುವುದಿಲ್ಲ.  ಮೈಕ್‌ ಉದ್ಯಮವು ನುರಿತ ಮಾನವ ಸಂಪನ್ಮೂಲದಿಂದ ಬಳಲುತ್ತಿದ್ದು, ಹತ್ತು ಇಪ್ಪತ್ತು ವರ್ಷತಾಲೀಮು ನಡೆಸುವ ಸಂಗೀತಗಾರರಿಗೆ ನಾಲ್ಕಾರು ತಿಂಗಳು ಕೆಲಸಕ್ಕಾಗಿ ಬರುವ ಹಡ್ಡೆ ಹುಡುಗರು ಮೈಕ್‌ ತಂತ್ರಜ್ಞರಾಗಿ ಸಂಭಾಳಿಸಬೇಕಿದೆ.
ಇನ್ನು ಕಾರ್ಪೋರೇಟ್‌ ವ್ಯವಸ್ಥೆಯಲ್ಲಿ ಮೈಕ್‌ ನವರು ತಾವೇ ಕಲಾವಿದರಿಗಿಂತ ದೊಡ್ಡವರು ಎಂದು ಎಂದುಕೊಳ್ಳುತ್ತಾರೆ. ಕಲಾವಿದರಿಗೂ ಮೈಕ್‌ ತಂತ್ರಜ್ಞಾನದ ಅರಿವು ಇರುವುದಿಲ್ಲ.  ಹೀಗಾಗಿ ದೊಡ್ಡ ಕಲಾವಿದರ ಸ್ಟೇಜ್‌ ಸಂಗೀತ ಕಾರ್ಯಕ್ರಮ ಎಂದರೆ, ಮೈಕ್‌ ರಿಪೇರಿ ಶರತ್ತುಗಳು ಅನ್ವಯಿಸುತ್ತವೆ ಎಂದೇ ತಿಳಿದುಕೊಳ್ಳಬೇಕು.

-ಕೋಟ್‌-

ಮೈಕ್‌ ಹುಡುಗರಿಗೆ ಏನೂ ಗೊತ್ತೇ ಇರುವುದಿಲ್ಲ.
ಲೈವ್‌ ಸಂಗೀತ ಕಾರ್ಯಕ್ರಮದಲ್ಲಿ  ಸೌಂಡ್‌ ಇಂಜಿನೀಯರ್‌ ಹಾಕೋದು ಮಸ್ಟ್‌. ಆದರೆ ಹಾಗಾಗುತ್ತಿಲ್ಲ. ಸೌಂಡ್‌ ಸಿಸ್ಟ ಮ್‌ ಉದ್ಯಮಿಗಳು ಸೂಕ್ತ ತಂತ್ರಜ್ಞರನ್ನು  ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ. ಬಟನ್‌ ತಿರುಗಿಸುವ ಹುಡುಗರಿಗೆ ಏನೂ ಅಂದ್ರೆ ಏನೂ ಗೊತ್ತೇ ಇರುವುದಿಲ್ಲ.  ಇದೆಲ್ಲ  ಸಮಸ್ಯೆ ಬೇಡ ಎಂದು ಕೆಲವು ಜಾಣ ಹಾಡುಗಾರರು ಟ್ರ್ಯಾಕ್‌ ಹಾಕಿಕೊಂಡು ಪ್ರೇಕ್ಷಕರ ಎದುರು ಹಾಡಿದಂತೆ ಮಾಡುವ ತಪ್ಪು ಮಾರ್ಗಕ್ಕೂ ಇಳಿಯುತ್ತಿದ್ದಾರೆ.
ಈ ಸಮಸ್ಯೆಯನ್ನು  ಎಸ್‌ಪಿ ಬಾಲಸುಬ್ರಹ್ಮಣ್ಯಂ ತುಂಬ ಜಾಣತನದಿಂದ ನಿರ್ವಹಿಸುತ್ತಾರೆ. ಇತ್ತೀಚೆಗೆ ಮನ್ನಾಡೆ ಸಂಬಂಧಿಸಿದ ಕಾರ್ಯಕ್ರಮ ಒಂದರಲ್ಲಿ  ಮಾತಿನ ನಡುವೆ ಹಾಡೊಂದನ್ನು ಹಾಡಿ ತೋರಿಸಲು ನಿಂತಾಗ ಮೈಕ್‌ ಸರಿಹೊಂದಲಿಲ್ಲ. ಹಾಡೋದನ್ನು  ನಿಲ್ಲಿಸಿದ ಎಸ್‌ಪಿಬಿ, ಮೈಕ್‌ ಹುಡುಗರಿಗೆ ‘ನೋಡಪ್ಪ  ಇಕ್ಯು ತುಸು ಜಾಸ್ತಿ ಮಾಡು, ಬಾಸ್‌ ಕಡಿಮೆ ಮಾಡು’’ ಎಂದು ಹೇಳಿ ಸರಿ ಮಾಡಿಸಿಕೊಂಡು ಮತ್ತೆ ಮುಂದು ವರಿಸಿದರು. ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.
***



Read More