ಲಿಂಬು ಹಣ್ಣಿನ ಬದಲು ಲಿಂಬೂ ಫ್ಲೇವರ್ ಬಳಸಿದರೆ ಹೇಗೆ

ಮೌಡ್ಯ ನಿಷೇಧ ಕಾಯಿದೆ ತರಲು ಪ್ರಯತ್ನಿಸಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ತಮ್ಮ ಅವಧಿಯ ಕೊನೆ ಹಂತದಲ್ಲಿ  ಮಂತ್ರಿಸಿದ ನಿಂಬೆಹಣ್ಣು  ಹಿಡಿದು ಓಡಾಡತೊಡಗಿದ್ದರು. ಹೀಗಿರುವಾಗ ಹುಟ್ಟಾ ದೈವ ಬೀರುಗಳಾದ ಹಾಲಿ ಸಚಿವ ಎಚ್.ಡಿ. ರೇವಣ್ಣ , ಮಾಜಿ ಪ್ರಧಾನಿ ದೇವೇಗೌಡರ ಟೀಕಿಸಿ ಫಲವೇನು ?
ಅಧಿಕಾರದಲ್ಲಿ ಉಳಿಯಲು ಮೌಢ್ಯಾರಾಧ ಮಾಡುತ್ತಾರೆ ಎಂದು ಸುಲಭವಾಗಿ ರಾಜಕಾರಣಿಗಳನ್ನು ಟೀಕಿಸುವುದಕ್ಕಿಂತ, ಇದಕ್ಕೆಲ್ಲ ಬೇರಾವುದಾದರೂ ಪರಿಹಾರ ಇದೆಯೇ ಎಂಬ ಆಲೋಚನೆಯನ್ನು ಮಾಡಬಹುದಲ್ಲ. ಅಂಥ ಪ್ರಯತ್ನದಲ್ಲಿ ನನಗೆ ಕೆಲವು ವಿಚಾರ ಹೊಳೆಯುತ್ತಿದೆ.
ಮನೆಯಿಂದ ಹೊರ ಬರುವಾಗ ಹಿಡಿದುಕೊಳ್ಳಲು ಕಷ್ಟವಾಗುವ ಲಿಂಬು ಬದಲು, ಲಿಂಬುವಿನ ಫ್ಲೇವರ್ ಇರುವ ಸುಗಂಧ ಯಾಕೆ ಬೇಡ. ಮಂತ್ರವಾದಿಗಳೂ ಕೂಡ ಲಿಂಬೆಹಣ್ಣು ಮಂತ್ರಿಸಿಕೊಡುವ ಬದಲು, ಲಿಂಬೂ ಫ್ಲೇವರ್ ಇರುವ ಸುಗಂಧ ದೃವ್ಯದ ಬಾಟಲಿಗೇ ಪೂಜೆ ಮಾಡಿ ಕೊಟ್ಟರೆ ಸಾಧ್ಯ ಇಲ್ಲವೇ ? ಜತೆಗೆ ಲಿಂಬೂ ಪರಿಮಳ ಇರುವ ಸೋಪಿನಿಂದ ಸ್ನಾನ ಮಾಡಿ ಬಂದು ಸುತ್ತಲೂ ಸುಳಿಯುವ ಆಪ್ತರಿಗೆ ಹಾಗೂ ಗೊತ್ತಾಗದಂತೆ ಸುಳಿಯುವ ದುಷ್ಟ ಶಕ್ತಿಗಳಿಗೂ ಪರಿಮಳದ ರಕ್ಷಣಾ ಕವಚ ನಿರ್ಮಿಸಿಕೊಂಡರೆ ತಪ್ಪೇನು. ಅಥವಾ ಮಂತ್ರಿಸಿದ ಲಿಂಬೂ ಪರಿಮಳದ ಕೇಶ ತೈಲ ಬಳಸಿ, ಮಂತ್ರ ಲಿಂಬೂ ಕೊಡಬಹುದಾದ ಶತ್ರುನಾಶ, ಕೀಳು ನಿವಾರಣೆ, ಶಕ್ತಿ ಸಂಚಯ ಸಾಧ್ಯ ಇಲ್ಲವೇ ?
ಒಂದು ವೇಳೆ ಇದು ಸಾಧ್ಯವಾದರೆ  ಕೆಲವು ಸಾರ್ವಜನಿಕ ನಾಯಕರ ಮೈ ಹಾಗೂ ಬಾಯಿ, ಬಟ್ಟೆ ಬರೆ ವಾಸನೆ ನಿವಾರಣೆಯ ಅನುಕೂಲತೆ ಸಾರ್ವಜನಿಕರಿಗೆ ಲಭಿಸುತ್ತದೆ. ಕೆಲವರು ಸರಿಯಾಗಿ ಸ್ನಾನ ಮಾಡದೆ ಅಥವಾ ಬಾಯಿಯಿಂದ ಬರುವ ದುರ್ವಾಸನೆಯಿಂದ ಅಕ್ಕ ಪಕ್ಕದವರನ್ನು ಹೈರಾಣು ಮಾಡುತ್ತಾರೆ.
ಸ್ಪರ್ಧಾತ್ಮಕ ರಾಜಕಾರಣದಲ್ಲಿ ಹಿತ ಶತ್ರು, ಬಹಿರಂಗ ಶತ್ರುಗಳನ್ನು ಸಾಧ್ಯವಾದ ಎಲ್ಲ ರೀತಿಯಲ್ಲೂ ಎದುರಿಸುವುದು ಅನಿವಾರ್ಯ ನಿಜ. ಅದಕ್ಕೆ ಸುಗಂಧಾಸ್ತ್ರವಾಗಿ ಅತ್ಯಂತ ಪುರಾತನವಾದ ಲಿಂಬುವಿನ ಪರಿಷ್ಕೃತ ರೂಪವಾದ ಲಿಂಬೂ ಸುಗಂಧವನ್ನು ಪುರೋಹಿತರಿಂದ ಮಂತ್ರಸಿಕೊಂಟ್ಟರೆ  ಜನಪ್ರಿಯ ವ್ಯಕ್ತಿಗಳು ನಗೆಪಟಲಿಗೀಡಾಗುವ ಪ್ರಸಂಗ ತಪ್ಪು ತ್ತದೆ.
ದೇವರ ಮನೆಯಲ್ಲಿ ಸುಗಂಧ ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತು. ಭಸ್ಮದ ನಿಜ ರೂಪಕ್ಕಿಂತ ಸುಗಂಧ ಒಳಗೊಂಡ ವಿಬೂತಿ ಉಂಡೆಯನ್ನು ಪೂಜಾರಿಗಳೆ ರೆಕಮೆಂಡ್ ಮಾಡುತ್ತಾರೆ. ಹಾಗೆಯೇ ಕುಂಕುಮ/ಅರಿಷಿಣ ಕರ್ಪೂರ ಎಲ್ಲವೂ ತನ್ನ ಪರಿಮಳದ ಕಾರಣಕ್ಕೂ ದೈವಾಂಶ ಹೊಂದಿದೆ.
ಇನ್ನು ಸುಗಂಧಗಳು ನಮ್ಮ ಮನಸ್ಸಿನ ಮೇಲೆ ಬೀರುವ ಪರಿಣಾಮ ಅಥವಾ ಮೂಡು ತರಿಸುವ ಶಕ್ತಿ ಬಗ್ಗೆ ಸಾಕಷ್ಟು ಸಂಶೋಧನೆ ಹಾಗೂ ಸಾಹಿತ್ಯವೂ ಬಂದಿದೆ.  ಇದೆಲ್ಲ ವನ್ನು ಲಕ್ಷದಲ್ಲಿಟ್ಟುಕೊಂಡು,  ರಾಜಕಾರಣಿಗಳು ತಮ್ಮ ಲಿಂಬೂಹಣ್ಣು ಹಿಡಿದುಕೊಳ್ಳುವ ಪರಂಪರೆಗೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಅವಕಾಶ ಇದೆ.
ಎಷ್ಟು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದರೂ ಕೈಯಲ್ಲಿ ನಿಲ್ಲದೆ ಜಾರಿ ಹೋಗುವ ಲಿಂಬು ಬದಲು, ಮೈಗೆ ಲೇಪಿಸುವ ಲಿಂಬೂ ಸುಗಂಧವು  ಕೈ ಎತ್ತಿ ಮಾತಾಡುವಾಗ ಇತರ ರ ಕಣ್ಣಿಗೆ ಬಿದ್ದು  ಅಥವಾ ಕಾರು ಏರುವಾಗ ಕೈ ತಪ್ಪಿ ಚೆಂಡಿನಂತೆ ಟಣ್ ಎಂದು ಉರುಳಿ ಟೀವಿ ಕ್ಯಾಮೆರಾಗಳಿಗೆ ಆಹಾರಾವಾಗುವುದು ತಪ್ಪುತ್ತದೆ. ಜತೆಗೆ ನಗರದ ಸ್ಲಂಗಳು, ಹಳ್ಳಿಗಾಡಿನ ಕಪ್ಪು ಕಡವಾರಗಳನ್ನು ದಾಟುತ್ತ, ಮಾನಸಿಕವಾಗಿ ಚಿತ್ರ ವಿಚಿತ್ರ ಸಂಕಟ ಅನುಭವಿಸುವ ಜನ ನಾಯಕರಿಗೆ ಲಿಂಬೂ ಫ್ಲೇವರ್ ಖಂಡಿತಕ್ಕೂ ಚೇತೋಹಾರಿ.
ದೇಹ ನೈರ್ಮಲ್ಯ ದ ಜತೆ ನಮ್ಮ ಸುತ್ತಲಿನ ಪರಿಸರದ ದುಷ್ಟರು, ಕೊಳಕರು, ಹಿತ ಶತ್ರುಗಳು, ಮಾನಸಿಕ ಸಮ್ಮೋಹಿನಿಗೂ ಮಾನಸಿಕ ರಕ್ಷಣಾ ಅಸ್ತ್ರವಾಗಿ ಲಿಂಬೂ ಬಳಸುವುದು ಬಾರತದಲ್ಲಿ ಮಾತ್ರ ಅಲ್ಲ. ಗಜತ್ತಿನ ಎಲ್ಲೆಡೆ ಇದ್ದು,  ಇದು ರಾಜಕಾರಣಿಗಷ್ಟೇ ಸೀಮಿತವೂ ಅಲ್ಲ.  ಮನೋಮಯವಾದ ದುಷ್ಟ ಶಕ್ತ, ಶತ್ರು ನಾಶಕ್ಕಾಗಿ ಲಿಂಬು ಬಳಕೆ ವ್ಯಾಪಕವಾಗಿದೆ. ಅಮವಾಸ್ಯೆ ದಿನ ಲಿಂಬುವನದನು ಕತ್ತರಿಸಿ ಮನೆ ಬಾಗಿಲಿನಲ್ಲಿ ಇಡುವುದು. ವಾಹನ ಪೂಜೆ ಸಂದರ್ಭದಲ್ಲಿ ಲಿಂಬು ಮೇಲೆ ಟಯರ್ ಹರಿಸಿ ಒಡೆಯುವುದು...ಇತ್ಯಾದಿಗಳನ್ನು  ಲೆಕ್ಕಕ್ಕೆ ತೆಗೆದುಕೊಂಡರೆ ನಮಗೆ ಇದೆಲ್ಲದರ ಹೊಸ ನಿರ್ವಚನ ಸಿಗುತ್ತದೆ. ಹೀಗಿರುವಾಗ ರಾಜಕಾರಣಿಗಳು, ಹಾಗೂ ಅವರ ಲಿಂಬೂ ಮಂತ್ರವಾದಿಗಳು ಹೂವಿನ ಬದಲು ಅದರ ಪರಿಮಳ ಸೇವಿಸುವ ದೇವರಂತೆ, ಲಿಂಬೂ ಬದಲು ಅದರ ಪರಿಮಳವನ್ನು ದುಷ್ಟ ಶಕ್ತಿಗಳ ಅಸ್ತ್ರವಾಗಿ ಬಳಸಿದರೆ, ಓಡಾಟದ ಜೀವನದಲ್ಲಿ ಹೆಚ್ಚು ಪ್ರಾಯೋಗಿಕ ಎಂದು ನನ್ನ  ಅನ್ನಿಸಿಕೆ.
-ಸದಾನಂದ ಹೆಗಡೆ -9343402497,@hargi33@gmail.com

Related Posts
Previous
« Prev Post

1 ಕಾಮೆಂಟ್‌(ಗಳು)

ಅನಾಮಧೇಯ
ಫೆಬ್ರವರಿ 3, 2022 ರಂದು 12:19 ಪೂರ್ವಾಹ್ನ ಸಮಯಕ್ಕೆ

fanduel casino login - vidl.cc
fanduel casino login · Fanduel casino login · Fanduel casino login · Fanduel casino login · youtube mp4 Fanduel casino login · Fanduel casino login · Fanduel casino login

Reply
avatar